ಕವನ: ಸ್ವಾರ್ಥ

Must Read

ಸ್ವಾರ್ಥ

ಗದ್ದುಗೆಯೇರಲು
ಹಣವನು ಎಸೆಯಿತು
ಗಳಿಕೆಯ ತೃಷೆಯಲಿ
ನಶೆಯ ನೀಡಿತು
ಸ್ವಾರ್ಥದ ಮತವನು ಮುತ್ತಿ

ಸಲಿಗೆಯ ಸುಲಿಗೆ ಮಾಡುತ
ಒಸರುವ ಬೆವರಿನ
ಬುತ್ತಿಯ ಕಟ್ಟಿತು
ನೆತ್ತರು ಹಿಚುಕಿ,ನೆಕ್ಕಿ ಕಾಡಿತು
ಕತ್ತಲು ಮುಕ್ಕಿ

ಅನುದಿನ ಮತ್ತಿನಲಿ
ಅಮೃತ ತುತ್ತಿನಲಿ
ಕಡಲಾದರೂ ಕುಡಿದು,
ಗತ್ತಿನಲಿ-ವಿಗತಿಯೆಡೆಗೆ
ಒಂದನ್ಹತ್ತು ಸೇರಿಸಿತು

ಸುಖದ ತಿರುಳ ಸವಿಯುತ
ಸೇವಕನೆಂಬುದ ಮರೆಯಿತು
ಅಡಿಗೊಮ್ಮೆ ಜೊಳ್ಳ ನುಡಿದು,
ಪರರ ಬಾದೆಯನರಿಯದೆ
ನ್ಯಾಯ ನೀತಿ ಮಾತಾಡಿತು

ಕೃತಕ ಕೀರ್ತಿಯ ಪಡೆಯಿತು
ವಿಕೃತ ಸೊಗದಲಿ ಹಾಡಿತು
ಸುಕೃತ ಭಾವವಿರದೆ
ಅಂಬರವೇರಿ
ಕೈ ಬೀಸಿ ಕರಗಿತು

ಯಾರೋ ಬಿತ್ತಿದ ಬೀಜ
ಹೂ-ಕಾಯಿಗಳ ಬಿಡದೆ ತಿಂದು,
ಒಳಗು ಹೊರಗೂ
ಗಿಡದ ಬುಡದ
ನೆರಳೂ ಬಿಡದೆ,ದೈತ್ಯ ಹುಳುವಾಗಿ ಮೆರೆಯಿತು.


ಶರಶ್ಚಂದ್ರ ತಳ್ಳಿ ಕುಪ್ಪಿಗುಡ್ಡ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group