ಕವನ: ಕ್ರಾಂತಿ ಕಿಡಿ ಭಗತ್ ಸಿಂಗ್

Must Read

ಕ್ರಾಂತಿ ಕಿಡಿ ಭಗತ್ ಸಿಂಗ್

ಮತ್ತೊಮ್ಮೆ ಜಗದಿ ಹುಟ್ಟಿ ಬರಲಿ
ಭಾರತಾಂಬೆಯ ಕರುಳ ಬಳ್ಳಿಯಲಿ
ಕ್ರಾಂತಿಯ ಕಿಡಿ ಎಲ್ಲೆಡೆ  ಹರಡಲಿ
ಎಲ್ಲ ಯುವಕ ಯುವತಿಯರಲಿ

ಯುವ ಜನತೆ ಮರೆತು ಹೋಗಿದೆ
ತಮ್ಮೊಳಗಿರುವ  ಶಕ್ತಿಯ ಮಹಿಮೆ
ಅಹಿತಕರ ಕೆಲಸದಿ ಮುಳುಗಿಹರು
ಸಿಂಹ ಶಕ್ತಿ ಹೊಂದಿದ ಕಲಿಗಳು

ನೀ ಬಂದೊಮ್ಮೆ ದಾರಿ ತೋರು
ತಿಳಿಸೊಮ್ಮೆ ಅವರ ಕರ್ಮವನು
ಭಾರತಮಾತೆಯು ಕೊರಗುತಿಹಳು
ತನ್ನ ಸಂತಾನದ ಸ್ಥಿತಿಯನು ಕಂಡು

ನಮಿಸುವೆ ಭಗವಂತ ನಿನಗೆ
ಕಳಿಸಿಕೊಡು ರುದ್ರನರೂಪದಿ
ಕಾಯುತಿಹಳು ಭುವನೇಶ್ವರಿ
ಕ್ರಾಂತಿ ಕಿಡಿಯ  ಬರುವಿಕೆಗಾಗಿ


ರಚನೆ ಶ್ರೀಮತಿ ಜ್ಯೋತಿ ಕೋಟಗಿ ಬೈಲಹೊಂಗಲ
ಬಿ ಆರ್ ಪಿ ಚ ಕಿತ್ತೂರು

Latest News

ಸಿಂದಗಿ : ಕ್ರೀಡಾಕೂಟದ ಸಿದ್ಧತೆ ಪರಿಶೀಲಿಸಿದ ಶಾಸಕ ಮನಗೂಳಿ

ಸಿಂದಗಿ; ನಶಿಸಿ ಹೋಗುತ್ತಿರುವ ದೇಶಿಯ ಕ್ರೀಡೆಗಳ ಉತ್ತೇಜನಕ್ಕಾಗಿ ಶಿಕ್ಷಣ ಇಲಾಖೆಗೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಇದೇ ಅ. ೨೩,೨೪,೨೫ ರಂದು ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕುಸ್ತಿ...

More Articles Like This

error: Content is protected !!
Join WhatsApp Group