Homeಸುದ್ದಿಗಳುಸಿಡಿಲಿಗೆ ಬಲಿಯಾದ ವ್ಯಕ್ತಿ ಕುಟುಂಬಕ್ಕೆ ಸಾಂತ್ವನ ಹೇಳಿದ ಮನಗೂಳಿ

ಸಿಡಿಲಿಗೆ ಬಲಿಯಾದ ವ್ಯಕ್ತಿ ಕುಟುಂಬಕ್ಕೆ ಸಾಂತ್ವನ ಹೇಳಿದ ಮನಗೂಳಿ

ಸಿಂದಗಿ: ಪ್ರಕೃತಿಯ ವಿಕೋಪಕ್ಕೆ ಸಿದ್ದು ಚನ್ನಪ್ಪ ಯಂಕಂಚಿ ಅಗಲಿದ್ದು ಅತೀವ ನೋವು ತಂದಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.

ತಾಲೂಕಿನ ಕನ್ನೋಳ್ಳಿ ಗ್ರಾಮದಲ್ಲಿ ಮೇ ತಿಂಗಳಿನಲ್ಲಿ ಸಿಡಿಲಿನ ಹೊಡೆತಕ್ಕೆ ದಿ.ಸಿದ್ದು ಚನ್ನಪ್ಪ ಯಂಕಂಚಿ ಬಲಿಯಾಗಿದ್ದರಿಂದ ಕುಟುಂಬಸ್ಥರು ದಿಗ್ಭ್ರಮೆಯಾಗಿ ನೋವಿನಲ್ಲಿದ್ದಾರೆ. ನಾವು ಏನೇ ಮಾಡಿದರು ಅವರು ಕಳೆದು ಕೊಂಡವರನ್ನು ತಂದು ಕೊಡಲು ಆಗುವುದಿಲ್ಲ. ಆದರೆ ಸರಕಾರದ ಪರವಾಗಿ ನಾವು ಕುಟುಂಬಸ್ಥರ ಪರ ನಿಲ್ಲಬೇಕಾದದ್ದು ನಮ್ಮ ಮಾನವೀಯತೆ ಮತ್ತು ಕರ್ತವ್ಯ. ಆದ್ದರಿಂದ ಈಗಾಗಲೇ ಆಡಳಿತ ಅಧಿಕಾರಿಗಳಿಂದ 5 ಲಕ್ಷ. ರೂ ಅವರ ತಂದೆ ಚನ್ನಪ್ಪ ಸಾಯಬಣ್ಣ ಯಂಕಂಚಿ ಇವರ ಖಾತೆಗೆ ಜಮೆಯಾಗಿದ್ದು, ಕ್ಷೇತ್ರದಾದ್ಯಂತ ಆಗಿರುವ ಹಾನಿಗಳು ಸೇರಿ ಒಟ್ಟು 7 ಲಕ್ಷ 58ಸಾವಿರ ರೂ. ಜಮವಾಗಿದ್ದು ಇದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ತಾಲೂಕಾ ದಂಡಾಧಿಕಾರಿ ನಿಂಗಣ್ಣ ಬಿರಾದಾರ, ಸರ್ಕಲ್ ಕಾಸೀಮ್ ಮಕಾಂದಾರ, ಶಿವಪುತ್ರ ಕರನಾಳ , ಪ್ರವೀಣ ಕಂಟಿಗೊಂಡ, ಜೀಲಾನಿ ನಾಟೀಕಾರ, ವಿಜುಗೌಡ ಪಾಟೀಲ, ರಾಮು ಖೇಡಗಿ, ರಾಚಪ್ಪ ತಂಬಾಕೆ, ಸಿದ್ದಣ್ಣ ಯಾಳಗಿ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.

RELATED ARTICLES

Most Popular

error: Content is protected !!
Join WhatsApp Group