ಶ್ರೀ ಹಡಪದ ಅಪ್ಪಣ್ಣ ಸಹಕಾರಿ ಸಂಘದಿಂದ ಅಪಘಾತ ವಿಮಾ ಚೆಕ್ ವಿತರಣೆ

Must Read

ಸಿಂದಗಿ: ಪಟ್ಟಣದ ಶ್ರೀ ಹಡಪದ ಅಪ್ಪಣ್ಣ ವಿವಿಧೋದ್ಧೇಶಗಳ ಸಹಕಾರಿ ಸಂಘ (ನಿ) ಸಿಂದಗಿಯಲ್ಲಿ  ಸಂಘದ ಸದಸ್ಯರು ಯಾರಾದರೂ ಅಪಘಾತಕ್ಕೀಡಾಗಿ ಸಾವನ್ನಪ್ಪಿದರೆ ಈ ಸಂಘ ಒಂದು ಲಕ್ಷ ರೂಪಾಯಿ ವಿತರಿಸುತ್ತದೆ. ಅದು ಜನತಾ ಅಪಘಾತ ವಿಮಾ ಯೋಜನೆಯ ಯುನೈಟೆಡ್ ಇಂಡಿಯಾ ಇನ್ಸೂರನ್ಸ್ ಕಂ.ಲಿ ವತಿಯಿಂದ ವಿತರಿಸಲಾಗುತ್ತದೆ ಎಂದು ಸಂಘದ ಅಧ್ಯಕ್ಷ ಶಿವಾನಂದ ಹಡಪದ ಹೇಳಿದರು.

ಪಟ್ಟಣದ ಶ್ರೀ ಹಡಪದ ಅಪ್ಪಣ್ಣ ವಿವಿಧೋದ್ಧೇಶಗಳ ಸಹಕಾರಿ ಸಂಘ (ನಿ) ಸಿಂದಗಿಯಲ್ಲಿ ಈ ಸಂಘದ ವತಿಯಿಂದ ಅಪಘಾತ ವಿಮೆಯ ಒಂದು ಲಕ್ಷ ರೂಪಾಯಿಯ ಚೆಕ್ಕನ್ನು ವಿತರಿಸಿ ಮಾತನಾಡಿ, ಸದರಿ ಸಂಘದ ಮೃತ ಸದಸ್ಯರಾದ ದಿವಂಗತ ಮಹಾಂತೇಶ ಸೊನ್ನದ ಇವರು ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದು, ಅವರ ಕುಟುಂಬಸ್ಥರಿಗೆ ಸಂಘದ ವತಿಯಿಂದ ಈ ಯೋಜನೆಯ ಒಂದು ಲಕ್ಷ ರೂಪಾಯಿ ಚೆಕ್ಕನ್ನು ವಿಜಯಪುರ ಸಹಕಾರ ಸಂಘಗಳ ಉಪ ನಿಬಂಧಕ ಸಿ ಎಸ್ ನಿಂಬಾಳ, ಸಹಕಾರಿ ಅಭಿವೃದ್ಧಿ ಅಧಿಕಾರಿ ಎಮ್ ಎಸ್ ರಾಠೋಡ,  ಕಾರ್ಯನಿರ್ವಾಹಣಾಧಿಕಾರಿ ಮಲ್ಲು ಹಡಪದ, ಕುಟುಂಬಸ್ಥರಿಗೆ ವಿತರಿಸಿದರು. 

ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರುಗಳಾದ ಕಂಠಪ್ಪ ಹಡಪದ, ಪರಶುರಾಮ ಕಾಶೆ, ಮಂಜುನಾಥ ಹಡಪದ, ಚಿದಾನಂದ ಹಡಪದ, ಸುಭಾಸ ದೇವರನಾವದಗಿ, ರಾಜು ನಾವಿ ಹಾಗೂ ಸಿಬ್ಬಂದಿಗಳಾದ ಶ್ರೀಮತಿ ವಿದ್ಯಾ ಪ್ರಕಾಶ ನಾವಿ, ಭಾಗಣ್ಣ ಹಡಪದ, ರಾಹುಲ ಹಿಂಚಗೇರಿ, ಶಿವಶರಣ ಸಿಂದಗಿ, ಪ್ರವೀಣ ಹಡಪದ, ಶರಣು ಕುಕನೂರ, ಭಾಗೇಶ ದೇವೂರು ಉಪಸ್ಥಿತರಿದ್ದರು.

Latest News

ಜೀವದಾತ ರಕ್ತದಾನವೇ ಮಹಾದಾನ: ಫಾ.ಡಾ.ಅಗಸ್ಟೀನ್ ಜಾರ್ಜ್

ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದಲ್ಲಿ ಬೃಹತ್ ರಕ್ತದಾನ ಶಿಬಿರ“ಪ್ರಪಂಚದಲ್ಲಿ ಜೀವಜೀವಗಳನ್ನು ಉಳಿಸುವ ರಕ್ತದ ಪಾತ್ರವು ಮಹತ್ತರವಾದುದು. ಜೀವದಾತ ರಕ್ತದಾನವು ಮಹಾದಾನವಾಗಿದೆ” ಎಂದು ಎಂದು ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ...

More Articles Like This

error: Content is protected !!
Join WhatsApp Group