spot_img
spot_img

ಕವನ: ರಾಧಾ ಕೃಷ್ಣರ ದಿವ್ಯ ಪ್ರೇಮ

Must Read

- Advertisement -

ಸ್ನೇಹ ಎಂದೇ ನೀ

ಸ್ನೇಹ ದಾಟಿ ಪ್ರೇಮವೆಂದೇ ನಾ
ಪ್ರೀತಿಯ ಹೆಜ್ಜೆಗೆ ಸ್ನೇಹವೇ ಮೂಲಾಧಾರ
ನನ್ನ ಭಾವ ತರಂಗದ ಮಾತೆಂದು
ಮೌನಿಯಾದೆ ನಾ……

ಯಾರದೋ ಶಾಪಕ್ಕೆ ಮರೆತು
ಹೊರಟೆಯಾ ನನ್ನ
ನಿನ್ ಎದುರಲೇ ನಿಂತು ನಿನ್ನವನೆಂದು
ನೆನಪಿಸುತಿಹೇ ನಾ ! ಕ್ರೋಧದಿ ತೋರುವ
ಪ್ರೀತಿಯನ್ನು ನಿನ್ನಲ್ಲಿ ಕಂಡೆ ನಾ

- Advertisement -

ನೀ ಮರೆತು ಮರೆಯಾದರು ಈ
ಹೃದಯ ನಿನ್ನದೆಂದು ಮೌನಿಯಾಗಿಹೆ ನಾ
ದುಃಖದ ಕಡಲಲಿ ಕೊನೆಯಾಯಿತು
ನನ್ನ ಪ್ರೀತಿಯ ಪಯಣ

ಪ್ರೀತಿ ಹುಟ್ಟಿತೆಂದು
ಹೇಳಲಾರದೆ ನಿಂದೆ ನೀ
ಕೊಳಲ ನಾದಕೆ ಮೈ ಮರೆತು
ಸಖನ ರಾಸಲೀಲೆಯೊಳು ಮುಳುಗಿಹೆ ನೀ

ಪ್ರೀತಿಗೆ ಮೋಹವೆಂದ ನಾ
ಅವಳ ಮನಸ ಸೂರೆಗೊಳಿಸಿದವ ನಾ
ನಾನವಳ ಮನದೊಡೆಯನಾದರೇನು
ರಾಧೆ ನನ್ನವಳಲ್ಲ

- Advertisement -

ಆನಂದ ಬಬಲಿ, ನಾಗನೂರ
ಜಿಲ್ಲಾ – ಬೆಳಗಾವಿ

- Advertisement -
- Advertisement -

Latest News

ಮೈಸೂರು ರೋಟರಿ ಐವರಿ ಸಿಟಿ ವತಿಯಿಂದ ಮಾರ್ಗದರ್ಶಕ ಪ್ರಶಸ್ತಿ

ಮೈಸೂರು -ಮೈಸೂರು ನಗರದ ರೋಟರಿ ಐವರಿ ಸಿಟಿ ಅಫ್ ಮೈಸೂರು ವತಿಯಿಂದ ಜಯಲಕ್ಷ್ಮಿ ಪುರಂನ ಸತ್ಯ ಸಾಯಿಬಾಬಾ ಶಿಕ್ಷಣ ಸಂಸ್ಥೆಯ ಗೌರವ ಅಧ್ಯಕ್ಷರಾದ ಪ್ರೊಫೆಸರ್ ಕೆ.ಬಿ.ಪ್ರಭು...
- Advertisement -

More Articles Like This

- Advertisement -
close
error: Content is protected !!
Join WhatsApp Group