- Advertisement -
ಯುದ್ಧ ಬೇಡ
ಯುದ್ಧ ಬೇಡ
ಬುದ್ಧ ಬರಲಿ
ಶುದ್ಧ ಬದುಕು
ಕಾಣುವ
ದ್ವೇಷ ಮರೆತು
ಬಸವ ಬರಲಿ
ದುಡಿದು ತಿನ್ನಲು
ಕಲಿಯುವ
- Advertisement -
ಕ್ರೂರತನ ಬಿಟ್ಟು
ಕರೆಯಬೇಕು ಮಹಾವೀರನ
ಶಾಂತಿ ಮಂತ್ರವ
ಜಪಿಸಲು
ಸಮತೆ ಪ್ರೀತಿ ಪಸರಿಸಲು
ಅಂಬೇಡ್ಕರ್ ರ
ಸಂವಿಧಾನ ಮತ್ತೆ ಓದು
ಮಾಡ ಬೇಕು
ಗುಲಾಮಗಿರಿಗೆ ಕೊನೆ ಹೇಳಿ
ಸ್ವಾಭಿಮಾನ ಮೆರೆಯುವ
ಬಾಪು ಕನಸಿನ ಗ್ರಾಮ ಭಾರತ
ನಾವು ಗಟ್ಟಿಗೊಳಿಸುವ
- Advertisement -
ಡಾ ಶಶಿಕಾಂತ ಪಟ್ಟಣ ರಾಮದುರ್ಗ