spot_img
spot_img

ಊರ ಜಾತ್ರೆಯಲ್ಲೂ ರಿಪೇರಿಯಾಗದ ಮೂಡಲಗಿ ಸೇತುವೆ

Must Read

- Advertisement -

ಜಾತ್ರೆಗೆ ಬಂದವರ ಛೀ… ಥೂ… ಗಳೇ ಪುರಸಭೆಗೆ ಬೆಂಡು ಬತ್ತಾಸು !!

ಮೂಡಲಗಿ: ಮೂಡಲಗಿಯ ಪುರಸಭೆಯ ಕಾರ್ಯವೈಖರಿ ಎಷ್ಟೊಂದು ಜಡ್ಡುಗಟ್ಟಿದೆಯೆಂಬುದಕ್ಕೆ ಒಂದೆ ಒಂದು ಉದಾಹರಣೆ ಎಂದರೆ ಊರ ಮಧ್ಯದಲ್ಲಿಯೇ ಇರುವ ಹಳ್ಳದ ಸಣ್ಣ ಸೇತುವೆ !

ಈ ಸೇತುವೆ ಪಾಪ ಏನು ಪಾಪ ಮಾಡಿದೆಯೋ ಏನೋ ರಿಪೇರಿ ಭಾಗ್ಯ ಇದಕ್ಕೆ ಇಲ್ಲ. ಪುರಸಭೆಯಿಂದ ಹಿಡಿದು ಶಾಸಕರ ತನಕ ಈ ಸೇತುವೆಯ ರಿಪೇರಿ ಬಗ್ಗೆ ಮನವಿಗಳು ಹೋದರೂ ಏನೂ ಪ್ರಯೋಜನವಿಲ್ಲದಾಯಿತು. ಅದು ಹೋಗಲಿ ಈಗ ಆ ಶಿವಬೋಧರಂಗನ ಜಾತ್ರೆಗೆ ಇಡೀ ಊರೇ ಶಿಂಗಾರಗೊಂಡಿದ್ದರೂ ಈ ಪೂಲ್ ಮಾತ್ರ ತಗ್ಗು ದಿನ್ನೆಗಳಿಂದ ತುಂಬಿಕೊಂಡು, ಮಳೆ ನೀರಿನಿಂದ ತುಂಬಿಕೊಂಡು ಗಬ್ಬುನಾರುತ್ತಿದೆ. ಪುರಸಭೆ ಅಧಿಕಾರಿಗಳಿಗೆ ಮಾತ್ರ ಇದರ ವಾಸನೆ ಬಡಿಯುತ್ತಿಲ್ಲ. ಕನಿಷ್ಟ ಪಕ್ಷ ಅದರಲ್ಲಿನ ತಗ್ಗುಗಳನ್ನು ಕೂಡ ಮುಚ್ಚುವ ಯೋಗ್ಯತೆಯಿಲ್ಲವಾಯಿತೆ ಮೂಡಲಗಿ ಮುನ್ಸಿಪಾಲಿಟಿಗೆ ? ಇದು ಸ್ವಚ್ಛ ಭಾರತ ಅಭಿಯಾನದಲ್ಲಿ ಪ್ರಶಸ್ತಿ ಪಡೆದುಕೊಂಡಿದೆ !! ಅಬ್ಬಾ !!

- Advertisement -

ಶ್ರೀ ಶಿವಬೋಧ ರಂಗನ ಜಾತ್ರೆಯ ನಿಮಿತ್ತ ಊರ ತುಂಬೆಲ್ಲ ರಸ್ತೆಗಳಿಗೆ ನೀರು ಹಾಕಲಾಗುತ್ತಿದೆ. ಈ ಪೂಲ್ ಮೇಲೆ ಮಾತ್ರ ಈಗಾಗಲೇ ನೀರು ನಿಂತು ಕೊಳಚೆಯಂತಾಗಿದೆ ! ಪರ ಊರುಗಳಿಂದ ಜಾತ್ರೆಗೆಂದು ಬಂದ ಬೀಗರು ಬಿಜ್ಜರು ಈ ಸೇತುವೆಯನ್ನು ಕಂಡು ಮೂಡಲಗಿಯ ವೈಭವವನ್ನು ಹಾಡಿ ಹೊಗಳುತ್ತಾರೆ. ಬೇರೆ ಊರುಗಳಲ್ಲಿ ನೌಕರಿಗೆಂದು ಹೋಗಿರುವವರು ಊರ ಜಾತ್ರೆಗೆ ಬರುತ್ತಾರೆ, ಅರೆ, ಈ ಪೂಲು ಇನ್ನೂ ರಿಪೇರಿ ಆಗೇ ಇಲ್ಲವಾ ! ನಾನು ಚಿಕ್ಕವನಿದ್ದಾಗಿನಿಂದಲೂ ಹೀಗೆಯೇ ಇದೆ,  ಧನ್ಯ ಧನ್ಯ ಮೂಡಲಗಿ ಪುರವಾಸಿಗಳು ! ಎಂದು ಹಾಡು ಹಾಡುತ್ತಾರೆ. ಆ ಹಾಡುಗಳಲ್ಲಿ ವ್ಯಂಗ್ಯವಾಗಿ ಮಿಶ್ರಿತವಾಗಿರುವ ಛೀ….ಥೂ…ಎಂಬುದನ್ನು ನಾವು ವಿಧಿಯಿಲ್ಲದೆ ಸ್ವೀಕಾರ ಮಾಡಬೇಕಾಗುತ್ತದೆ. ಯಾಕೆಂದರೆ, ಅಂಥ ಪುರಸಭೆಯ ಆಡಳಿತ ಮಂಡಳಿ, ಅಧಿಕಾರಿ ವರ್ಗವನ್ನು ನಾವು ಹೊಂದಿದ್ದೇವೆ ಅದಕ್ಕಾಗಿ ನಮ್ಮ ಬೆನ್ನು ನಾವೇ ತಟ್ಟಿಕೊಳ್ಳಬೇಕು ಅಲ್ಲವೆ ? 

ಒಂದು ಪೂಲ್ ರಿಪೇರಿ ಮಾಡದ ಪುರಸಭೆ ಊರು ಸುಧಾರಣೆ ಮಾಡುತ್ತದೆಯೆಂಬ ತಿರುಕನ ಕನಸಿನಲ್ಲಿ ಮೂಡಲಗಿ ನಾಗರಿಕರಿದ್ದಾರೆ. ಹಲವು ಬಾರಿ ಹಲವು ಪತ್ರಿಕೆಗಳಲ್ಲಿ ಬರೆದರೂ, ಸ್ವತಃ ಪುರಸಭೆಗೇ ಅಹವಾಲು ಸಲ್ಲಿಸಿದರೂ, ಶಾಸಕರ ಕಚೇರಿಗೂ ತಿಳಿಸಿದ್ದರೂ ಈ ಸೇತುವೆಗೆ ರಿಪೇರಿ ಭಾಗ್ಯ ಬಂದಿಲ್ಲವೆಂದರೆ ಈ ಆಡಳಿತದ ಚರ್ಮ ಎಷ್ಟು ದಪ್ಪ ಇರಬೇಕು ಎಂಬುದೇ ತಿಳಿಯದಾಗಿದೆ. ಈ ಸಲವಾದರೂ ಆ ಶಿವಬೋಧರಂಗ ಕಣ್ಣು ತೆರೆದು ನೋಡುತ್ತಾನೋ ಇಲ್ಲವೋ ನೋಡಬೇಕು.

- Advertisement -

ಉಮೇಶ ಬೆಳಕೂಡ, ಮೂಡಲಗಿ

- Advertisement -
- Advertisement -

Latest News

ಸೈನಿಕರು ದೇಶದ ಆಸ್ತಿ ಮತ್ತು ಶಕ್ತಿ ಇದ್ದಂತೆ-  ಪ್ರೊ. ಸಂಜೀವ ಮಂಟೂರ

ಮೂಡಲಗಿ:-ಪಟ್ಟಣದ ಆರ್ ಡಿ ಎಸ್ ಕಾಲೇಜಿನಲ್ಲಿ "ಕಾರ್ಗಿಲ್ ವಿಜಯೋತ್ಸವ" ಕಾರ್ಯಕ್ರಮ ನಡೆಯಿತು. ಭಾರತ ದೇಶದ ರಕ್ಷಣೆಯಲ್ಲಿ ವೀರಯೋಧರು ಒಂದು ಶಕ್ತಿಯಾಗಿ ದೇಶದ ಸಂರಕ್ಷಕರಾಗಿ ತಮ್ಮ ಜೀವವನ್ನು ತ್ಯಾಗ ಮಾಡಿ...
- Advertisement -

More Articles Like This

- Advertisement -
close
error: Content is protected !!
Join WhatsApp Group