spot_img
spot_img

ಕವನ

Must Read

spot_img
- Advertisement -

ಭಯದ ನೆರಳಿನಲ್ಲಿ

ಅವರೇನು ಅನ್ನುವರು
ಇವರೇನು ಹೇಳುವರು
ಎನ್ನುವ ಗೊಂದಲ -ಗಡಿಬಿಡಿಯ
ಮೀರಿ ಬೆಳೆದಾಗಲೇ
ಅಲ್ಲವೇ ನಿಜವಾದ ವ್ಯಕ್ತಿತ್ವದ
ಅನಾವರಣ

ಗಡಿ -ಗಡಿಗೆ ಭಯದ ನೆರಳು
ಅಡಿ -ಅಡಿಗೆ ಸಂಕೋಚದ ಮುದ್ದೆ
ಹೇಳಲೊಲ್ಲದು ತಿಳಿಯಲೊಲ್ಲದು
ಅರಗಿಸಿಕೊಳ್ಳಲಂತೂ ದೂರದ
ಮಾತು

- Advertisement -

ಭಯವೇ ಹಾಗೆ
ಹೇಳದೆ ಕೇಳದೆ ಧುತ್ತೆಂದು
ಆವರಿಸಿಕೊಂಡು
ಇಲ್ಲದ ಸಲ್ಲದ ವಿಚಾರದಿಂದ
ಬಳಲಿಸುತ್ತದೆ
ವಿವರಿಸಲಾರದ ಸನ್ನಿವೇಶ
ತಂದಿಡುತ್ತದೆ

ನಿನ್ನ ನೀನು ಅರಿತಾಗ
ನಿನ್ನದೇ ಶಕ್ತಿ ನಿನಗೆ
ಗೊತ್ತಾದಾಗ
ಎಲ್ಲರ ಹಂಗು ತೊರೆದು
ಬದುಕಲು ಕಲಿತಾಗ
ಭಯ ಅಂದ್ರೆ ಏನು
ಎಂದು ಕೇಳುವಂತಾಗುತ್ತದೆ
ಆಗಲೇ ಸತ್ಯದ ಅನಾವರಣ
ವ್ಯಕ್ತಿತ್ವದ ನಿಜಾವರಣ

ಸುಧಾ ಪಾಟೀಲ
ಬೆಳಗಾವಿ

- Advertisement -
- Advertisement -

Latest News

ಜಗದ್ಗುರು ರೇಣುಕಾಚಾರ್ಯರು ಜಗತ್ತಿನ ಉದ್ಧಾರಕ್ಕೆ ಜೀವನ ಮುಡಿಪಿಟ್ಟರು

ಸಿಂದಗಿ; ಜಗದ್ಗುರು ರೇಣುಕಾಚಾರ್ಯರು ಅವರ ಜೀವತಾವಧಿಯ ೧೪ ನೂರು ವರ್ಷಗಳಲ್ಲಿ ೭ ನೂರು ವರ್ಷಗಳ ಕಾಲ ತಪಸ್ಸು ಮಾಡಿದ್ದರು. ಇನ್ನೂ ೭ ನೂರು ವರ್ಷ ಜಗತ್ತಿನ...
- Advertisement -

More Articles Like This

- Advertisement -
close
error: Content is protected !!
Join WhatsApp Group