ಕವನ : ದೀಪಾವಳಿ

Must Read

ದೀಪಾವಳಿ

ಸಾಲು ಸಾಲು
ದೀಪಗಳು
ಕಣ್ಣುಗಳು ಕೋರೈಸಲು
ಒಳಗಣ್ಣು ತೆರೆದು
ನೋಡಲು
ಜೀವನದ ಮರ್ಮ
ಕರ್ಮ ಧರ್ಮಗಳನು
ಅರಿಯಲು
ಸಾಲು ಸಾಲು
ದೀಪಗಳು
ಮೌಢ್ಯವ ಅಳಿಸಲು
ಜ್ಞಾನವ ಉಳಿಸಿ
ಬೆಳೆಸಲು
ಸಾಲು ಸಾಲು
ದೀಪಗಳು
ಮನೆಯನು ಬೆಳಗಲು
ಮನವನು ತೊಳೆಯಲು
ಸಾಲು ಸಾಲು
ದೀಪಗಳು
ನಮ್ಮ ನಿಮ್ಮ
ಎಲ್ಲರ ಮನೆ
ಹಾಗೂ ಮನವನು
ಬೆಳಗಲಿ
ಮಾನವೀಯತೆಯ
ಜ್ಯೋತಿ ಎಲ್ಲೆಡೆ
ಪಸರಿಸಲಿ
ಶುಭ ದೀಪಾವಳಿ 🌹

ಡಾ. ಜಯಾನಂದ ಧನವಂತ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group