ಕವನ: ರಾಧಾ ಕೃಷ್ಣರ ದಿವ್ಯ ಪ್ರೇಮ

Must Read

ಸ್ನೇಹ ಎಂದೇ ನೀ

ಸ್ನೇಹ ದಾಟಿ ಪ್ರೇಮವೆಂದೇ ನಾ
ಪ್ರೀತಿಯ ಹೆಜ್ಜೆಗೆ ಸ್ನೇಹವೇ ಮೂಲಾಧಾರ
ನನ್ನ ಭಾವ ತರಂಗದ ಮಾತೆಂದು
ಮೌನಿಯಾದೆ ನಾ……

ಯಾರದೋ ಶಾಪಕ್ಕೆ ಮರೆತು
ಹೊರಟೆಯಾ ನನ್ನ
ನಿನ್ ಎದುರಲೇ ನಿಂತು ನಿನ್ನವನೆಂದು
ನೆನಪಿಸುತಿಹೇ ನಾ ! ಕ್ರೋಧದಿ ತೋರುವ
ಪ್ರೀತಿಯನ್ನು ನಿನ್ನಲ್ಲಿ ಕಂಡೆ ನಾ

ನೀ ಮರೆತು ಮರೆಯಾದರು ಈ
ಹೃದಯ ನಿನ್ನದೆಂದು ಮೌನಿಯಾಗಿಹೆ ನಾ
ದುಃಖದ ಕಡಲಲಿ ಕೊನೆಯಾಯಿತು
ನನ್ನ ಪ್ರೀತಿಯ ಪಯಣ

ಪ್ರೀತಿ ಹುಟ್ಟಿತೆಂದು
ಹೇಳಲಾರದೆ ನಿಂದೆ ನೀ
ಕೊಳಲ ನಾದಕೆ ಮೈ ಮರೆತು
ಸಖನ ರಾಸಲೀಲೆಯೊಳು ಮುಳುಗಿಹೆ ನೀ

ಪ್ರೀತಿಗೆ ಮೋಹವೆಂದ ನಾ
ಅವಳ ಮನಸ ಸೂರೆಗೊಳಿಸಿದವ ನಾ
ನಾನವಳ ಮನದೊಡೆಯನಾದರೇನು
ರಾಧೆ ನನ್ನವಳಲ್ಲ

ಆನಂದ ಬಬಲಿ, ನಾಗನೂರ
ಜಿಲ್ಲಾ – ಬೆಳಗಾವಿ

Latest News

ಎಕ್ಸ್ ಪ್ರೆಸ್ ರೈಲುಗಳನ್ನು ಘಟಪ್ರಭಾ ಸ್ಟೇಶನ್ ನಿಲುಗಡೆಗೆ ಮನವಿ

ಮೂಡಲಗಿ: ಗೋಕಾಕ, ಮೂಡಲಗಿ, ಯರಗಟ್ಟಿ, ಹುಕ್ಕೇರಿ ಹಾಗೂ ಚಿಕ್ಕೋಡಿ ತಾಲೂಕುಗಳ ಅನೇಕ ಸೈನಿಕರು ಭಾರತದ ವಿವಿಧ ರಾಜ್ಯಗಳಲ್ಲಿ ದೇಶಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ. ಸೈನಿಕರು ರಜೆಯ ಸಮಯದಲ್ಲಿ...

More Articles Like This

error: Content is protected !!
Join WhatsApp Group