ಕುವೆಂಪು ಹೇಗೆ ನಾ ಮರೆಯಲಿ
ವಸಂತ ಕಾಲ ನನ್ನೇ ನಾ ಮರೆವೆ
ರಾಷ್ಟ್ರಕವಿಯು ಕುವೆಂಪು ನೆನಪು
ಹೇಗೆ ನಾನು ಮರೆಯಲಿ
ಕವಿಯೇ ನಿಮ್ಮ ಕವಿತೆಯಲ್ಲಿ
ವಿಶ್ವ ಮಾನವ ಸಂದೇಶ ಇರುವಲ್ಲಿ
ನಾಡ ಗೀತೆ ಬರೆದ ಕವಿಯ
ಹೇಗೆ ನಾನು ಮರೆಯಲಿ
ಮಳೆಗಾಲದ ದಟ್ಟ ಅನುಭವ
ಕಟ್ಟಿ ಬರೆದರು ಕಥೆಗಳಲ್ಲಿ
ಮಲೆನಾಡಿನ ಜನರ ಜೀವನ
ಕಣ್ಣು ಮುಂದೆ ತೇಲಿ ಬರುತಲಿ
ಹೇಗೆ ನಾನು ಮರೆಯಲಿ
ದೃಶ್ಯ ಕಾವ್ಯ ರಮ್ಯ ನಾಟಕ
ಜಲಗಾರ ರಕ್ತಾಕ್ಷಿ ರುದ್ರನಾಟಕ
ಪುರಾಣ ಕಾವ್ಯ ರಾಮಾಯಣ
ದರ್ಶನ ತೋರಿದ ಕವಿಯ
ಹೇಗೆ ನಾನು ಮರೆಯಲಿ
ಅಂಕುಶದ ಹಂಗಿಲ್ಲದೆ
ಎದೆಯ ಬೆಳಕಿನ ಆಸರೆಯಲ್ಲಿ
ಜಗಕೆ ಬೆಳಕಾಗುವ
ಈ ಸನ್ಮತಿ ನನಗಿರಲಿ
—
ಗೊರೂರು ಅನಂತರಾಜು,
ಹಾಸನ
9449462879

