Homeಸುದ್ದಿಗಳು 'ಹಂಸ ಜ್ಯೋತಿ ಸುವರ್ಣ ಸಂಭ್ರಮಾಚರಣೆ ' ಮತ್ತು ೧೦ ಜನ ಸಾಧಕೋತ್ತಮರಿಗೆ 'ಹಂಸ ಸಮ್ಮಾನ್' ೨೦೨೫...

 ‘ಹಂಸ ಜ್ಯೋತಿ ಸುವರ್ಣ ಸಂಭ್ರಮಾಚರಣೆ ‘ ಮತ್ತು ೧೦ ಜನ ಸಾಧಕೋತ್ತಮರಿಗೆ ‘ಹಂಸ ಸಮ್ಮಾನ್’ ೨೦೨೫ ಪ್ರಶಸ್ತಿ ಪ್ರದಾನ ಸಮಾರಂಭ

ಬೆಂಗಳೂರು-   ನಾಡಿನ ಸಾಂಸ್ಕೃತಿಕ ಚಳವಳಿಯ ಸಂದರ‍್ಭದಲ್ಲಿ ಪ್ರಮುಖ ಸಂಸ್ಥೆಯಾದ ಹಂಸ ಜ್ಯೋತಿಯ ಸುವರ‍್ಣ ಸಂಭ್ರಮಾಚರಣೆ ; ಹಂಸ ಸಾಂಸ್ಕೃತಿಕ ಸಂಭ್ರಮ ಅಂತರಾಷ್ಟ್ರೀಯ ಯೋಗ ಮತ್ತು ಸಂಗೀತ ದಿನಾಚರಣೆ ಅಂಗವಾಗಿ ಹಂಸ – ಸಂಗೀತ ,ನೃತ್ಯ ಯೋಗ ಮಿಲನ ಮತ್ತು ೧೦ ಜನ ಸಾಧಕೋತ್ತಮರಿಗೆ ಪ್ರತಿಷ್ಠಿತ ‘ಹಂಸ ಸಮ್ಮಾನ್ ‘೨೦೨೫ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಜೂನ್ ೨೧ ಶನಿವಾರ ಸಂಜೆ ೪:೦೦ ರಿಂದ ನಗರದ ಅರಮನೆ ರಸ್ತೆ ಮಹಾರಾಣಿ ಕಾಲೇಜು ಪಕ್ಕದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಆವರಣದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಆಯೋಜಿಸಲಾಗಿದೆ .

ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ .ಜಗದೀಶ್ ಭಾ.ಆ.ಸೆ ರವರು ಕಾರ‍್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ,ಹಿರಿಯ ರಂಗಸಂಘಟಕ ಮತ್ತು ಕರ‍್ನಾಟಕ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಶ್ರೀನಿವಾಸ ಜಿ ಕಪ್ಪಣ್ಣ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಬೆಂಗಳೂರು ನಗರ ಜಿಲ್ಲಾ ಪಂಚಾಯತಿ ಮುಖ್ಯ ಕಾರ‍್ಯನಿರ‍್ವಹಣಾಧಿಕಾರಿ ಕೆ ಎಸ್ ಲತಾ ಕುಮಾರಿ ಭಾ.ಆ.ಸೆ ,ಹಿಂದುಳಿದ ವರ‍್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಆಡಳಿತ ಅಧಿಕಾರಿ ನಿರುಪಮ ಸಿ ಮೌಳಿ ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಗೌ .ಪ್ರಧಾನ ಕಾರ‍್ಯದರ್ಶಿ ನಾಡೋಜ ಡಾ .ವೂಡೆ ಪಿ ಕೃಷ್ಣ, ಕಿದ್ವಾಯಿ ಸ್ಮಾರಕ ಗ್ರಂಥಿ ಆಸ್ಪತ್ರೆಯ ನಿವೃತ್ತ ನಿರ‍್ದೇಶಕ ಡಾ. ಸಿ. ರಾಮಚಂದ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ವಿಭಾಗದ ಜಂಟಿ ನಿರ‍್ದೇಶಕ ಅಶೋಕ್ ಎನ್ ಚಲವಾದಿ ,ಮಾಜಿ ಶಾಸಕ ಎಸ್ ಬಾಲರಾಜ್, ಸಮಾಜಸೇವಕ ಎಸ್. ಟಿ. ಉದಯಕುಮಾರ್ , ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ. ಎಂ ಮುನಿನಾರಾಯಣಪ್ಪ ಭಾಗವಹಿಸಲಿದ್ದಾರೆ.

ವಿಶೇಷ ಆಹ್ವಾನಿತರಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಬೆಂಗಳೂರು ನಗರ ಜಿಲ್ಲಾ ಸಹಾಯಕ ನಿರ‍್ದೇಶಕ ಆರ್. ಚಂದ್ರಶೇಖರ್ ,ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ‍್ದೇಶಕಿ ಗೀತಾ ಆರ್ ,ಚಲನಚಿತ್ರ ನಿರ‍್ಮಾಪಕಿ ಡಾ.ಸುಕನ್ಯಾ ಹಿರೇಮಠ ,ಅಖಿಲ ಕರ‍್ನಾಟಕ ಸರ‍್ಕಾರಿ ಮಹಿಳಾ ನೌಕರರ ಸಂಘದ ರಾಜ್ಯಾಧ್ಯಕ್ಷ ರೋಷಣಿ ಗೌಡ, ಕರ‍್ನಾಟಕ ಪದ್ಮಶಾಲಿ ಸಂಘದ ಅಧ್ಯಕ್ಷ ಎನ್ ಜಗದೀಶ್ , ಲೆಕ್ಕ ಪರಿಶೋಧಕ ಕೆ. ಅಂಜನ್ ಕುಮಾರ್ , ಗೊರವನಹಳ್ಳಿ ಮಹಾಲಕ್ಷ್ಮಿ ದೇವಸ್ಥಾನದ ಧರ‍್ಮದರ್ಶಿ ಎಸ್ ಶ್ರೀಪ್ರಸಾದ್ ,ಉದ್ಯಮಿ ಜಯರಾಮ ಶೆಟ್ಟಿ ಉಪಸ್ಥಿತರಿರುವರು .

ಹತ್ತು ಜನ ಸಾಧಕೋತ್ತಮರಿಗೆ ‘ಹಂಸ ಸನ್ಮಾನ ೨೦೨೫ ‘ ಪ್ರಶಸ್ತಿ ಪ್ರದಾನ ; ಸಾಂಸ್ಕೃತಿಕ -ಶೈಕ್ಷಣಿಕ -ಸಾಮಾಜಿಕ ರಂಗದಲ್ಲಿ ಅನನ್ಯ ಕೊಡುಗೆ ನೀಡಿರುವ ನಾಡಿನ ೧೦ ಸಾಧಕೋತ್ತಮರಿಗೆ ೨೦೨೫ ನೇ ಸಾಲಿನ ಹಂಸ ಜ್ಯೋತಿ ಸುವರ‍್ಣ ಸಂಭ್ರಮಾಚರಣೆ ‘ಹಂಸ ಸಮ್ಮಾನ್ ‘ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು.

ಭಾರತೀಯ ಭೂ ವೈಜ್ಞಾನಿಕ ಸಮೀಕ್ಷೆ ಮಹಾ ನಿರ‍್ದೇಶಕ ಡಾ. ಕೆ ವಿ ಕೃಷ್ಣಮೂರ‍್ತಿ , ಕರ‍್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರದ ಹಿರಿಯ ಕಲಾವಿದ ವಿದ್ವಾನ್ ಆರ್ ಕೆ ಪ್ರಸನ್ನ ಕುಮಾರ್ ,ಬೆಂಗಳೂರು ನಗರ ವಿಶ್ವವಿದ್ಯಾಲಯದ ಕೆನರಾ ಬ್ಯಾಂಕ್ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್ ಪ್ರಾಧ್ಯಾಪಕಿ ಮತ್ತು ನಿರ‍್ದೇಶಕಿ ಡಾ .ನಿರ‍್ಮಲ ಎಂ, ಕ್ರೀಡಾ – ಯುವ ಸಬಲೀಕರಣ ಇಲಾಖೆಯ ಸಹಾಯಕ ನಿರ‍್ದೇಶಕಿ ಕೆ .ಶಶಿಕಲಾ ,ರೂಪಕಲಾ ನೃತ್ಯ ಶಾಲೆಯ ನಿರ‍್ದೇಶಕಿ ಖ್ಯಾತ ನೃತ್ಯ ಕಲಾವಿದೆ ವಿದುಷಿ ರೂಪಶ್ರೀ ಅರವಿಂದ ,ಕರ‍್ನಾಟಕ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದ ಮಹಿಳಾ ವಿಭಾಗ ಅಧ್ಯಕ್ಷೆ ಉಮಾ ಜಗದೀಶ ,ಓಂ ಯೋಗ ಮತ್ತು ಧ್ಯಾನ ತರಬೇತಿ ಕೇಂದ್ರದ ನಿರ‍್ದೇಶಕಿ ಕೆ ಎಸ್ ಕೊಟ್ರಮ್ಮ ,ಮಾರುತಿ ಸಿಲ್ಕ್ಸ್ ನಿರ‍್ವಾಹಕ ಹೆಚ್ .ಲೋಕೇಶ್ ,ಕರ‍್ನಾಟಕ ಯುವ ಸಂಸ್ಥೆಗಳ ಒಕ್ಕೂಟದ ರಾಜ್ಯ ಪ್ರಧಾನ ಕಾರ‍್ಯದರ‍್ಶಿ ಡಿ ಫಣಿಂದ್ರ ಪ್ರಸಾದ್ ಹಾಗೂ ಮಹಾರಾಷ್ಟ್ರ ಮುಂಬೈನ ಆಲ್ ಇಂಡಿಯಾ ಪಿಕಲ್ ಬಾಲ್ ಸಂಸ್ಥೆ ಇವರುಗಳು ಈ ಸನ್ಮಾನಕ್ಕೆ ಭಾಜನರಾಗಲಿದ್ದಾರೆ .

ವೈವಿಧ್ಯಮಯ ಹಂಸ ಸಾಂಸ್ಕೃತಿಕ ಸಂಭ್ರಮ :
ಸುನಾದ ತರಂಗಿಣಿ ತಂಡವರಿಂದ ಹಂಸ ಗಾನ ನಾದ ವೈಭವ ನಡೆಯಲಿದೆ .ವಿದ್ವಾನ್ ಬೆಟ್ಟ ವೆಂಕಟೇಶ್ ನಿರ‍್ವಹಣೆಯಲ್ಲಿ ವಿದ್ವಾನ್ ಆರ್ ಕೆ ಪ್ರಸನ್ನಕುಮಾರ್ -ಗಾಯನ ; ವಿದ್ವಾನ್ ಆರ್‌ಪಿ ಪ್ರಶಾಂತ್- ವೀಣೆ; ವಿದುಷಿ ಭಾರತಿ ಬಾಬು -ವೀಣೆ; ವಿದ್ವಾನ್ ರಾಹುಲ್ ವೆಂಕಟೇಶ್ -ಕೊಳಲು ;ವಿದ್ವಾನ್ ಬೆಟ್ಟ ವೆಂಕಟೇಶ್ -ಮೃದಂಗ; ವಿದ್ವಾನ್ ಸುಬ್ರಮಣ್ಯ ಮೋಹಿತೆ -ಖಂಜಿರ ; ವಿದ್ವಾನ್ ನಟರಾಜ ತಮ್ಮಯ್ಯ – ಘಟಂ ; ವಿದ್ವಾನ್ ಎಸ್ ಮುಕುಂದ- ಡೋಲಕ್ ;ವಿದ್ವಾನ್ ರಘುರಾಮಕೃಷ್ಣ- ತಬಲ ; ವಿದ್ವಾನ್ ಕರ‍್ತಿಕ್ ಮೋಹಿತೆ -ಮರ‍್ಚಿಂಗ್ ಪಕ್ಕವಾದ್ಯದಲ್ಲಿ ಸಹಕರಿಸಲಿದ್ದಾರೆ .

ಹೆಚ್ ವಿ ನಾಗರಾಜ್ ನಿರ‍್ವಹಣೆಯಲ್ಲಿ ಕರ‍್ನಾಟಕ ಯೋಗ ಕ್ರೀಡಾ ಕೇಂದ್ರದ ವೈವಿಧ್ಯಮಯ ಯೋಗ ಪ್ರದರ‍್ಶನ ಮತ್ತು ಶ್ರೀಮತಿ ಸವಿತಾ ನಿರ‍್ವಹಣೆಯಲ್ಲಿ ಓಂ ಯೋಗ ಮತ್ತು ಧ್ಯಾನ ತರಗತಿ ಅವರಿಂದ ಯೋಗ ನೃತ್ಯ ಪ್ರದರ‍್ಶನ ಆಯೋಜಿಸಿದೆ. ವಿದುಷಿ ರೂಪಶ್ರೀ ಅರವಿಂದ ನಿರ‍್ದೇಶನದಲ್ಲಿ ರೂಪಕಲ ನೃತ್ಯಶಾಲಾ ಕಲಾವಿದರಿಂದ ಹಂಸ ನೃತ್ಯ ವೈಭವ ಸಾಮೂಹಿಕ ನೃತ್ಯ ಪ್ರರ‍್ಶನವನ್ನು ರ‍್ಪಡಿಸಲಾಗಿದೆ ಎಂದು ಹಂಸ ಜ್ಯೋತಿ ವ್ಯವಸ್ಥಾಪಕ ಟ್ರಸ್ಟಿ ಎಂ ಮುರಳಿದರ ಮತ್ತು ಕಾರ‍್ಯನಿರ‍್ವಾಹಕ ಟ್ರಸ್ಟಿ ವಿಜಯ ಮುರುಳಿಧರ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ .
ವಿವರಗಳಿಗೆ ೯೪೪೮೦ ೯೩೪೦೯

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group