Times of ಕರ್ನಾಟಕ

ಕವನಗಳು

ರೈತ ಮಳೆ ಗಾಳಿ ಬಿಸಿಲನು ನೋಡದ ಬಂಡೆಗಲ್ಲು ನನ್ನ ರೈತ ಅವನೇ ನಮಗೆ ಅನ್ನದಾತ. ಬೆವರು ಸುರಿಸಿ ದುಡಿದು ತಾನು ಜಗಕೆ ಅನ್ನ ನೀಡುತಿರುವ ಅನ್ನದಾತನು ಕೋಟಿ ವಿದ್ಯೆಯಲ್ಲಿ ಮೇಟಿವಿದ್ಯೆ ಮೇಲು ಎಂದು ತೋರಿಸಿದಾತನು. ಭೂಮಿತಾಯಿ ಒಡಲು ತುಂಬಿ ಭೂಮಿತಾಯಿ ಮಗನು ಆಗಿ ಮಣ್ಣಿನಲ್ಲಿ ಮಾಣಿಕ್ಯ ತೆಗೆದು ರತ್ನಕಂಬಳಿಯಲ್ಲಿ ಮೆರೆಯುತಿರುವನು. ಬಸವ ಸೇವೆ ಮಾಡುತ ನೀನು ಜಗಮೆಚ್ಚಿದ ಮಗನು ನೀನು ನಿನ್ನ ಋಣವ ತೀರಿಸಲು ನಾವು ಏಳು ಜನ್ಮ ಬೇಕು ನಮಗೆ. ರೈತ ನಿನ್ನ ದುಡಿಮೆಗೆ ಭೂಮಿತಾಯಿ ಒಲಿದು...

ದಿನದ ವಿಶೇಷ: ವಿಶ್ವ ಹಾಲು ದಿನ (ಜೂನ್ 1)

ವಿಶ್ವ ಹಾಲು ದಿನವನ್ನು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯ ೨೦೦೧ರಿಂದ ಪ್ರತಿವರ್ಷ ಒಂದರಂದು ಆಚರಿಸುತ್ತಿದೆ. ಇದರ ಉದ್ದೇಶ ಹಾಲು ಮತ್ತು ಹೈನುಗಾರಿಕೆಯನ್ನು, ಆದರ ಮಹತ್ವವನ್ನು ವಿಶ್ವದಲ್ಲೆಡೆ ಪಸರಿಸುವುದೇ ಆಗಿದೆ. ♦️ಇತಿಹಾಸ ವಿಶ್ವ ಆಹಾರ ದಿನವನ್ನು ಮೊದಲ ಬಾರಿಗೆ ೨೦೦೧ರಲ್ಲಿ ಆಚರಿಸಲಾಯಿತು. ಹೈನುಗಾರಿಕೆಯಿಂದ ವಿಶ್ವದಲ್ಲೆಡೆ ನೂರು ಕೋಟಿ ಮಂದಿ ಬದುಕು ಸಾಗಿಸುತ್ತಿದ್ದಾರೆ ಎಂದೂ ಮತ್ತು ಹಾಲನ್ನು ದಿನವಹಿ...

ಮುದ್ದು ಕೃಷ್ಣ…

ಬಾರೋ ನನ್ನ ಬಾಳ ಕುಸುಮ ಮಡಿಲ ತುಂಬೋ ಮುದ್ದು ಕೃಷ್ಣ// ನಿನ್ನ ನಡೆಯಾ, ತೊದಲು ನುಡಿಯಾ ಮುಗುಳು ನಗೆಯಾ, ಮುಗ್ಧ ಅಳುವಾ ನೋಡುತಿರಲು ಮನವೇ ಮರುಳ// ನಿನ್ನ ಕೆನ್ನೆಯಂದ ಮುಂಗುರುಳ ಚೆಂದ ಹವಳದುಟಿಗಳ ಮೂಕ ಬಂಧ ಮುತ್ತನಿಟ್ಟರೆ ಮೈಮನಗಳು ಹದುಳ// ಕರುಳ ಬಳ್ಳಿ ನೀ ಚೆಲುವ ಚೆಂದುಳ್ಳಿ ಕೆನ್ನೆಗುಳಿಯು ಪದ್ಮನಾಭನಂತೆ ಪವಡಿಸುವ ಕಂದ ನಾ ಪರವಶಳು// ಕೃಷ್ಣನಾಟ ,ಶಿವನ ನೋಟ, ಭರತನ ಕೂಟ ಸೃಷ್ಟಿಕರ್ತನ ಬೆಡಗ ನೋಡುತಿರೆ ಮುಚ್ಚಲೆಂಗ ನನ್ನ ಕಣ್ಣುಗಳ// ಮಗ್ಗುಲು ಮಲ್ಲಿಗೆ,...

ಕೆಲವು ‘ಟಂಕಾ’ ಗಳು

*ಹೂವು* ಹಸಿರೆಲೆಯೇ ಗಣ್ಣಿಗೊಂದು ಮೊಗ್ಗಲ್ಲೇ ಮೊಗ್ಗೆಲ್ಲೇ ಹಿಗ್ಗೇ... ಹೂವಾಗಿ ಅರಳಲೇ ಆನಂದದ ಬುಗ್ಗೆಯೇ. *ಪ್ರೀತಿ* ಎದೆಯಾಳದಿ ಇಣುಕಿ ನೋಡಲು ನಾ ನಿನ್ನದೇ ರೂಪ ತುಟಿಯಂಚಿನಾ ನಗು ನೀ ಮುಡಿಸಿದಾ ದೀಪ *ಅವ್ವ* ಸೆರಗಿನಲಿ ಮಿನುಗಿವೆ ನಕ್ಷತ್ರ ಸವಕಳಿಯ ಸೀರೆ ನೆರೆ ಕೂದಲ ಚಂದ್ರ, ಕಾಮನಬಿಲ್ಲು *ರೈತ* ತಟ್ಟೆಯಲಿಹ ಮಲ್ಲಿಗೆಯರಳೆಲ್ಲ ಬೆವರ ಹನಿ ಘಮ ಬೀರಿವೆಯಲ್ಲ ಭತ್ತದಾ ಮೊಗ್ಗರಳಿ. *ಶ್ರೀಮತಿ ಇಂದಿರಾ ಮೋಟೆಬೆನ್ನೂರ.* --------------------------------- 1.ಒಗ್ಗಟ್ಟು ಕಷ್ಟ ಸಮಯ ಬಂದಿತು ಜನರೆಲ್ಲ ಒಗ್ಗೂಡಿದರು ಗುದ್ದಿ ಕೆಡವಿದರು ಒದ್ದು ಓಡಾಡಿದರೂ. 2.ಸುಗಂಧ ಹೃದಯಸುಮ ಅರಳಿ ಸಂತಸದ ಸುಗಂಧ ಸೂಸಿ ಧನ್ಯತೆಯ ಭಾವಮೂಡಿ ಬದುಕಿದೆ ಸಾರ್ಥಕ. 3.ಸಹಾಯ ಜಪದಲ್ಲಿಲ್ಲ ಬರಿ ಪೂಜೆಯಲ್ಲಿಲ್ಲ ದೇವರಿರುವ ಸಹಾಯ ಮಾಡುವುದ ಮನಸುಳ್ಳವರಲ್ಲಿ. 4.ಬೇನೆ ಟಂಕಾ ರುಬಾಯಿ ಬರೆದೆ ನಾ ಪ್ರವೀಣೆ ಹಾಯ್ಕ ತರಿಸ್ತು ತುಸು ತಲೆ ಬೇನೆಯ ಹುಡ್ಕಿ ಅಕ್ಷರಮಾಲೆ ಮೇಘಾ ಪಾಟೀಲ

ಸಾವರ್ಕರ್ ‘ ವೀರ ‘ ಹೇಗಾದರು ?

ಭಾರತದ ಸ್ವಾತಂತ್ರ್ಯ ಹೋರಾಟದ ಸಾವಿರಾರು ಕೆಚ್ಚಿನ ಕಲಿಗಳಲ್ಲಿ ' ವೀರ ' ಸಾವರ್ಕರ್ ಒಬ್ಬರು. ವಿನಾಯಕ ದಾಮೋದರ ಸಾವರ್ಕರ್ ಎಂಬುದು ಅವರ ನಿಜ ನಾಮಧೇಯ. ಮೊದಲಿಗೆ ಸಾವರ್ಕರ್ ಹೆಸರಿನ ಹಿಂದೆ ' ವೀರ ' ಇರಲಿಲ್ಲ. ಅದು ಆಮೇಲೆ ಬಂದಿದ್ದು. ವಿನಾಯಕ ಸಾವರ್ಕರ್, ವೀರ ಸಾವರ್ಕರ್ ಆಗಿರುವುದರ ಹಿಂದೆ ಒಂದು ರೋಚಕ ಕಥೆಯಿದೆ. ವೀರ ಎಂಬ ಉಪಾಧಿಯನ್ನು...

ಕವನಗಳು

ನಂಬಿಕೆ 'ನಂಬಿ ಕೆಟ್ಟವರಿಲ್ಲವೋ ರಂಗಯ್ಯನ'ದಾಸವಾಣಿಯಂತೆ ನಂಬಿಕೆ ಬಲು ನಾಜೂಕಾಗಿದೆ ನಾಶವಾಗದಿರಲಿ ನಂಬಿಕೆ ನಂಬುವಂತಿರಲಿ ನಾಟುವಂತಿರಲಿ ನಂಬಿದವರು ನೂರುಕಾಲ ನೆಲೆಗೊಳ್ಳುವಂತಿರಲಿ ನಂಬಿಕೆ ನಡೆ-ನುಡಿಯಿಂದ ಕೂಡಿರಲಿ ನಂಬಿಕೆ ನಯ-ವಿನಯದಿಂದ ಕೂಡಿರಲಿ ನಂಬಿಕೆ ನಂಬಿಕೆದ್ರೋಹವಾಗದಿರಲಿ ನಂಬಿಕೆ ನಾರದಂತಿರಲಿ ನಂಬಿಕೆ ನೀರುಪಾಲಾಗದೆ ಆಗಸದ ನಕ್ಷತ್ರದಂತಿರಲಿ ನಂಬಿಕೆ ನನಗಾಗಿ ಅಲ್ಲ,ನಮ್ಮವರಿಗಾಗಿರಲಿ ನಂಬಿಕೆ ಜಿಪುಣನಾಗದೆ ಜೇನುಗೂಡಿನಂತಿರಲಿ ನಂಬಿಕೆ ನಗ-ನಾಣ್ಯದಿಂದ ಬರುವಂತದಲ್ಲ ನಂಬಿಕೆಯ ನಟ್ಟು ಹರಿಯದಂತಿರಲಿ ನಂಬಿಕೆಯೇ ಸುಖಜೀವನದ ಸೂತ್ರವಾಗಿಹುದು ನಂಬಿಕೆಯ ಕಂಬಗಳು ಅಲುಗಾಡದಿರಲಿ ನಂಬಿಕೆಯಲಿ ನಾನು ಎಂಬುದು ನಶ್ವರವಾಗಿ ನಂಬಿಕೆ ಸದಾ ನಂದಾದೀಪವಾಗಿರಲಿ 🖋ಬಿ ಡಿ ರಾಜಗೋಳಿ ಚಿಕ್ಕೋಡಿ ----------------------------------------------------------------- *ಕೊರೋನಾ ಪಾಠ* (ಹವ್ಯಕ ಭಾಷೆಯ...

“ಟಂಕಾ”ಗಳು

ಇದು ಪರ್ಷಿಯನ್ ಸಾಹಿತ್ಯ ಪ್ರಕಾರ. ಇದನ್ನು ಕನ್ನಡಕ್ಕೆ ಉತ್ತರ ಕರ್ನಾಟಕದಲ್ಲಿ ಪ್ರಚಾರಕ್ಕೆ ತಂದು ಹಲವಾರು ಕವಿಗಳು ಇದರಲ್ಲಿ ಕೃಷಿ ಕೈಗೊಂಡ ಈ ಪ್ರಕಾರಕ್ಕೆ ಮಾನ್ಯತೆ ಕೊಟ್ಟು ಬರೆಯುತ್ತಿದ್ದಾರೆ. ಇದು ಹೈದರಾಬಾದ್ ಕರ್ನಾಟಕದಲ್ಲೂ ಈ ಪ್ರಕಾರ ಚಾಲ್ತಿಯಲ್ಲಿದೆ. ನಿಯಮಗಳು:- ಇದು ಐದು ಸಾಲುಗಳ ಒಂದು ಸಾಹಿತ್ಯದ ಪ್ರಕಾರ. 1 ಮತ್ತು 3 ನೇ ಸಾಲುಗಳು ಐದೈದು ಅಕ್ಷರಗಳನ್ನು...

ಇಂದು ವಿಶ್ವ ಸಹೋದರರ ದಿನ !

ಅಪ್ಪ, ಅಮ್ಮಂದಿರಿಗಾಗಿ ಒಂದು ವಿಶೇಷ ದಿನವಿರುವಂತೆ ಸಹೋದರರಿಗಾಗಿಯೂ ಇರುವುದೇ ಇಂದಿನ ದಿನ ಮೇ 24. ಅಣ್ಣ ತಮ್ಮ ಪರಸ್ಪರ ಸಹಬಾಳ್ವೆಯಿಂದ, ಪ್ರೀತಿಯನ್ನು ಹಂಚಿಕೊಂಡು ಬದುಕಬೇಕೆನ್ನುವುದು ಇಂದಿನ ದಿನದ ಸಂದೇಶ. ಅಲಾಬಾಮಾದ ಸಿ. ಡೇನಿಯಲ್ಲ ರೋಡ್ಸ್ ಎಂಬಾತ ಈ ' ಬ್ರದರ್ಸ್ ಡೇ ' ಕಂಡುಹಿಡಿದಿದ್ದು ನಮಗೆ ಒಬ್ಬರಿರಲಿ ಇಬ್ಬರಿರಲಿ ಅಥವಾ ಸಹೋದರರು ಇಲ್ಲದೇ ಇರಲಿ ಎಲ್ಲರಲ್ಲಿ...

ಪೈನಾಪಲ್ ಎಂಬ ಅದ್ಭುತ ಹಣ್ಣು !

ಬೇಸಿಗೆ ಬಂತೆಂದರೆ ಸಾಕು ಮಾವಿನ ಹಣ್ಣಿನ ಜೊತೆ ಪೈನಾಪಲ್ ಹಣ್ಣಿನ ಸುಗ್ಗಿ ! ಹೊರಮೈಯಲ್ಲಿ ಮುಳ್ಳುಗಳಂತೆ ದಪ್ಪ ಕವಚ ಹೊಂದಿರುವ ಅನಾನಸು ಸಿಪ್ಪೆ ಸುಲಿದು ತಿಂದರೆ ರುಚಿ ಸ್ವರ್ಗ ತೋರಿಸುತ್ತದೆ. ಹುಳಿ, ಸಿಹಿ,ವಗರು ಮಿಶ್ರ ರುಚಿಗಳನ್ನು ಹೊಂದಿರುವ ಪೈನಾಪಲ್ ಚಿಕ್ಕ ಮಕ್ಕಳಾದಿಯಾಗಿ ಎಲ್ಲ ವಯಸಿನವರಿಗೂ ಅಚ್ಚುಮೆಚ್ಚಿನ ತಿನಿಸು. ವಿಟಮಿನ್ ಸಿ ಇಂದ ತುಂಬಿಕೊಂಡಿರುವ ಈ ಹಣ್ಣು ನೋಡಲು...

ಕವನಗಳು

ಸಾಗು ಅಭ್ಯುದಯದ ಹಾದಿಯಲಿ... ಜಡತ್ವ ಬಿಡು,ಹಗಲುಕನಸು ಬಿಡು, ಬಾಳಲಿ ಮಹದುದ್ದೇಶ ಧ್ಯಾನಿಸಿ,ಹೊರಡು, ದಾರಿ ನಿನಗಾಗಿ ಕಾದಿದೆ,ಅಭ್ಯುದಯದ ಹಾದಿ, ಆರಂಭದ ಹೆಜ್ಜೆಗಳು ಕಠಿಣವಿರಬಹುದು, ಕಲ್ಲುಮುಳ್ಳುಗಳಿರಬಹುದು, ಹಳ್ಳದಿಣ್ಣೆಗಳಿರಬಹುದು, ಬೇಸರವೆನಿಸುವಷ್ಟು ತಿರುವುಗಳಿರಬಹುದು, ಹಾವು-ಚೇಳುಗಳ ಭಯವಿರಬಹುದು, ಹುಲಿ-ಸಿಂಹ-ಕರಡಿಗಳ ಕಾಟವಿರಬಹುದು, ಎಲ್ಲವನು ಎದುರಿಸಿ,ಏಕಾಗ್ರತೆಯಲಿ ಹೊರಡು... ನೂರು ಸ್ನೇಹಿತರಿರಬಹುದು, ಅಪ್ಪ-ಅಮ್ಮ,ಸಹೋದರ-ಸಹೋದರಿಯರಿರಬಹುದು, ಪ್ರಗತಿಯತ್ತ ಓಟ ನಿನ್ನದೇ... ಚಂಚಲತೆಯಿಲ್ಲದೇ ಏಕಾಗ್ರತೆಯೊಂದಿಗೆ ಚಲಿಸು, ವಿಜಯದೇವತೆ ನಿನಗೊಲಿವಳು... ಬಸವಣ್ಣನ ಕಾಯಕತತ್ವ , ಗಾಂಧೀಜಿಯವರ ಸತ್ಯ,ಅಹಿಂಸೆ, ಸ್ವಾಮಿವಿವೇಕಾನಂದರ ಸಹೋದರತ್ವ, ಸರ್.ಎಂ.ವಿಶ್ವೇಶ್ವರಯ್ಯ ನವರ ದೂರದೃಷ್ಟಿ,ಕಾಯಕಪ್ರೀತಿ, ಬುದ್ದ,ಮಹಾವೀರರ ಶಾಂತಿ, ತ್ಯಾಗ, ಡಾ.ಅಬ್ದುಲ್ ಕಲಾಂರ ಸರ್ವಧರ್ಮ ನಿಷ್ಠೆ,ಕಾಯಕನಿಷ್ಠೆ ಎಂದೆಂದೂ ನಿನ್ನದಾಗಿರಲಿ,ಗೆಲುವು ಎಂದೆಂದೂ ನಿನಗಿರಲಿ... ಕ್ರಮಿಸುವ ಹಾದಿ ದೂರದ...

About Me

10151 POSTS
1 COMMENTS
- Advertisement -spot_img

Latest News

ಅವಿರತ ಕಲಾಸೇವೆ ಮುಂದೊಮ್ಮೆ ಗುರುತಿಸಲ್ಪಡುತ್ತದೆ – ಪತ್ರಕರ್ತ ಪತ್ತಾರ

ಮೂಡಲಗಿ :ಕಲೆ ಎಂಬುದು ಯಾರ ಸ್ವತ್ತಲ್ಲ, ಸ್ವಾರ್ಥವಿಲ್ಲದ ಅವಿರತ ಕಲಾ ಸೇವೆ ಮುಂದೊಂದು ದಿನ ಗುರುತಿಸಲ್ಪಟ್ಟು, ಪದವಿ ಸನ್ಮಾನಗಳು ತಾನಾಗಿಯೇ ಅರಸಿ ಬರುತ್ತವೆ ಎಂದು ಪತ್ರಕರ್ತ...
- Advertisement -spot_img
close
error: Content is protected !!
Join WhatsApp Group