ಕವನ: ನಿತ್ಯ ಸತ್ಯ

Must Read

ನಿತ್ಯ ಸತ್ಯ

ಸಮಾರಂಭದಿ ಭರದಿಂದ ಸಾಗುತ್ತಿದ್ದೆ ಮುಂದೆ
ನಾಲ್ಕಾರು ಜನ ಜಗ್ಗಿದರೆನ್ನ ಹಿಂದೆ/
ತಿರುಗಿ ನೋಡಿದಾಗ ಅನಿಸಿದ್ದು ನಂಗೆ
ನಾನೂ ದೊಡ್ಡ ಕಾರಿನಲ್ಲಿ ಬರಬೇಕಿತ್ತು ಹಿಂಗೆ//

ಅಂದುಕೊಂಡಿದ್ದೆ ಆಸ್ತಿಪಾಸ್ತಿ ಏತಕ್ಕೆಂದು
ಕಷ್ಟ ತಿಳಿಸಿತು ಹಣದ ಮಹತ್ವವೇನೆಂದು/
ಗೊತ್ತು ಕಾಂಚಾಣವೇನೂ ಜೀವ ಉಳಿಸಲ್ಲವೆಂದು
ಆದರೆ ಶುಶ್ರೂಷೆ ಸಿಗಬೇಕಲ್ಲ ಆಸ್ಪತ್ರೆಯಲಿಂದು//

ತಿಳಿದಿದ್ದೆ ನಾ ವ್ಯಕ್ತಿತ್ವವೇ ಮುಖ್ಯವೆಂದು
ತಿಳಿಸಿತು ಸಮಾಜ ಸಂಪತ್ತೂ ಅಗತ್ಯವೆಂದು/
ಮತಿಯಲಿತ್ತು ಹುದ್ದೆ ಹೆಸರು ನನಗ್ಯಾಕೆಂದು
ಜಗತ್ತು ತಿಳಿಸಿತು ಜೀವನದಿ ಎಲ್ಲ ಬೇಕೆಂದು//

ಮದ್ದಾನೆಗಳ ಸೊಕ್ಕಡಗಿಸಲಿಂದು
ಚುಚ್ಚಿರಲು ಕಾಲಿಗೆ ಮುಳ್ಳೊಂದು
ಮದ್ದಾನೆಯೇ ಬೇಕು ಮತ್ತೊಂದು/
ತೆಗೆಯಲು ಮುಳ್ಳೇ ಬೇಕು ಮತ್ತೊಂದು//

ಹೇಳಿತು ಮನ ಉಸಿರು ನಿಲ್ಲುವ ಮುನ್ನ
ನಿನ್ನ ಹೆಸರು ಉಳಿಸೆಂದು/
ಮಣ್ಣ ಸೇರಿದ ಮೇಲೂ
ನೆಲದಿ ಉಳಿಯಲಿ ಕೀರ್ತಿ ಎಂದೆಂದೂ//

ಅಂತೆಯೇ ಮಾಡಬೇಕಿದೆ ಜನ ಸೇವೆಯಿಂದು
ಅದಕಾದರೂ ಬೇಕು ಕಾಸು,ಹೈಕ್ಲಾಸು ಇಂದು/
ಬರೀಗೈಲಿ ಹೊರಟರೆ ಬರುವರ್ಯಾರಿಂದು
ಕುರುಡು ಕಾಂಚಾಣವೇ ಮೆರೆಯುತಿದೆ ಇಂದು//


ಶ್ರೀಮತಿ ಜ್ಯೋತಿ ಸಿ ಕೋಟಗಿ, ಶಿಕ್ಷಕಿ
ಸ.ಮಾ.ಪ್ರಾ. ಶಾಲೆ ತಲ್ಲೂರ

Latest News

ಕವನ : ಸಮಾನತೆಯ ಬೆಳದಿಂಗಳ ಪಲ್ಲವಿ

ಸಮಾನತೆಯ ಬೆಳದಿಂಗಳ ಪಲ್ಲವಿಭಾರತಾಂಬೆಗೆ ಹೊನ್ನ ಕಿರೀಟವಿದು ಸರಳ ಸಂವಿಧಾನ ನಮ್ಮ ಸಂವಿಧಾನಪೀಠಿಕೆಯ ಪರಿಧಿಯಲಿ ಜಾತ್ಯತೀತ,ಬ್ರಾತೃತ್ವ, ಸಮಾಜವಾದಿ ಸಾರ್ವಭೌಮತೆ,ಗಣತಂತ್ರ ನ್ಯಾಯ, ಸಮಾನತೆ ಸ್ವಾತಂತ್ರ್ಯದ ದುಂದುಭಿ ಜೀವದಾಯಿನಿ ಇದು ಭಾರತದ ಪಾಲಿಗೆ ಮುಕ್ತಿದಾಯಿನಿ ಇದು ದಾಸ್ಯದ ಸಂಕೋಲೆಗೆ ನಮ್ಮ ಸಂವಿಧಾನ ನಮಗೆ ಸುವಿಧಾನಲಿಖಿತವೂ ಧೀರ್ಘವೂ ಭಾರತಕ್ಕಿದು ಮಾರ್ಗವು ಅಸಮಾನತೆಯ...

More Articles Like This

error: Content is protected !!
Join WhatsApp Group