- Advertisement -
ಬೀದರ – ಬಸವಕಲ್ಯಾಣ ತಾಲೂಕಿನ ದಂಡಾಧಿಕಾರಿ ಸಾವಿತ್ರಿ ಸಲಗಾರ ಸ್ಥಳೀಯ ಸರ್ಕಾರಿ ಕಾಲೇಜಿನಲ್ಲಿ ಮಕ್ಕಳ ಜೊತೆ ಜಾಲಿ ಯಿಂದ ನಿಂಬೆ ಹಣ್ಣಿನ ಆಟ ಆಡಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪಾಠದ ಜೊತೆಗೆ ಆಟದ ಪ್ರಾಮುಖ್ಯ ಹಾಗೂ ಮನರಂಜನೆ ಸಾರುವ ಪಾಠ ಹೇಳಿದ ತಹಶಿಲ್ದಾರರು ಕಾಲೇಜು ಯುವಕ ಯುವತಿಯರಲ್ಲಿ ಹುರುಪು ತುಂಬಿದರು.
ಶಿಕ್ಷಕಿ ಒಬ್ಬರು ಮುಂದೆ ಮುಖ ಮಾಡಿ ಒಂದು ನಿಂಬೆ ಹಣ್ಣು ಎಸೆಯುವುದು.ಹಿಂದೆ ತಹಶಿಲ್ದಾರರ ಸಾವಿತ್ರಿ ಸಲಗಾರ ಬಾಕ್ಸ್ ಹಿಡಿದು ಆ ನಿಂಬೆ ಹಣ್ಣು ಹಿಡಿಯುವ ಆಟ ಕಾಲೇಜಿನ ವಿದ್ಯಾರ್ಥಿಗಳಲ್ಲದೆ ಉಪನ್ಯಾಸಕರಿಗೂ ಮನರಂಜನೆ ಒದಗಿಸಿತು.
- Advertisement -
ವರದಿ: ನಂದಕುಮಾರ ಕರಂಜೆ, ಬೀದರ