ಕವನ: ಕೃಷ್ಣನ ಕುಂಚದಿ ಮಿಂಚಿದ ರಾಧೆ

Must Read

ಕೃಷ್ಣನ ಕುಂಚದಿ ಮಿಂಚಿದ ರಾಧೆ

ರಾಧೆಯನು ಚಿತ್ರಿಸಲು

ಮಾಧವನು ಕುಳಿತಿಹನು

ಶೋಧಿಸುತ ಅನುರಾಗ ವರ್ಣ

ಮೋದದಲಿ ಮೈಮರೆತು

ಯಾದವ ಕುಲ ತಿಲಕ

ಮಾಧವಿಗು ನೀಲವನೆ ಬಳಿದ

ನಾಸಿಕವ ಕುಂಚದಲಿ

ಕೇಶವನು ತೀಡುತಲಿ

ತೋಷವನು ಮೊಗದಲ್ಲಿ ಬರೆದ

ಕುಂಚದ ತುದಿಯಲ್ಲಿ

ಮಿಂಚುತಿದೆ ನಿಜದೊಲವು

ಸಿಂಚನದಿ ಪ್ರೇಮವನೆ ಸುರಿದ

ಇಂಚಿಂಚು ಶೃದ್ಧೆಯಲೆ

ಹಂಚುತಲಿ ಚೆಲುವ ಹೊಳೆ

ಒಂಚೂರು ವಿಚಲಿಸದೆ ಕೊರೆದ

ನೈದಿಲೆಯ ಮೊಗದವಳು

ಮೈದಳೆದು ಕಾಗದದೆ

ಮೂಡಿಹಳು ಚೆಲುವರಸಿ ರಾಧೆ.


 ಶ್ರೀಮತಿ ಕಮಲಾಕ್ಷಿ ಕೌಜಲಗಿ, ಬೆಂಗಳೂರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group