spot_img
spot_img

ಕವನ: ಸುಗ್ಗಿ ಸಂಕ್ರಾಂತಿ

Must Read

- Advertisement -

ಸುಗ್ಗಿ ಸಂಕ್ರಾಂತಿ

ವರುಷದ ದುಡಿಮೆಯ ಫಲವಾಗಿ

ಬಂದೈತೆ ಸುಗ್ಗಿಯ ಸಂಕ್ರಾಂತಿ

ಬೆರೆಸುತ ಎಳ್ಳಿಗೆ ಬೆಲ್ಲವನು

- Advertisement -

ತಂದೈತೆ ನಾಡಿಗೆ ಸುಖಶಾಂತಿ//ಪ

ಬೆಳ್ಳಿಯ ರಥವೇರಿ ರವಿಬಂದು

ಮಿಂಚೈತೆ ನಾಡೆಲ್ಲ ಬೆಳಕಲ್ಲಿ

- Advertisement -

ಹಳ್ಳಿಯ ನೆಲದಿಂದ ದಿಲ್ಲಿಗೂ

ಹಂಚೈತೆ ರಟ್ಟೆಯ ಬಲವಿಲ್ಲಿ//೧

ಗಿಲಿಗಿಲಿ ಗೆಜ್ಜೆಯ ನಾದದಲಿ

ಬದುಕಿನ ಬಂಡಿಯು ಹೊರಟಾವ

ಕುಲುಕುಲು ನಗುವಿನ ಮೊಗದಲ್ಲಿ

 ಹಂತಿಯ ಪದವನು  ಹಾಡ್ಯಾವ//೨

ಕಬ್ಬನು ಸವಿಯುತ ಕೃಷಿಕಾರ

ಬೆಲ್ಲದ ರುಚಿಯನು ನೀಡ್ಯಾನ

ಹಬ್ಬವ ಮಾಡಿದ ಸರದಾರ 

ವಲ್ಲಿಯ ನೆರಿಗೆಯ ತೀಡ್ಯಾನ/೩

ಪರಿಪರಿ ಕಾಳಿನ ರಾಶಿಯನು

ಮುದದಲಿ ಮಡದಿಯು ಪೂಜಿಸಲು

ಹರಿಹರ ನಾಮವ ಜಪಿಸುತ

ಬದುಕಿನ ಬಂಡಿಯು ತುಂಬಿರಲು//೪

ಹಳ್ಳಿಯ ಸಂಕ್ರಾಂತಿ ಹೊಲದಲ್ಲಿ

ಒಳ್ಳೆಯ ಕಾಯಕ ನಿಷ್ಠೆಯಲಿ

ಬೆಳ್ಳಿಯ ರಥವದು ಪಯಣದಲಿ

ಹಳ್ಳದ ದಂಡಿಯ ತಿರುವಿನಲಿ/೫


ಶ್ರೀಮತಿ ಬಸಮ್ಮ ಏಗನಗೌಡ್ರ

- Advertisement -
- Advertisement -

Latest News

ಕವನ : ಗೊಂಬೆಗಳ ಕಣ್ಣೀರು

ಗೊಂಬೆಗಳ ಕಣ್ಣೀರು ಅಂದು ನಾವು ಅಪ್ಪ ಅವ್ವನನ್ನು ಕಾಡಿ ಬೇಡಿ ಗೊಂಬೆಗಳಿಗಾಗಿ ಅಳುತ್ತಿದ್ದೆವು ಜಾತ್ರೆ ಉತ್ಸವದಲ್ಲಿ ಹಿರಿಯರಿಗೆ ದೇವರ ಮೇಲಿನ ಭಕ್ತಿ ನಮಗೋ ಬಣ್ಣ ಬಣ್ಣದ ಗೊಂಬೆಗಳ ಮೇಲೆ ಆಸಕ್ತಿ ಅವ್ವ ಹೇಗೋ ಮಾಡಿ ಅಪ್ಪನ ತುಡುಗಿನಲಿ ತನ್ನಲಿದ್ದ ದುಡ್ಡು ಕೊಟ್ಟು ತಂದಳು ಗೊಂಬೆಗಳ ಮಿತಿ ಇರಲಿಲ್ಲ...
- Advertisement -

More Articles Like This

- Advertisement -
close
error: Content is protected !!
Join WhatsApp Group