ಶ್ರೀ ಶಾಂತವೀರ ಕನ್ಯಾ ಪ್ರೌಢ ಶಾಲೆಯಲ್ಲಿ ಮಕ್ಕಳಿಗೆ ಮೊಟ್ಟೆ ಮತ್ತು ಬಾಳೆ ಹಣ್ಣು ವಿತರಣೆ

Must Read

ಸಿಂದಗಿ: ಮಕ್ಕಳಿಗೆ ಪೌಷ್ಠಿಕಾಂಶಗಳು ಉತ್ತಮ ರೀತಿಯಲ್ಲಿ ಸಿಕ್ಕಾಗ ಮಾತ್ರ ಅವರಲ್ಲಿ ಉತ್ತಮ ಕಲಿಕೆಯ ವಾತಾವರಣ ನಿರ್ಮಾಣ ವಾಗುತ್ತದೆ. ಶಿಕ್ಷಕರು ಈ ಯೋಜನೆಯನ್ನು ಯೋಗ್ಯತಾ ರೀತಿಯಲ್ಲಿ ಅನುಷ್ಠಾನ ಗೊಳಿಸುವ ಮೂಲಕ ಮಕ್ಕಳ ಶ್ರೇಯಸ್ಸಿಗೆ ಸಹಕರಿಸಬೇಕು ಎಂದು ತಾಲೂಕಾ ಶಿಕ್ಷಣ ಪ್ರಸಾರಕ ಮಂಡಳಿಯ ನಿರ್ದೇಶಕ ಶಿವಪ್ಪಗೌಡ ಬಿರಾದಾರ ಹೇಳಿದರುು.

ಪಟ್ಟಣದ ತಾಲೂಕಾ ಶಿಕ್ಷಣ ಪ್ರಸಾರಕ ಮಂಡಳಿಯ ಶ್ರೀ ಶಾಂತವೀರ ಕನ್ಯಾ ಪ್ರೌಢ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡ ಮಕ್ಕಳಿಗೆ ಮೊಟ್ಟೆ ಮತ್ತು ಬಾಳೆಹಣ್ಣು ವಿತರಿಸಿ ಮಾತನಾಡಿ, ಶಾಲಾ ಮಕ್ಕಳಲ್ಲಿ ಅಪೌಷ್ಠಿಕತೆ, ರಕ್ತಹೀನತೆ, ಹಾಗೂ ಪೋಷಕಾಂಶಗಳ ನ್ಯೂನತೆಯನ್ನು ದೂರ ಮಾಡಲು 1 ರಿಂದ 8 ನೇ ತರಗತಿಯ ಮಕ್ಕಳಿಗೆ ಮೊಟ್ಟೆ ಮತ್ತು ಬಾಳೆ ಹಣ್ಣು ನೀಡುವ ಕಾರ್ಯಕ್ರಮ ವೈಜ್ಞಾನಿಕವಾಗಿದೆ ಎಂದರು.

ಈ ಸಂಧರ್ಭದಲ್ಲಿ ಮುಖ್ಯೋಪಾಧ್ಯಾಯ ಎಸ್.ವಾಯ್.ಮೇಲಿನಮನಿ, ಶಿಕ್ಷಕರಾದ ಎನ್.ಎ.ಮಹಾಜನ, ವ್ಹಿ.ಬಿ.ಕೊಟ್ಟೆನ್ನವರ, ಆರ್.ವಾಯ್.ಪರೀಟ್, ಎಸ್.ಎಸ್.ಹತ್ತಿ, ವ್ಹಿ.ಎಸ್.ವಾಲಿಕಾರ, ಎಸ್.ಆರ್.ನಾಯಕ, ಲೋಹಿತಜಾಧವ, ಎಸ್.ವ್ಹಿ.ಮಿರ್ಜಿಕರ, ಪಮ್ಮು ಬಿರಾದಾರ, ಚೌಧರಿ, ಸುಭಾಸ ಪಾಟೀಲ, ಕೃಷ್ಣಾ ಜೋಷಿ, ವಿಮಲಾ ಬಿರಾದಾರ, ಶಂಕರಗೌಡ ಪಾಟೀಲ, ರಾಜು ಎಮ್ಮಿ ಸೇರಿದಂತೆ ಅನೇಕರು ಇದ್ದರು.

Latest News

ಕವನ : ಸಮಾನತೆಯ ಬೆಳದಿಂಗಳ ಪಲ್ಲವಿ

ಸಮಾನತೆಯ ಬೆಳದಿಂಗಳ ಪಲ್ಲವಿಭಾರತಾಂಬೆಗೆ ಹೊನ್ನ ಕಿರೀಟವಿದು ಸರಳ ಸಂವಿಧಾನ ನಮ್ಮ ಸಂವಿಧಾನಪೀಠಿಕೆಯ ಪರಿಧಿಯಲಿ ಜಾತ್ಯತೀತ,ಬ್ರಾತೃತ್ವ, ಸಮಾಜವಾದಿ ಸಾರ್ವಭೌಮತೆ,ಗಣತಂತ್ರ ನ್ಯಾಯ, ಸಮಾನತೆ ಸ್ವಾತಂತ್ರ್ಯದ ದುಂದುಭಿ ಜೀವದಾಯಿನಿ ಇದು ಭಾರತದ ಪಾಲಿಗೆ ಮುಕ್ತಿದಾಯಿನಿ ಇದು ದಾಸ್ಯದ ಸಂಕೋಲೆಗೆ ನಮ್ಮ ಸಂವಿಧಾನ ನಮಗೆ ಸುವಿಧಾನಲಿಖಿತವೂ ಧೀರ್ಘವೂ ಭಾರತಕ್ಕಿದು ಮಾರ್ಗವು ಅಸಮಾನತೆಯ...

More Articles Like This

error: Content is protected !!
Join WhatsApp Group