ಸಿಂದಗಿ: ಕಳೆದ 2 ವರ್ಷಗಳ ಹಿಂದೆ ಸಮ್ಮಿಶ್ರ ಸರಕಾರದಲ್ಲಿ ಪಟ್ಟಣದಲ್ಲಿರುವ ತಹಶೀಲ್ದಾರ ಕಾರ್ಯಾಲಯ ಶಿಥಿಲಾವಸ್ಥೆಯನ್ನು ಗಮನಿಸಿ ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸರಕಾರದಲ್ಲಿ ಮಿನಿ ವಿಧಾನಸೌಧಕ್ಕೆ ಸುಮಾರು ರೂ 10 ಕೋಟಿ ಹಣ ಮಂಜೂರಾಗಿ 2 ತಿಂಗಳ ಹಿಂದೆ ಟೆಂಡರ ಪ್ರಕ್ರಿಯೆ ಮುಗಿದು ಕಾಮಗಾರಿಗೆ ಆದೇಶ ನೀಡಲಾಗಿದೆ ಆದರೆ ಅಧಿಕಾರಿಗಳು ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಕಾರಣ ಶೀಘ್ರವಾಗಿ ಕೆಲಸ ಪ್ರಾರಂಭಿಸುವಂತೆ ಸೂಚಿಸಬೇಕು ಎಂದು ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಅವರು ಕಂದಾಯ ಸಚಿವ ಆರ್. ಅಶೋಕ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.
ಈ ಕುರಿತು ಬೆಂಗಳೂರಿನ ಕಂದಾಯ ಇಲಾಖೆಯ ಸಚಿವಾಲಯಕ್ಕೆ ತೆರಳಿ ಪಟ್ಟಣದಲ್ಲಿ ನೆನೆಗುದಿಗೆ ಬಿದ್ದಿರುವ ಮಿನಿವಿಧಾನ ಸೌಧ ಕಾಮಗಾರಿಗೆ ಚಾಲನೆ ಹಾಗೂ ಆಲಮೇಲ ತಾಲೂಕು ಕೇಂದ್ರಕ್ಕೆ ಅಧಿಕಾರಿಗಳ ನೇಮಕ ಮಾಡುವಂತೆ ಮನವಿ ಸಲ್ಲಿಸಿ ಮಾತನಾಡಿದರು.
ಕ್ಷೇತ್ರದಲ್ಲಿರುವ ಆಲಮೇಲವು ತಾಲೂಕೆಂದು 28-02-2019ರಂದು ಘೋಷಣೆಯಾಗಿದೆ ಆದರೆ ಇಲ್ಲಿಯವರೆಗೂ ತಾಲೂಕಿಗೆ ಸಂಬಂಧಿಸಿದಂತೆ ಯವುದೇ ಕಛೇರಿಗಳು ಪ್ರಾರಂಭವಾಗಿಲ್ಲ ಮತ್ತು ಅಧಿಕಾರಿಗಳು ನೇಮಕವಾದರು ಕೂಡಾ ಇನ್ನೂವರೆಗೆ ಮಂಜೂರಾತಿ ನೀಡಿಲ್ಲ ಕಾರಣ ನೂತನ ತಾಲೂಕು ಆಲಮೇಲಕ್ಕೆ ಕಛೇರಿಗಳು ಸಹಿತ ಅಧಿಕಾರಿಗಳನ್ನು ನೇಮಕ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿ ಆ ಭಾಗದ ಜನರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸುವಂತೆ ಸಚಿವರಲ್ಲಿ ಮನವಿ ಮಾಡಿದರು.