ಕವನ: ಮಕರ ಸಂಕ್ರಾಂತಿ

Must Read

ಮಕರ ಸಂಕ್ರಾಂತಿ

ಸೂರ್ಯನ ಪರಿಭ್ರಮಣದೊಳು
ಭೂತಾಯಿಯ ಮಡಿಲು
ನವಕಾಂತಿಯ ಯುಗವನು ಕಾಣುತಿರೆ
ಋತು ಚಕ್ರದೊಳು ವಸಂತನ ಆಗಮನ
ನವಕಳೆಯೊಳು ಪ್ರಕೃತಿ

ಸಂಕ್ರಾಂತಿಯ ಆಗಮನ
ಎಳ್ಳು-ಬೆಲ್ಲವ ಮೆದ್ದು
ಒಳ್ಳೆಯ ನುಡಿಗಳನಾಡುತ
ಸಕಲರೂ ಕೂಡಿ
ಸಡಗರದಿ ದಿನವನು ಕಳೆಯೋಣ

ವರ್ಷವಿಡೀ ಬದುಕಲಿ ಸುಖ-ಶಾಂತಿ
ನೆಮ್ಮದಿಯ ಬಯಸುತ
ಬದುಕಿನ ಸಂತಸ ಮೆರೆಯೋಣ
ಹೊಸದಿಗಂತದಿ ಮೂಡಲಿ ಆಶಾಭಾವ
ಹೊಸತನದಿ ಬದುಕು ಹೊರಹೊಮ್ಮಲಿ

ನವನವೋಲ್ಲಾಸ ತರಲಿ ದಿನದಿನವು
ಸಂಕ್ರಾಂತಿಯ ಸವಿಯನರಸುತ
ಮುಂಬರುವ ಹಬ್ಬಗಳ ಕರೆಯೋಣ
ವರ್ಷವಿಡೀ ಸುಖಸಮೃದ್ದಿ ಬಾಳಲಿ ತರಲಿ
ಎನುತ ದೇವರಲಿ ಪ್ರಾರ್ಥಿಸೋಣ

ಚಳಿಯ ಬಿಡಿಸುತ ಎಳೆ ಬಿಸಿಲು
ಶಿವರಾತ್ರಿಗೆ ಶಿವಶಿವ ಎನಿರೆನುತ
ಬೇಸಗೆಯ ಕರೆತರುವ ಸಂಕ್ರಾಂತಿ
ಎಲ್ಲ ಕಾಲಕು ಹೊಂದಿಕೆಯಿರಲೆನುತ
ಬದುಕಲು ಕಲಿಸುವ ಸಂಕ್ರಾಂತಿ


ವೈ.ಬಿ.ಕಡಕೋಳ
ಶಿಕ್ಷಕ ಸಂಪನ್ಮೂಲ ವ್ಯಕ್ತಿಗಳು
ಮುನವಳ್ಳಿ

Latest News

ಗಡಿಗಳನ್ನು ಮೀರಿ ಹರಿದ ಭಕ್ತಿ: ಓಮಾನ್‌ನಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವದ ವೈಭವ  

     ಗಡಿಗಳನ್ನು ಮೀರಿ ಹರಿಯುವ ಭಕ್ತಿಯ ಹರಿವು ಮಸ್ಕಟ್‌ನಲ್ಲಿ ಮತ್ತೆ ಒಮ್ಮೆ ತಿರುಮಲೆಯ ಸಾನ್ನಿಧ್ಯವನ್ನು ಮೂಡಿಸಿತು. ದಾರ್ಸೈಟ್‌ನ ಶ್ರೀ ಕೃಷ್ಣ ಮಂದಿರದಲ್ಲಿ ನೆರವೇರಿದ ಶ್ರೀ...

More Articles Like This

error: Content is protected !!
Join WhatsApp Group