ಕವನ : ಎಲ್ಲಿ ಹೋದಿರಿ

Must Read

ಎಲ್ಲಿ ಹೋದಿರಿ

ದಿನವಿಡಿ ದುಡಿದು
ಬಳಲಿ ಬೆಂಡಾದ ಜೀವ
ಉಂಡು ಹಾಸಿಗೆ ಮೇಲೆ
ನಿಮ್ಮ ಹುಡುಕುತಿರುವೆ
ಎಲ್ಲಿ ಹೋದಿರಿ ನನ್ನ
ಸುಂದರ ಕನಸುಗಳೇ

ನೋವಿಗೆ ತಂಪು ನಿಮ್ಮಾಶ್ರಯ
ನೆಮ್ಮದಿ ಸುಖ ತೃಪ್ತಿ
ಸಂತಸದ ಹೊನಲು
ದಣಿವು ದೇಹಕೆ
ಮನಸಿಗೆ ನಿಮ್ಮ ಬಣ್ಣದ
ಬಯಕೆಗಳ ಸಂಭ್ರಮ

ಎನ್ನೆದೆಯ ಗೂಡಿನಲ್ಲಿ
ಒಣಗಿದ ಮರದ ಬೇರು
ಇರಲಿ ನಿಮ್ಮ ಸ್ನೇಹ ಪ್ರೀತಿ
ಒಲವು ಸಿಂಚನ
ಸುಳಿ ಬಿಟ್ಟು ಹೊರ ಬರಲಿ
ನಗೆ ಸ್ಪೂರ್ತಿ ಹಸಿರು ತೆನೆಯು
__________________________
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

LEAVE A REPLY

Please enter your comment!
Please enter your name here

Latest News

ಸಾಹಿತಿ, ಅಂಕಣಕಾರ ಬನ್ನೂರು ಕೆ. ರಾಜು ಅವರ ಚಿಕಿತ್ಸೆಗೆ ಸರ್ಕಾರ ಸ್ಪಂದಿಸಲಿ

ಸಾಹಿತಿ, ಸಂಸ್ಕೃತಿಯ ಸಂಘಟಕ, ಅಂಕಣ ಬರಹಗಾರ, ಪತ್ರಕರ್ತ, ಕನ್ನಡ ನೆಲ, ಜಲ, ಭಾಷೆ ವಿಷಯಕ್ಕೆ ಬಂದಾಗ ಹೋರಾಟಕ್ಕೆ ನಿಲ್ಲುವ ಕನ್ನಡ ಪ್ರೇಮಿ, ಕವಿ ಬನ್ನೂರು ಕೆ...

More Articles Like This

error: Content is protected !!
Join WhatsApp Group