spot_img
spot_img

ಕವನ: ಸ್ವಾರ್ಥ

Must Read

- Advertisement -

ಸ್ವಾರ್ಥ

ಗದ್ದುಗೆಯೇರಲು
ಹಣವನು ಎಸೆಯಿತು
ಗಳಿಕೆಯ ತೃಷೆಯಲಿ
ನಶೆಯ ನೀಡಿತು
ಸ್ವಾರ್ಥದ ಮತವನು ಮುತ್ತಿ

ಸಲಿಗೆಯ ಸುಲಿಗೆ ಮಾಡುತ
ಒಸರುವ ಬೆವರಿನ
ಬುತ್ತಿಯ ಕಟ್ಟಿತು
ನೆತ್ತರು ಹಿಚುಕಿ,ನೆಕ್ಕಿ ಕಾಡಿತು
ಕತ್ತಲು ಮುಕ್ಕಿ

ಅನುದಿನ ಮತ್ತಿನಲಿ
ಅಮೃತ ತುತ್ತಿನಲಿ
ಕಡಲಾದರೂ ಕುಡಿದು,
ಗತ್ತಿನಲಿ-ವಿಗತಿಯೆಡೆಗೆ
ಒಂದನ್ಹತ್ತು ಸೇರಿಸಿತು

- Advertisement -

ಸುಖದ ತಿರುಳ ಸವಿಯುತ
ಸೇವಕನೆಂಬುದ ಮರೆಯಿತು
ಅಡಿಗೊಮ್ಮೆ ಜೊಳ್ಳ ನುಡಿದು,
ಪರರ ಬಾದೆಯನರಿಯದೆ
ನ್ಯಾಯ ನೀತಿ ಮಾತಾಡಿತು

ಕೃತಕ ಕೀರ್ತಿಯ ಪಡೆಯಿತು
ವಿಕೃತ ಸೊಗದಲಿ ಹಾಡಿತು
ಸುಕೃತ ಭಾವವಿರದೆ
ಅಂಬರವೇರಿ
ಕೈ ಬೀಸಿ ಕರಗಿತು

ಯಾರೋ ಬಿತ್ತಿದ ಬೀಜ
ಹೂ-ಕಾಯಿಗಳ ಬಿಡದೆ ತಿಂದು,
ಒಳಗು ಹೊರಗೂ
ಗಿಡದ ಬುಡದ
ನೆರಳೂ ಬಿಡದೆ,ದೈತ್ಯ ಹುಳುವಾಗಿ ಮೆರೆಯಿತು.

- Advertisement -

ಶರಶ್ಚಂದ್ರ ತಳ್ಳಿ ಕುಪ್ಪಿಗುಡ್ಡ

- Advertisement -
- Advertisement -

Latest News

‘Silent killer’ ಎಂದು ಕರೆಯಲ್ಪಡುವ ಒಂದು ಹಾವುಂಟು !

ಈ ಹಾವನ್ನು ಈ ರೀತಿ ಕರೆಯಲು ಹಲವು ಕಾರಣಗಳುಂಟು. ಈ ಹಾವು ರಾತ್ರಿ ವೇಳೆಯಲ್ಲಿಯೇ ಹೆಚ್ಚು ಓಡಾಟ ಮಾಡುವುದು (ನಿಶಾಚರಿ). ಮತ್ತೆ ಈ ಹಾವು ಮನುಷ್ಯರಿಗೆ...
- Advertisement -

More Articles Like This

- Advertisement -
close
error: Content is protected !!
Join WhatsApp Group