ಕವನ: ರಾಧಾ ಕೃಷ್ಣರ ದಿವ್ಯ ಪ್ರೇಮ

Must Read

ಸ್ನೇಹ ಎಂದೇ ನೀ

ಸ್ನೇಹ ದಾಟಿ ಪ್ರೇಮವೆಂದೇ ನಾ
ಪ್ರೀತಿಯ ಹೆಜ್ಜೆಗೆ ಸ್ನೇಹವೇ ಮೂಲಾಧಾರ
ನನ್ನ ಭಾವ ತರಂಗದ ಮಾತೆಂದು
ಮೌನಿಯಾದೆ ನಾ……

ಯಾರದೋ ಶಾಪಕ್ಕೆ ಮರೆತು
ಹೊರಟೆಯಾ ನನ್ನ
ನಿನ್ ಎದುರಲೇ ನಿಂತು ನಿನ್ನವನೆಂದು
ನೆನಪಿಸುತಿಹೇ ನಾ ! ಕ್ರೋಧದಿ ತೋರುವ
ಪ್ರೀತಿಯನ್ನು ನಿನ್ನಲ್ಲಿ ಕಂಡೆ ನಾ

ನೀ ಮರೆತು ಮರೆಯಾದರು ಈ
ಹೃದಯ ನಿನ್ನದೆಂದು ಮೌನಿಯಾಗಿಹೆ ನಾ
ದುಃಖದ ಕಡಲಲಿ ಕೊನೆಯಾಯಿತು
ನನ್ನ ಪ್ರೀತಿಯ ಪಯಣ

ಪ್ರೀತಿ ಹುಟ್ಟಿತೆಂದು
ಹೇಳಲಾರದೆ ನಿಂದೆ ನೀ
ಕೊಳಲ ನಾದಕೆ ಮೈ ಮರೆತು
ಸಖನ ರಾಸಲೀಲೆಯೊಳು ಮುಳುಗಿಹೆ ನೀ

ಪ್ರೀತಿಗೆ ಮೋಹವೆಂದ ನಾ
ಅವಳ ಮನಸ ಸೂರೆಗೊಳಿಸಿದವ ನಾ
ನಾನವಳ ಮನದೊಡೆಯನಾದರೇನು
ರಾಧೆ ನನ್ನವಳಲ್ಲ

ಆನಂದ ಬಬಲಿ, ನಾಗನೂರ
ಜಿಲ್ಲಾ – ಬೆಳಗಾವಿ

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group