ಕವನ: ಸುಗ್ಗಿ ಸಂಕ್ರಾಂತಿ

Must Read

ಸುಗ್ಗಿ ಸಂಕ್ರಾಂತಿ

ವರುಷದ ದುಡಿಮೆಯ ಫಲವಾಗಿ

ಬಂದೈತೆ ಸುಗ್ಗಿಯ ಸಂಕ್ರಾಂತಿ

ಬೆರೆಸುತ ಎಳ್ಳಿಗೆ ಬೆಲ್ಲವನು

ತಂದೈತೆ ನಾಡಿಗೆ ಸುಖಶಾಂತಿ//ಪ

ಬೆಳ್ಳಿಯ ರಥವೇರಿ ರವಿಬಂದು

ಮಿಂಚೈತೆ ನಾಡೆಲ್ಲ ಬೆಳಕಲ್ಲಿ

ಹಳ್ಳಿಯ ನೆಲದಿಂದ ದಿಲ್ಲಿಗೂ

ಹಂಚೈತೆ ರಟ್ಟೆಯ ಬಲವಿಲ್ಲಿ//೧

ಗಿಲಿಗಿಲಿ ಗೆಜ್ಜೆಯ ನಾದದಲಿ

ಬದುಕಿನ ಬಂಡಿಯು ಹೊರಟಾವ

ಕುಲುಕುಲು ನಗುವಿನ ಮೊಗದಲ್ಲಿ

 ಹಂತಿಯ ಪದವನು  ಹಾಡ್ಯಾವ//೨

ಕಬ್ಬನು ಸವಿಯುತ ಕೃಷಿಕಾರ

ಬೆಲ್ಲದ ರುಚಿಯನು ನೀಡ್ಯಾನ

ಹಬ್ಬವ ಮಾಡಿದ ಸರದಾರ 

ವಲ್ಲಿಯ ನೆರಿಗೆಯ ತೀಡ್ಯಾನ/೩

ಪರಿಪರಿ ಕಾಳಿನ ರಾಶಿಯನು

ಮುದದಲಿ ಮಡದಿಯು ಪೂಜಿಸಲು

ಹರಿಹರ ನಾಮವ ಜಪಿಸುತ

ಬದುಕಿನ ಬಂಡಿಯು ತುಂಬಿರಲು//೪

ಹಳ್ಳಿಯ ಸಂಕ್ರಾಂತಿ ಹೊಲದಲ್ಲಿ

ಒಳ್ಳೆಯ ಕಾಯಕ ನಿಷ್ಠೆಯಲಿ

ಬೆಳ್ಳಿಯ ರಥವದು ಪಯಣದಲಿ

ಹಳ್ಳದ ದಂಡಿಯ ತಿರುವಿನಲಿ/೫


ಶ್ರೀಮತಿ ಬಸಮ್ಮ ಏಗನಗೌಡ್ರ

Latest News

ಜೀವದಾತ ರಕ್ತದಾನವೇ ಮಹಾದಾನ: ಫಾ.ಡಾ.ಅಗಸ್ಟೀನ್ ಜಾರ್ಜ್

ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದಲ್ಲಿ ಬೃಹತ್ ರಕ್ತದಾನ ಶಿಬಿರ“ಪ್ರಪಂಚದಲ್ಲಿ ಜೀವಜೀವಗಳನ್ನು ಉಳಿಸುವ ರಕ್ತದ ಪಾತ್ರವು ಮಹತ್ತರವಾದುದು. ಜೀವದಾತ ರಕ್ತದಾನವು ಮಹಾದಾನವಾಗಿದೆ” ಎಂದು ಎಂದು ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ...

More Articles Like This

error: Content is protected !!
Join WhatsApp Group