ಕವನ: ಶುಭ ಸಿಂಚನವಾಗಲಿ

Must Read

ಶುಭ ಸಿಂಚನವಾಗಲಿ

ನವರಾತ್ರಿ ಕಳೆದು
ನವೋಲ್ಲಾಸ ತಳೆದು
ಸತ್ಯ, ಧರ್ಮಕೆ ಜಯ ಎಂದೆಂದೂ
ಸಾರುತ ಬಂದಿದೆ ದಸರಾ ಇಂದು

ಶ್ರೀರಾಮನಿಂದ ರಾವಣನ ಹರಣ
ಆದಿಶಕ್ತಿಯಿಂದ ರಾಕ್ಷಸರ ಸಂಹರಣ
ದುಷ್ಟರ ಸಂಹಾರ, ಶಿಷ್ಟರ ಉದ್ಧಾರ
ಸಾರ್ವಕಾಲಿಕ ಸತ್ಯ, ಪುರಾಣಗಳೇ ಇದಕೆ ಆಧಾರ

ಸದಾ ಸಜ್ಜನರ ಸಹವಾಸ
ಬೀರುತ ಮೊಗದಿ ಮಂದಹಾಸ
ತುಂಬಿರಲಿ ಮನದಿ ಪ್ರೀತಿ ವಿಶ್ವಾಸ
ಅರಿತು ನಡೆದೊಡೆ ಬಾಳೇ ಸಂತಸ

ದುಷ್ಕೃತ್ಯಕೆ ಶಿಕ್ಷೆ, ಸತ್ಕಾರ್ಯಕೆ ರಕ್ಷೆ
ಇದುವೇ ವಿಜಯದಶಮಿ ಹಬ್ಬದ ಆಕಾಂಕ್ಷೆ
ಶುಭ ಸಿಂಚನವಾಗಲೆಂಬುದೆನ್ನ ಅಪೇಕ್ಷೆ
ವಿಜಯ ದಶಮಿ ನೀಡಲಿ ಸರ್ವರಿಗೂ ಶ್ರೀರಕ್ಷೆ


ವಿದ್ಯಾ ಅ. ನಾಡಿಗೇರ
ಪಿ. ಆರ್. ಓ,
ಆಯುಕ್ತರ ಕಾರ್ಯಾಲಯ
ಧಾರವಾಡ

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group