- Advertisement -
ಚಾಮರಾಜನಗರ: ಅಂತಾರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಅಬು ಪರ್ವತ ರಾಜಸ್ಥಾನದಲ್ಲಿ ನವೆಂಬರ್ ೧೩ ರಿಂದ ೧೭ರವರೆಗೆ ಕನ್ನಡ ರಾಜ್ಯೋತ್ಸವ ಹಾಗೂ ಆತ್ಮ ಪರಮಾತ್ಮ ಅನುಭೂತಿ ಶಿಬಿರಕ್ಕೆ ನಗರದ ೧೯ ಜನರ ತಂಡಕ್ಕೆ ನಗರದಿಂದ ಬೀಳ್ಕೊಡಲಾಯಿತು.
ಏಷ್ಯಾದಲ್ಲೇ ೨ ನೇ ಸ್ಥಾನದಲ್ಲಿರುವ ಮಧ್ಯೆ ಕಂಬವಿಲ್ಲದೆ ನಿರ್ಮಾಣಗೊಂಡಿರುವ ಡೈಮಂಡ್ ಜೂಬಿಲಿ ಹಾಲ್ ನಲ್ಲಿ ೫ ದಿನಗಳು ನಡೆಯುವ ಈ ಕಾರ್ಯಕ್ರಮದಲ್ಲಿ ಕರ್ನಾಟಕದಿಂದ ೩೦೦೦೦ ಹೆಚ್ಚು ಶಿಬಿರಾರ್ಥಿಗಳು ಭಾಗವಹಿಸಲಿದ್ದಾರೆ. ನಗರದ ಸೇವಾಧಾರಿ ತಂಡದ ನೇತೃತ್ವವನ್ನು ರಾಜಯೋಗಿನಿ ಬ್ರಹ್ಮಾಕುಮಾರಿ ದಾನೇಶ್ವರೀಜಿ ವಹಿಸಿದ್ದಾರೆ.
ತಂಡದಲ್ಲಿ ಓಂಶಾಂತಿ ನ್ಯೂಸ್ ಸರ್ವೀಸ್ ನ ಬಿಕೆ ಆರಾಧ್ಯ ಶಿವಕುಮಾರ್, ಗೋವಿಂದರಾಜ ಜಯರಾಂ ನಾಗರಾಜ್ ಮಹದೇವಸ್ವಾಮಿ ಆಶಾ ಸುಧಾ ಬಸಮಣಿ ನಿರ್ಮಲ ಸರಳ ಮಂಜುಳ ಸರಸ್ವತೀ ಪ್ರಮಿಳ ಸುಕನ್ಯ ಪ್ರಕಾಶ್ ಮುಂತಾದವರು ಇದ್ದಾರೆ.