ಕವನ : ಹುಡುಕುತ್ತಿದ್ದೇನೆ

Must Read

ಹುಡುಕುತ್ತಿದ್ದೇನೆ

ಹುಡುಕುತ್ತಿದ್ದೇನೆ
ಶರಣರು ಕಂಡ ಕಲ್ಯಾಣ
ಹೊಸ ನೆಲ ಜಲ ಆಕಾಶ
ಗಾಳಿ ಬೆಳಕು ಸಿಗುತ್ತಿಲ್ಲ
ಸಿಕ್ಕರೂ
ಹೊಸ ಮನುಜರ
ಗುರುತು ಸಿಗುತ್ತಿಲ್ಲ
ಶರಣರ ರುಂಡ ಚೆಂಡಾಡಿದ
ಖಡ್ಗ ಕಠಾರಿ ಚೂರಿ
ಸಿಕ್ಕರೂ ಕೊಲೆಗಾರರ
ಗುರುತು ಸಿಗುತ್ತಿಲ್ಲ
ವಚನಗಳಿಗೆ ಕಿಚ್ಚು
ಹಚ್ಚಿದ ಹಿಲಾಲು
ದೀವಿಗೆ ಸಿಕ್ಕಿವೆ,
ಕಟ್ಟುಗಳ ಕೆಂಡಕ್ಕೆ
ಸುರುವಿದ ಮುಖಗಳು
ಸಿಗುತ್ತಿಲ್ಲ
ಅಣ್ಣ ಸಿಗಬಹುದೆಂದು
ಹುಡುಕುತ್ತಿದ್ದೇನೆ ಕಲ್ಯಾಣವ
ದೇವರ ಸಿಕ್ಕರೂ
ಸಿಗಲಿಲ್ಲ ಬಸವಣ್ಣ
ಅವರು ಕೊಡುವ
ಪ್ರಸಾದ ಬೊನಕ್ಕೆ
ತಟ್ಟೆಯೊಡ್ಡಿದೆ
ಹುಗ್ಗಿ ಹೋಳಿಗೆ ಸಿಕ್ಕಿತು
ಸಿಗಲಿಲ್ಲ ಪ್ರಸನ್ನತೆ
ಬಸವಣ್ಣನವರ ಕೊಂದವರೇ
ಇಂದು ಅವನ ಪುರಾಣ
ಪ್ರವಚನ ಮಾಡಿ
ಹಾಡಿ ಹೊಗಳುವ ಕಾವಿ
ಮಠಗಳು ಸಿಕ್ಕಿವೆ.
ದಾರಿಯುದ್ದಕ್ಕೂ
ಬಿಕ್ಕುವ ಧ್ವನಿ ಅಳುವ ಮಕ್ಕಳು
ಎಳೆಹೂಟಿಗೆ ಸಿಲುಕಿದ
ರಕ್ತದ ಕಲೆಗಳು ಸಿಕ್ಕಿವೆ
ಹುಡುಕುತ್ತೀದ್ದೇನೆ
ಕಲ್ಯಾಣ ಅನುಭವ ಮಂಟಪ
ಬಸವನ ಮಹಾಮನೆ

*ಡಾ ಶಶಿಕಾಂತ ಪಟ್ಟಣ ರಾಮದುರ್ಗ*

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group