ಕವನ: ಸತ್ತು ಹೋದಮೇಲೆ…

Must Read

ಸತ್ತು ಹೋದಮೇಲೆ…

ಸತ್ತು ಹೋದಮೇಲೆ ಪಿಂಡ ಇಡುವ ಬದಲಿಗೆ ಬದುಕಿದ್ದಾಗ ಒಂದು ತುತ್ತು ಅನ್ನ ನೀಡ್ರಪ್ಪ..

ಸತ್ತು ಹೋದಮೇಲೆ ಹಾಲು ತುಪ್ಪ ಎರೆಯುವ ಬದಲಿಗೆ ಬದುಕಿದ್ದಾಗ ಒಂದು ಹನಿ ನೀರು ಕೊಡ್ರಪ್ಪ..

ಸತ್ತು ಹೋದ ಮೇಲೆ ಹಿಂದೆ ದಾಪುಗಾಲು ಹಾಕುವುದಕ್ಕಿಂತ ಬದುಕ್ಕಿದ್ದಾಗ ಜೊತೆಯಲ್ಲಿ ನಡಿರಪ್ಪ..

ಸತ್ತು ಹೋದ ಮೇಲೆ ಗೋರಿ ಕಟ್ಟಿಸುವುದಕ್ಕಿಂತ ಬದುಕ್ಕಿದ್ದಾಗ ಆಶ್ರಯಕ್ಕೆ ಕುಟೀರ ನೀಡ್ರಪ್ಪ..

ಸತ್ತು ಹೋದ ಮೇಲೆ ಕಣ್ಣೀರಿನ ಹೊಳೆಯನ್ನು ಹರಿಸುವುದಕ್ಕಿಂತ ಬದುಕ್ಕಿದ್ದಾಗ ನಗುವಿನ ಹೊನಲಾಗ್ರಪ್ಪ

ಸತ್ತು ಹೋದ ಮೇಲೆ ನಾಣ್ಯಗಳನ್ನು ತೂರುವುದಕ್ಕಿಂತ ಬದುಕ್ಕಿದ್ದಾಗ ನಾಡಿ ಮಿಡಿತ ಅರಿಯಿರಪ್ಪ..

ಸತ್ತು ಹೋದ ಮೇಲೆ ಕೊರಗುವುದಕ್ಕಿಂತ ಬದುಕ್ಕಿದ್ದಾಗ ಮನುಷತ್ವಕ್ಕೆ ಬೆಲೆ ಕೊಡ್ರಪ್ಪ..

ಸತ್ತು ಹೋದ ಮೇಲೆ ಹೊಗಳುವುದಕ್ಕಿಂತ ಬದುಕ್ಕಿದ್ದಾಗ ತೆಗಳುವುದನ್ನು ನಿಲ್ಲಿಸ್ರಪ್ಪ..


ಅನುಪಮ.ಪಿ
ಶಿಕ್ಷಕಿ, ಸಿಂದಗಿ.

Latest News

ಗಾಳಿಪಟದ ಮಾಂಜಾ ದಾರ ಕುತ್ತಿಗೆಗೆ ಸಿಲುಕಿ ವ್ಯಕ್ತಿ ದಾರುಣ ಸಾವು

ಬೀದರ - ಮಕರ ಸಂಕ್ರಾಂತಿ ನಿಮಿತ್ತ ಗಾಳಿಪಟ ಹಾರಿಸುತ್ತಿರುವ ಸಂದರ್ಭದಲ್ಲಿ ರಸ್ತೆಯಲ್ಲಿ ಬೈಕ್ ಮೇಲೆ ಹೋಗುತ್ತಿದ್ದ ಯುವಕ ಸಂಜಿಕುಮಾರ ಎಂಬುವವರ ಕುತ್ತಿಗೆಗೆ ಗಾಳಿ ಪಟದ ಮಾಂಜಾ(ಚೀನಿ...

More Articles Like This

error: Content is protected !!
Join WhatsApp Group