spot_img
spot_img

ಕವನ: ಮಕರ ಸಂಕ್ರಾಂತಿ

Must Read

- Advertisement -

ಮಕರ ಸಂಕ್ರಾಂತಿ

ಸೂರ್ಯನ ಪರಿಭ್ರಮಣದೊಳು
ಭೂತಾಯಿಯ ಮಡಿಲು
ನವಕಾಂತಿಯ ಯುಗವನು ಕಾಣುತಿರೆ
ಋತು ಚಕ್ರದೊಳು ವಸಂತನ ಆಗಮನ
ನವಕಳೆಯೊಳು ಪ್ರಕೃತಿ

ಸಂಕ್ರಾಂತಿಯ ಆಗಮನ
ಎಳ್ಳು-ಬೆಲ್ಲವ ಮೆದ್ದು
ಒಳ್ಳೆಯ ನುಡಿಗಳನಾಡುತ
ಸಕಲರೂ ಕೂಡಿ
ಸಡಗರದಿ ದಿನವನು ಕಳೆಯೋಣ

ವರ್ಷವಿಡೀ ಬದುಕಲಿ ಸುಖ-ಶಾಂತಿ
ನೆಮ್ಮದಿಯ ಬಯಸುತ
ಬದುಕಿನ ಸಂತಸ ಮೆರೆಯೋಣ
ಹೊಸದಿಗಂತದಿ ಮೂಡಲಿ ಆಶಾಭಾವ
ಹೊಸತನದಿ ಬದುಕು ಹೊರಹೊಮ್ಮಲಿ

- Advertisement -

ನವನವೋಲ್ಲಾಸ ತರಲಿ ದಿನದಿನವು
ಸಂಕ್ರಾಂತಿಯ ಸವಿಯನರಸುತ
ಮುಂಬರುವ ಹಬ್ಬಗಳ ಕರೆಯೋಣ
ವರ್ಷವಿಡೀ ಸುಖಸಮೃದ್ದಿ ಬಾಳಲಿ ತರಲಿ
ಎನುತ ದೇವರಲಿ ಪ್ರಾರ್ಥಿಸೋಣ

ಚಳಿಯ ಬಿಡಿಸುತ ಎಳೆ ಬಿಸಿಲು
ಶಿವರಾತ್ರಿಗೆ ಶಿವಶಿವ ಎನಿರೆನುತ
ಬೇಸಗೆಯ ಕರೆತರುವ ಸಂಕ್ರಾಂತಿ
ಎಲ್ಲ ಕಾಲಕು ಹೊಂದಿಕೆಯಿರಲೆನುತ
ಬದುಕಲು ಕಲಿಸುವ ಸಂಕ್ರಾಂತಿ


ವೈ.ಬಿ.ಕಡಕೋಳ
ಶಿಕ್ಷಕ ಸಂಪನ್ಮೂಲ ವ್ಯಕ್ತಿಗಳು
ಮುನವಳ್ಳಿ

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group