ಸಮಾಜದ ಬಗ್ಗೆ ಕಳಕಳಿ ಹುಟ್ಟಿಸಲು ಎನ್ಎಸ್ಎಸ್ ಸಹಕಾರಿ – ಭೋಜರಾಜ ಬೆಳಕೂಡ

Must Read

ಮೂಡಲಗಿ: ಇಂದಿನ ಯುವ ಪೀಳಿಗೆಗೆ ಸಮಾಜದ ಬಗ್ಗೆ ಕಳಕಳಿ ಹುಟ್ಟಿಸಲು ಎನ್.ಎಸ್.ಎಸ್ ಶಿಬಿರ ಸಹಾಯಕಾರಿಯಾಗಿದೆ ಎಂದು ಕಲ್ಲೋಳಿಯ ಬಸವೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಬೋಜರಾಜ ಬೆಳಕೂಡ ಹೇಳಿದರು.

ಅವರು ತಾಲೂಕಿನ ತುಕ್ಕಾನಟ್ಟಿಯ ಬಾವಿ ಕೋಡಿ ತೋಟದ ಶಾಲೆಯಲ್ಲಿ ಕಲ್ಲೋಳಿಯ ಬಸವೇಶ್ವರ ಕಲಾ ಮಹಾ ವಿದ್ಯಾಲಯದ ಎನ್.ಎಸ್.ಎಸ್ ಘಟಕ ಹಮ್ಮಿಕೊಂಡ ಏಳು ದಿನಗಳ ಕಾಲದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶಿಬಿರವನ್ನು ತುಕ್ಕಾನಟ್ಟಿಯ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್.ಕೆ.ಹುಲಕುಂದ್ ಸಸಿಗೆ ನೀರು ಹಾಕುವುದರ ಮೂಲಕ ಉದ್ಘಾಟಿಸಿದರು ಮಾತನಾಡಿದರು.

ಸಂಸ್ಥೆಯ ಆಡಳಿತಾಧಿಕಾರಿ ಪ್ರಕಾಶ್ ಗರಗಟ್ಟಿ ಮಾತನಾಡಿ, ಶಿಬಿರದ ಧ್ಯೇಯೋದ್ದೇಶಗಳನ್ನು ವಿವರಿಸಿದರು.
ಸಮಾರಂಭದಲ್ಲಿ ಶಾಲೆಯ ಪ್ರಧಾನ ಗುರು ಸಿದ್ಧಾರೂಢ ಹಮ್ಮನವರ್, ಸತೀಶ್ ಕೌಜಲಗಿ ಮರೇಶಿ ವಿದ್ಯಾ ಬಡಿಗೇರ್, ಅನಿತಾ ಅರಮನೆ, ಶಾಯಿಲ್ ಲಂಗೋಟಿ , ಕೀರ್ತಿ ನುಗ್ಗಾನಟ್ಟಿ, ಲಕ್ಷ್ಮಿ ಕವಡಪ್ಪಗೋಳ ಉಪಸ್ಥಿತರಿದ್ದರು

ಕಾಲೇಜಿನ ಪ್ರಾಚಾರ್ಯ ಡಾ. ಸಂಗಮೇಶ್ ಹೂಗಾರ್ ಸ್ವಾಗತಿಸಿದರು, ಗುರುರಾಜ್ ಕಡಕಬಾವಿ ನಿರೂಪಿಸಿದರು, ಜ್ಯೋತಿ ಮುತ್ನಾಳ ವಂದಿಸಿದರು .

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group