ಬೆಳಗಾವಿ – ಆಧುನಿಕ ಭಾರತದ ಇತಿಹಾಸದಲ್ಲಿ ಅತ್ಯಂತ ಪ್ರಸಿದ್ಧ ಸ್ತ್ರೀಯರಲ್ಲಿ ಒಬ್ಬರು. ಬಾಲ್ಯ ವಿವಾಹ, ಸತಿ ಸಹಗಮನ ಪದ್ಧತಿಗಳ ವಿರುದ್ಧ ಹೋರಾಟ ನಡೆಸಿದವರು. ಸ್ತ್ರೀ ಶಿಕ್ಷಣ, ಸ್ತ್ರೀ ಸಮಾನತೆ, ಸಾಮಾಜಿಕ ನ್ಯಾಯ ಒದಗಿಸಲು ದೇಶಕ್ಕೆ ಅಪಾರ್ ಕೊಡುಗೆಗಳು. ಅವರ 12 ಜ್ಯೋತಿರ್ಲಿಂಗಗಳು,ಧರ್ಮಶಾಲೆಗಳನ್ನು, ನಿರ್ಮಿಸಿರುವುದು ಇತಿಹಾಸವಾಗಿದೆ ಎಂದು ಕನಕಶ್ರೀ ಮಹಿಳಾ ಸಮಾಜದ ಅಧ್ಯಕ್ಷರಾದ ಶ್ರೀಮತಿ ರೇಖಾ ದಳವಾಯಿ ಅವರು ಅಹಲ್ಯಾಬಾಯಿ ಹೋಳ್ಕರ್ ಅವರ ಬಗ್ಗೆ ಮಾತನಾಡಿದರು.
ಕನಕಶ್ರೀ ಮಹಿಳಾ ಬಳಗ ಬೆಳಗಾವಿ ಇವರ ಸಂಘದಿಂದ 300 ನೆಯ ವರ್ಷದ ಅಹಲ್ಯಾಬಾಯಿ ಹೋಳ್ಕರ್ ಅವರ ದಿನಾಚರಣೆಯನ್ನು ಆಚರಿಸಲಾಯಿತು
ಶ್ರೀಮತಿ ಸುಧಾ ಇಟ್ನಾಳ್ ಅವರು ಸ್ವಾಗತಿಸಿದರು. ವಿದ್ಯಾ ಅಳಪ್ಪನವರ್ ನಿರೂಪಣೆ ಮಾಡಿದರು. ಶ್ರೀದೇವಿ ನೀಲಗುಂದ ವಂದನಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಶಾಂತಾ ಕಂಬಳಿ, ಜಯಶ್ರೀ ಮಜ್ಜಗಿ ಶಾಂತಾ ಕಡಮ್ಮನವರ್, ಜಯಶ್ರೀ ಪೂಜಾರಿ, ಪಾರ್ವತಿ ಅಡಿನ್, ಸುವರ್ಣ ಬೆಣ್ಣೆ, ಜಯಶ್ರೀ ಸದಲಗೆ, ರೇಣುಕಾ ಅಪ್ಪುಗೋಳ್, ಜಯಶ್ರೀ ಅಪ್ಪುಗೋಳ , ಪ್ರಣೋತಿ ಪಾಟೀಲ ಹಲವಾರು ಸುರೇಖಾ ನಾಯರ್, ಲಕ್ಷ್ಮಿ ಕೋಟಿನ್ , ಮನಿಷಾ ಅಪ್ಪುಗೋಳ, ರತ್ನ ದೊಡ್ಡಮನಿ, ಲಕ್ಕಮ್ಮ ಖೋತ ಇನ್ನೂ ಹಲವಾರು ಮುಖಂಡರು ಉಪಸ್ಥಿತರಿದ್ದರು.