ಕವನ : ಹೆಸರಾದನು ಬಸವಣ್ಣ

Must Read

ಹೆಸರಾದನು ಬಸವಣ್ಣ

ಹೆಸರಾದನು ಬಸವಣ್ಣ
ಉಸಿರಾಗಲಿ ಲಿಂಗಾಯತ
ಗುರು ಲಿಂಗ ಬೀಜಗಳ
ಹಸಿರಾಗಲಿ ಜಂಗಮ

ದುಡಿವವರ ಮೂಲ ಮಂತ್ರ
ಕಾಯಕವೇ ಕೈಲಾಸ
ಕೊಲ್ಲಬೇಡಿ ಬಸವ ಧರ್ಮ
ಸಾಕು ನಿಮ್ಮ ಕರ್ಮ

ಇಲ್ಲ ಬಸವ ಮಠಗಳಲ್ಲಿ
ಇಲ್ಲ ಕಾವಿ ಪೀಠದಲಿ
ಸತ್ಯ ಪ್ರೇಮ ಶಾಂತಿ ಪ್ರೀತಿ
ಸಮತೆ ಸೂರ್ಯ ಕಾಂತಿ

ರಾಜಕೀಯ ಕೆಸರಿನಲ್ಲಿ
ಸಿಲುಕದಿರಲಿ ಶರಣ ತತ್ವ
ಮುಸುಕು ಹರಿದು ಬೆಳಗಾಗಲಿ
ಬಸವನೆಂಬ ದಿವ್ಯ ಜ್ಯೋತಿ

ಅಗ್ರಹಾರದ ಗುಲಾಮರಲ್ಲ
ಕಿತ್ತೊಗೆಯಿರಿ ಭ್ರಮೆ ಭ್ರಾಂತಿ
ಹಸಿ ರಕ್ತ ಹರಿದಿದೆ
ಮರೆಯಬೇಡಿ ಬಸವ ಕ್ರಾಂತಿ
_________________________

ಡಾ ಶಶಿಕಾಂತ ಪಟ್ಟಣ ರಾಮದುರ್ಗ    9552002338

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group