ಮೂಡಲಗಿ: ಅರಭಾವಿಯಲ್ಲಿ
ಕಿತ್ತೂರು ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯ, ಅರಭಾವಿಯಲ್ಲಿ ಮಹಾವಿದ್ಯಾಲಯ ಹಾಗೂ ವಿದ್ಯಾರ್ಥಿ ವಸತಿ ನಿಲಯಗಳ ೨೦೨೪-
೨೫ ರ ವಾರ್ಷಿಕೋತ್ಸವವನ್ನು ದಿ.೨೮ ರಂದು ಯಶಸ್ವಿಯಾಗಿ ಜರುಗಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಹಾಂತೇಶ ಬೀಳಗಿ, ಭಾ.ಆ.ಸೇ, ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ರಾಜ್ಯ ಮಿನರಲ್ಸ್ ನಿಗಮ ಲಿ. ಬೆಂಗಳೂರು ಇವರು ಕಾರ್ಯಕ್ರವನ್ನು ಉದ್ಘಾಟಿಸಿ,
ಮಾತನಾಡುತ್ತಾ ಒಂದು ಮನೆಯಲ್ಲಿ ಹಿರಿಯರ ಉಪದೇಶ ಎಷ್ಟು ಮುಖ್ಯನೋ ಅಷ್ಟೇ ಶಾಲೆಗಳಲ್ಲಿ ಶಿಕ್ಷಕರ ಪಾತ್ರ ದೊಡ್ಡದು ಎಂದು ಹೇಳುತ್ತ ಅವರು ವಿದ್ಯಾರ್ಥಿಗಳಿಗೆ ಪ್ರೇರಣಾ ಸಂದೇಶವು, ಕಠಿಣ
ಪರಿಶ್ರಮ, ದೃಢನಿಶ್ಚಯ ಮತ್ತು ಬಲವಾದ ವ್ಯಕ್ತಿತ್ವದಿಂದ
ವಿದ್ಯಾರ್ಥಿಗಳು ತಮ್ಮ ಕನಸುಗಳನ್ನು ಸಾಧಿಸಬಹುದು ವ್ಯಕ್ತಿತ್ವ ನಿರ್ಮಾಣದ ಮಹತ್ವವನ್ನು ಒತ್ತಿಹೇಳುತ್ತಾ, ಅವರು ವಿದ್ಯಾರ್ಥಿಗಳು ತಮ್ಮ ಕನಸುಗಳನ್ನು ಉತ್ಸಾಹ ಮತ್ತು ದೃಢಸಂಕಲ್ಪದಿಂದ ಅನುಸರಿಸಲು ಪ್ರೇರೇಪಿಸಿದರು ಜೊತೆಗೆ ತಮ್ಮ ಸ್ವಂತಜೀವನ ಅನುಭವಗಳು ಮತ್ತು ಸಾಧನೆಗಳನ್ನು ಹಂಚಿಕೊಂಡರು.
ಅವರ ಸ್ಪೂರ್ತಿದಾಯಕ ನಾಯಕತ್ವ ಮತ್ತು ಮಾರ್ಗದರ್ಶನವು ನಿಸ್ಸಂದೇಹವಾಗಿ ವಿದ್ಯಾರ್ಥಿಗಳ ಮೇಲೆ ಶಾಶ್ವತವಾದ ಪ್ರಭಾವ ಬೀರುತ್ತದೆ. ಅದರೊಂದಿಗೆ ಅವರು ಶೈಕ್ಷಣಿಕ ಶ್ರೇಷ್ಠತೆಯ ಜೊತೆಗೆ ಯುವಜನೋತ್ಸವಗಳು ಮತ್ತು ಕ್ರೀಡೆಗಳಲ್ಲಿನ
ಅತ್ಯುತ್ತಮ ಸಾಧನೆಗಳಿಗಾಗಿ ವಿದ್ಯಾರ್ಥಿಗಳನ್ನು ಶ್ಲಾಘಿಸಿದರು.
ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟದ ಶಿಕ್ಷಣ ನಿರ್ದೇಶಕರಾದ ಡಾ. ಎನ್. ಕೆ. ಹೆಗಡೆ ಇವರು ವಿದ್ಯಾರ್ಥಿಗಳಲ್ಲಿ ಅಡಗಿರುವ
ಪ್ರತಿಭೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ವಿದ್ಯಾರ್ಥಿಗಳ
ಬಹುಮುಖ ಪ್ರತಿಭೆಗೆ ತುಂಬಾ ಮೆಚ್ಚುಗೆ ವ್ಯಕ್ತಪಡಿಸಿ ಎಲ್ಲ ಸಿಬ್ಬಂದಿಗಳ ಸಹಕಾರಕ್ಕೆ ಧನ್ಯವಾದಗಳನ್ನು ಹೇಳಿದರು.
ನೀವು ನಿಮ್ಮ ಸ್ವಂತ ಕನಸು ಮತ್ತು ದೃಷ್ಟಿಕೋನದ
ವಾಸ್ತುಶಿಲ್ಪಿಯಾಗಬೇಕು, ಅದು ನಿಮ್ಮ ಜೀವನವನ್ನು
ಉತ್ತಮಗೊಳಿಸುತ್ತದೆ. ವ್ಯಕ್ತಿಗಳು ತಮ್ಮ ಆಸಕ್ತಿಗಳು ಮತ್ತು ಉತ್ಸಾಹಗಳ ಆಧಾರದ ಮೇಲೆ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಬಲೀಕರಣಗೊಳಿಸಲು ವಿನ್ಯಾಸಗೊಳಿಸಲಾದ ಪರಿವರ್ತಕ ಕೌಶಲ್ಯವರ್ಧನೆ ಕೋರ್ಸ್ಅನ್ನು ಘೋಷಿಸಲು ನಾವು ಉತ್ಸುಕರಾಗಿದ್ದೇವೆ ಎಂದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಎಮ್.ಜಿ. ಕೆರುಟಗಿ, ಡೀನ್, ಕಿ.ರಾ.ಚ.ತೋ. ಮಹಾವಿದ್ಯಾಲಯ, ಅರಭಾವಿ ಇವರು ಅಧ್ಯಕ್ಷೀಯ ಭಾಷಣದಲ್ಲಿ ಕ್ರೀಡೆ ಹಾಗೂ ಸಾಂಸ್ಕೃತಿಕ ವಲಯದಲ್ಲಿ ಭಾಗವಹಿಸಿದ ಮತ್ತು
ವಿಜೇತರಾದ ವಿದ್ಯಾರ್ಥಿಗಳನ್ನು ಅಭಿನಂದಿಸುತ್ತ, ಮಹಾವಿದ್ಯಾಲಯಕ್ಕೆ ಪ್ರಶಸ್ತಿಗಳನ್ನು ತರಲು ಸಹಾಯ ಮಾಡಿದ ಕ್ರಿಯಾತ್ಮಕ ಅಧ್ಯಾಪಕರ ಪ್ರಾಮಾಣಿಕ ಪ್ರಯತ್ನವನ್ನು ಕೊಂಡಾಡಿದರು. ನಮ್ಮ ವಿದ್ಯಾರ್ಥಿಗಳು ಸಮಾಜಕ್ಕೆ ಸಹಾಯ ಮಾಡಲು ತೋಟಗಾರಿಕೆ
ಕ್ಷೇತ್ರದಲ್ಲಿ ಉದ್ಯಮಿಗಳು ಮತ್ತು ಸಂಶೋಧಕರು ಎಂದು
ಸಾಬೀತು ಪಡಿಸುವುದರ ಜೊತೆಗೆ ಇತರ ಸ್ಪರ್ಧಾತ್ಮಕ
ಪರೀಕ್ಷೆಗಳಲ್ಲಿ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಬೇಕು
ಎಂದು ಒತ್ತಿ ಹೇಳಿದರು.
ಈ ಕಾರ್ಯಕ್ರಮದಲ್ಲಿ ಸಿಬ್ಬಂದಿ ಸಲಹೆಗಾರರಾದ ಡಾ. ವಿಲಾಸ ಡಿ. ಗಸ್ತಿ, ಸಹಾಯಕ ವಿದ್ಯಾರ್ಥಿ ಕಲ್ಯಾಣ ನಿರ್ದೇಶಕರಾದ ಡಾ. ಎಸ್. ಜಿ. ಪ್ರವೀಣಕುಮಾರ,
ವಿದ್ಯಾರ್ಥಿಗಳ ವಸತಿನಿಲಯದ ನಿಲಯಪಾಲಕರು ಡಾ. ರಾಘವೇಂದ್ರಕೆ.ಎಸ್. ಮತ್ತು ವಿದ್ಯಾರ್ಥಿನಿಯರ ವಸತಿನಿಲಯದ ನಿಲಯಪಾಲಕರಾದ ಡಾ.
ನೇತ್ರಾವತಿ, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಈಶ್ವರ, ಜಂಟಿ ಕಾರ್ಯದರ್ಶಿ ಸೈಯದ ನದಾಫ, ವಸತಿನಿಲಯಗಳ ಪದಾಧಿಕಾರಿಗಳಾದ
ಭೀಮರಾವ, ಸ್ಫೂರ್ತಿ ಪಾಟೀಲ, ನಯನಾ ಪಿ., ಮಣಿಕಂಠ ಹೆರಕಲ್ ಅನುಷ್ಕಾ ಸಿ.ಎ. ಭಾಗವಹಿಸಿದರು.
ಮಹಾವಿದ್ಯಾಲಯದ ಶಿಕ್ಷಕ, ಶಿಕ್ಷಕೇತರ, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿ ಕಾರ್ಯಕ್ರಮವನ್ನು
ಯಶಸ್ವಿಗೊಳಿಸಿದರು.