ಕವನ: ಶರಣು ಗುರುವೆ ಶರಣು

Must Read

ಶರಣು ಗುರುವೆ ಶರಣು

ಕರುಣಾಮಯಿ ತಂದೆ ಗುರುವೆ

ಕರಮುಗಿಯುವೆ ಶರಣು ಗುರುವೆ ಶರಣು

ಕಾನನದಿ ಅಲೆವಂಗೆ

ಕಾಣದೇ ಗುರುವಾದವಗೆ ಶರಣು

ಕಿನ್ನರರ ಕಿತಾಪತಿಗಳ ಸಹಿಸಿ ದಹಿಸಿದ

ಕಿರಣ ಸ್ವರೂಪಿ ಗುರುವೆ ಶರಣು

ಕೀಟಲೆಗಳ ಬದಿಗೊತ್ತಿ

ಕೀರ್ತಿ ತರುವಂತೆ ಬೆಳಸಿದ ತಮಗೆ ಶರಣು

ಕುಣಿಸಿ ನಲಿಸಿ ಕಲಿಸುತ

ಕುಶಲಮತಿಗಳಾಗಿಸಿದಾತಗೆ ಶರಣು

ಕೂಡಿ ಬಾಳುವ  ನೀತಿ

ಕೂಡಿ ನಲಿಯುವ ರೀತಿ ಕಲಿಸಿದಾತಗೆ ಶರಣು

ಕೆಸರಿನಲ್ಲಿರುವ ಕಮಲದಂತೆ 

ಕೆಸರಿನಲ್ಲಿರುವ ಎರೆಹುಳುವಿನಂತೆ ಬಾಳೆಂದಾತಗೆ ಶರಣು

ಕೇದಿಗೆಯ ಘಮಲು ಹೊತ್ತ

ಕೇವಿಗೆಯ ಹೊಳಪುಳ್ಳವಗೆ ಶರಣು

ಕೈ ಕೆಸರಾದರೆ ಬಾಯಿ ಮೊಸರು

ಕೈ ಜೋಡಿಸಿ ಕಾಯಕ ಮಾಡೆಂದಾತಗೆ ಶರಣು

ಕೊಳದೊಳಗಿನ ಮೀನಿನಂತೆ

ಕೊಳದೊಳಗಿನ ಜಲದಂತೆ ಶಾಂತವಾಗಿರೆಂದಾತಗೆ ಶರಣು

ಕೋಣನ ಜಾಣನಾಗಿ ಮಾಡಿ

ಕೋಟೆ ಆಳ್ವಂತೆ ಮಾಡಿದಾತಗೆ ಶರಣು

ಕೌತುಕಗಳ ಜಾಲ ಬಿಡಿಸಿ

ಕೌಶಲ್ಯಗಳ ವೃದ್ಧಿಸಿದಾತಗೆ ಶರಣು

ಕಂಗಳು ತುಂಬಿದವು ಪ್ರಭುವೆ

ಕಂಬನಿ ಒರಸಿ ಅಪ್ಪಿ ಸಂತೈಸಿದಾತಗೆ ಶರಣು

ಕಹಳೆ ಮೊಳಗಲಿ ದೇಶ ಕಟ್ಟುವ ಶಿಲ್ಪಿಗೆ

ಕಹಳೆ ಮೊಳಗಲಿ ಇಂದು ಎಂದೆಂದಿಗೂ 

ಶರಣು ಗುರುವೆ ಶರಣು ನಿಮಗೆ


ಶ್ರೀಮತಿ ಜ್ಯೋತಿ ಕೋಟಗಿ, ಬೈಲಹೊಂಗಲ ಬಿ ಆರ್ ಪಿ ಚ. ಕಿತ್ತೂರು

Latest News

ಜೀವದಾತ ರಕ್ತದಾನವೇ ಮಹಾದಾನ: ಫಾ.ಡಾ.ಅಗಸ್ಟೀನ್ ಜಾರ್ಜ್

ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದಲ್ಲಿ ಬೃಹತ್ ರಕ್ತದಾನ ಶಿಬಿರ“ಪ್ರಪಂಚದಲ್ಲಿ ಜೀವಜೀವಗಳನ್ನು ಉಳಿಸುವ ರಕ್ತದ ಪಾತ್ರವು ಮಹತ್ತರವಾದುದು. ಜೀವದಾತ ರಕ್ತದಾನವು ಮಹಾದಾನವಾಗಿದೆ” ಎಂದು ಎಂದು ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ...

More Articles Like This

error: Content is protected !!
Join WhatsApp Group