Homeಸುದ್ದಿಗಳುಕ್ರೀಡೆಗಳಿಂದ ದೇಹ, ಮನಸು ಸದೃಢ

ಕ್ರೀಡೆಗಳಿಂದ ದೇಹ, ಮನಸು ಸದೃಢ

ಮೂಡಲಗಿ: ಕ್ರೀಡೆಗಳಿಂದ ದೇಹ ಮತ್ತು ಮನಸ್ಸು ಸದೃಢಗೊಂಡು ಸಾಧನೆ ಮಾಡಲು ಸಹಕಾರಿಯಾಗುತ್ತದೆ, ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಆಟೋಟಗಳಲ್ಲಿ ಪಾಲ್ಗೊಂಡು ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಬೇಕೆಂದು ಶಿವಾಪೂರ ಗ್ರಾಮ ಪಂಚಾಯತ ಅಧ್ಯಕ್ಷ ಬಸವರಾಜ ಸಾಯನ್ನವರ ಹೇಳಿದರು.

ತಾಲೂಕಿನ ಶಿವಾಪುರ(ಹ) ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ಪ್ರಸಕ್ತ ಸಾಲಿನ ವಲಯ ಮಟ್ಟದ ಕ್ರೀಡಾ ಕೂಟದ ಧ್ವಜಾರೋಹಣ ನೆರೆವೇರಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆ.ಜೆ.ಹಾಸ್ಪಿಟಲ್ ನಿರ್ದೇಶಕ ಎಸ್ ಎಸ್ ಪಾಟೀಲ ವಹಿಸಿದ್ದರು, ಎಸ್.ಡಿ.ಪಾಟೀಲ ಸಮಾರಂಭವನ್ನು ಉದ್ಘಾಟಿಸಿದರು, ಕೆ ಬಿ ಮುಧೊಳ, ಐ.ಬಿ.ಬೆಳಗಲಿ, ಕೆ.ಜಿ.ಮುಧೊಳ, ಎಂ ಎಂ.ಜುಂಜರವಾಡ, ಗುಳಪ್ಪ ರಡ್ದೆರಟ್ಟಿ, ಎಂ.ಪಿ.ಡವಳೇಶ್ವರ, ಎಸ್.ವಾಯ್.ಜುಂಜರವಾಡ, ಶಾಲೆಯ ಮುಖ್ಯೋಪಾದ್ಯಾಯ ಕೆ.ಎಂ.ವಾಣಿ , ಎಂ.ಪಿ.ಲಂಗೊಟಿ, ಬಿ ಎಸ್.ಕಾಪಸಿ, ವಾಯ ಬಿ ಬುಸಗೊನ್ನ ಮತ್ತು ಸಿ.ಆರ್.ಸಿ ಅಧಿಕಾರಿಗಳು, ಶಿಕ್ಷಕರು, ಸಂಘ ಸಂಸ್ಥೆಯ ಪದಾಧಿಕಾರಿಗಳು,ಗ್ರಾಮ ಪಂಚಾಯತ ಸದಸ್ಯರು, ಕ್ರೀಡಾ ಪ್ರೇಮಿಗಳು ಇದ್ದರು.

RELATED ARTICLES

Most Popular

error: Content is protected !!
Join WhatsApp Group