ಕವನ : ಕರುನಾಡಿನ ಒಡೆಯರು

Must Read

ಕರುನಾಡಿನ ಒಡೆಯರು

ಸತ್ಯ ಹೇಳಲು ಹೆದರಲಿಲ್ಲ
ನಿತ್ಯ ಮುಕ್ತಿಯ ಶರಣರು.
ಸದ್ದು ಮಾಡದೆ ಯುದ್ಧ ಮಾಡಿ
ಮಣ್ಣಿನಲ್ಲಿ ಗೆದ್ದರು .

ವರ್ಗ ವರ್ಣದ ಕಸವ ಕಿತ್ತು
ಸಮತೆ ಸಸಿಯನ್ನು ನೆಟ್ಟರು
ಸತ್ಯ ಶಾಂತಿ ವಿಶ್ವ ಪ್ರೀತಿ
ಮನುಜ ಪಥಕೆ ನಡೆದರು.

ಶ್ರಮಿಕರೆಲ್ಲ ದುಡಿದು ಬಂದರು
ಕೂಡಿ ಹಂಚಿ ತಿಂದರು.
ದಯೆ ಧರ್ಮ ಭಾಷೆ ನುಡಿದರು
ಹೊಸ ಮುನ್ನುಡಿ ಬರೆದರು.

ಶರಣ ಶರಣೆಯರು ಖಡ್ಗವೆತ್ತಿ
ವಚನ ಕಾಯ್ದು ಕೊಟ್ಟರು.
ಅಪ್ಪ ಬಸವನ ಕನಸಿನಂತೆ
ಕ್ರಾಂತಿ ಕಹಳೆ ದುಡಿಯ ಬಡಿದರು.

ಎತ್ತ ಹೋದರು ನನ್ನ ಶರಣರು ?
ಸತ್ತು ಬದುಕಿದ ಯೋಧರು
ಬಯಲಿನೊಳಗೆ ಬಯಲಾದರು.
ಕರುನಾಡಿನ ಒಡೆಯರು.
————————————-
ಡಾ.ಶಶಿಕಾಂತ.ಪಟ್ಟಣ -ಪೂನಾ

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group