Homeಕವನಜಾನಪದ ಕವಿತೆ: ಸುಗ್ಗಿ ಸಂಭ್ರಮ

ಜಾನಪದ ಕವಿತೆ: ಸುಗ್ಗಿ ಸಂಭ್ರಮ

ಸುಗ್ಗಿ ಸಂಭ್ರಮ

ಕೊಡ್ಡಾರೆ ಕಡಿದರೆ ||ಹೊಡ್ಡವ ಹಾಕ್ಯಾರ||
ಬಂಡಿ ಬಂಡಿಯ ಗೊಬ್ಬರ ಹಾಕ್ಯಾರ||
ತೆಳ್ಳಗ ,,,,ಹರಿ ವ್ಯಾರಿ||

ತೆಳ್ಳಗ,,, ಹರವಲ್ಲಿ||ಹೊಳ್ಳಿ ಹೋಳ್ಳಿ ಮಳೆ ಬಂದು||
ಒಳ್ಳೆಯವರ ಭೂಮಿ ಹಸಿಯಾಗಿ||
ದೈವ ,,,,,ಖುಷಿಯಾಗಿ||

ಕೂರಿಗಿ ನಿಂದರು ಶಾರೆ||ಸುರೇಶನ ಮಾರಿಗೆ||
ಕೈ ಮುಚ್ಚಿ ಬೀಜ ಬಿತ್ತು ವರ||
ಹೂಲಿಗೆ,,,,ಎಂದಾರೆ||

ಕೈ ಮುಚಿಯ ಬೀಜ ಬಿಟ್ಟರೆ||ನೋಡ್ಯಾರ||
ಬಂಗಾರದ ಬೆಳೆಯ ಬೆಳದಾರ||
ಅವನ,,,, ಭಾವ ಚಂದ||

ಗೆಜ್ಜಿ ಹಚ್ಚಿದ ಕುಡುಗೋಲು|| ಬಗ್ಗಿ ಬಗ್ಗಿ ಕೊಯ್ದರೆ||
ಸಣ್ಣ ಸಣ್ಣ ಸೂಡ ಬೀಗಿದ್ದಾರೆ||
ಬಣಮಿ,,,,ಒಟ್ಟಾರೆ||

ದೊಡ್ಡದೊಂದು ಹೊಲದಾಗ||
ದೊಡ್ಡದೊಂದು ಕಣ ಮಾಡಿ||
ಐದು ಮಂದಿ ಮುತ್ತೈದೆಯರಿಗೆ ಕರಿ ಸಾರೆ||
ಗೂಡ,,,ಮುರಿ ಸ್ಯಾರಿ||

ಹಂತಿಯ ಹೊಡೆಯ ಅಣ್ಣನ||
ಏನಂತ ಕರೆಯಲಿ||
ಗೌರಮ್ಮನ ಮಗ ಗಣಪಣ್ಣ||
ಮ್ಯಾಲೆ,,, ಬಸವಣ್ಣ||

ಶ್ರೀಮತಿ ಅನುಸೂಯ ಬಾಯಿ. ಎಸ್. ನಾಗನಹಳ್ಳಿ ಗೌರ್ಮೆಂಟ್ ಎಂಪಿಎಸ್ ಲಾಡ ಚಿಂಚೋಳಿ ತಾಲೂಕ್ ಆಳಂದ ಜಿಲ್ಲಾ ಕಲಬುರಗಿ

RELATED ARTICLES

Most Popular

error: Content is protected !!
Join WhatsApp Group