spot_img
spot_img

ಕವನ: ಕೃಷ್ಣನ ಕುಂಚದಿ ಮಿಂಚಿದ ರಾಧೆ

Must Read

- Advertisement -

ಕೃಷ್ಣನ ಕುಂಚದಿ ಮಿಂಚಿದ ರಾಧೆ

ರಾಧೆಯನು ಚಿತ್ರಿಸಲು

ಮಾಧವನು ಕುಳಿತಿಹನು

ಶೋಧಿಸುತ ಅನುರಾಗ ವರ್ಣ

- Advertisement -

ಮೋದದಲಿ ಮೈಮರೆತು

ಯಾದವ ಕುಲ ತಿಲಕ

ಮಾಧವಿಗು ನೀಲವನೆ ಬಳಿದ

- Advertisement -

ನಾಸಿಕವ ಕುಂಚದಲಿ

ಕೇಶವನು ತೀಡುತಲಿ

ತೋಷವನು ಮೊಗದಲ್ಲಿ ಬರೆದ

ಕುಂಚದ ತುದಿಯಲ್ಲಿ

ಮಿಂಚುತಿದೆ ನಿಜದೊಲವು

ಸಿಂಚನದಿ ಪ್ರೇಮವನೆ ಸುರಿದ

ಇಂಚಿಂಚು ಶೃದ್ಧೆಯಲೆ

ಹಂಚುತಲಿ ಚೆಲುವ ಹೊಳೆ

ಒಂಚೂರು ವಿಚಲಿಸದೆ ಕೊರೆದ

ನೈದಿಲೆಯ ಮೊಗದವಳು

ಮೈದಳೆದು ಕಾಗದದೆ

ಮೂಡಿಹಳು ಚೆಲುವರಸಿ ರಾಧೆ.


 ಶ್ರೀಮತಿ ಕಮಲಾಕ್ಷಿ ಕೌಜಲಗಿ, ಬೆಂಗಳೂರು.

- Advertisement -
- Advertisement -

Latest News

ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಸಮಾನತೆ ದೊರಕಬೇಕು- ಸಿಡಿಪಿಓ ಶ್ವೇತಾ

ಮೈಸೂರು ನಗರ ವರ್ತಲ ರಸ್ತೆಯಲ್ಲಿರುವ ಮಾರ್ವೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ...
- Advertisement -

More Articles Like This

- Advertisement -
close
error: Content is protected !!
Join WhatsApp Group