ಕವನ : ಕರುಣದಿಂದಲಿ ಕಾಯೋ ಗುರುರಾಯ

Must Read

ಕರುಣದಿಂದಲಿ ಕಾಯೋ ಗುರುರಾಯ

ಕಲಿಯುಗ ದೈವ ಶ್ರೀ ರಾಘವೇಂದ್ರ
ಒಲಿದರೆ ಯಾವುದೇ ಭಯವಿಲ್ಲ
ನಲಿಯುವಿರೆಲ್ಲ ರಾಯರ ಕೃಪೆಯಿಂ
ಕಾಲಿಟ್ಟಲ್ಲಿ ಬರೀ ಜಯವೆಲ್ಲ

ಕರುಣಾಸಾಗರ ಈ ನಮ್ಮ ದೇವರು
ಹರಸುವರೆಲ್ಲರ ಕೃಪೆ ತೋರಿ
ನರವೇಷ ತೊಟ್ಟು ಭುವಿಗೆ ಬಂದಿಹ
ಪರಶಿವನೇ ಸರಿ ಕೈ ಮುಗಿರಿ

ಗುರುವಾರದ ದಿನ ಗುರುವಿನ ಧ್ಯಾನ
ಅರಿವಿನ ಹೊಳೆಯನೆ ಹರಿಸುವನು
ಬರಿಗೈ ಇರಲಿ, ಧನಿಕನೆ ಬರಲಿ
ಸರಿಸಮನಾಗಿ ಕಾಣುವನು

ತಂದೆಯು ನೀನೇ, ತಾಯಿಯು ನೀನೇ
ಬಂಧು ಬಳಗವು ನೀನಯ್ಯ
ಚೆಂದದ ಭಾವವ ಕರುಣಿಸಿ ಕಾಯೋ
ಮಂದಮತಿಯು ನಾ ಬಿಡದಿರು ಕೈಯ.

✍️ ಶ್ರೀಮತಿ ಕಮಲಾಕ್ಷಿ ಕೌಜಲಗಿ
ಬೆಂಗಳೂರು

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group