ಬೀದರ: ಜಿಲ್ಲೆಯ ಭಾಲ್ಕಿ ಪಟ್ಟಣದಲ್ಲಿ ಭಾರತೀಯ ಜನತಾ ಪಕ್ಷದ ಭಾಲ್ಕಿ ಮಂಡಲದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬೂತ್ ಮಟ್ಟದ ಅಧ್ಯಕ್ಷರ ಹಾಗೂ ಕಾರ್ಯಕರ್ತರ ಸಮಾವೇಶವನ್ನು ಜ್ಯೋತಿ ಬೆಳಗಿಸುವ ಮೂಲಕ ಡಿ ಕೆ ಸಿದ್ರಾಮ ಉದ್ಘಾಟಿಸಿದರು.
ನಮ್ಮದು ಕಾರ್ಯಕರ್ತರ ಪಕ್ಷ ನಾವೆಲ್ಲರೂ ಸೇರಿ ಪಕ್ಷದ ಸಂಘಟನೆಗಾಗಿ ಶ್ರಮಿಸೋಣ ಹಾಗೂ ಮುಂಬರುವ ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯತ್ ಚುನಾವಣೆಗಳಲ್ಲಿ...
ಸಿಂದಗಿ: ಖ್ಯಾತ ಹಾಸ್ಯನಟ ಹಾಗೂ ಟಿಪ್ಪು ಕ್ರಾಂತಿ ಸೇನೆ ರಾಜ್ಯಾಧ್ಯಕ್ಷ ರಾಜು ತಾಳಿಕೋಟಿ ಅವರ ಮೇಲೆ ಹಲ್ಲೆಯನ್ನು ಖಂಡಿಸಿ ಟಿಪ್ಪು ಕ್ರಾಂತಿ ಸೇನೆ ಹಾಗೂ ವಿವಿಧ ಸಂಘಟನೆ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ಗ್ರೇಡ್-2 ತಹಶೀಲ್ದಾರ ಪ್ರಕಾಶ ಸಿಂದಗಿ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಟಿಪ್ಪು ಕ್ರಾಂತಿ ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ...
ಫೋಟೋ; ಹಲ್ಲೆಗೊಳಗಾದ ಶರಣಮ್ಮ ಬಂದಾಳ ಹಾಗೂ ಅವರ ಮಗ
ಸಿಂದಗಿ: ಮನೆಯ ಜಾಗಕ್ಕೆ ಸಂಬಂಧಿಸಿದಂತೆ ಮಹಿಳೆಯೊಬ್ಬರನ್ನು ಕೆಲವು ಮಹಿಳೆಯರೇ ಹಿಗ್ಗಾ ಮುಗ್ಗಿ ಎಳೆದಾಡಿ ಥಳಿಸಿ ಹಲ್ಲೆ ಮಾಡಿದ ಘಟನೆ ತಾಲ್ಲೂಕಿನ ಗಣಿಹಾರ ಗ್ರಾಮದಲ್ಲಿ ನಡೆದಿದೆ.
ಗಣಿಹಾರ ಗ್ರಾಮದ ಶರಣಮ್ಮ ಬಂದಾಳ ಎಂಬ ಮಹಿಳೆಯ ಮೇಲೆ ಮೂವರು ಸವರ್ಣೀಯ ಮಹಿಳೆಯರು ಎಳೆದಾಡಿ ಹಲ್ಲೆ ನಡೆಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ...
ಸಿಂದಗಿ: ಪಂಚಮಸಾಲಿ ಸಮಾಜಕ್ಕೆ 2ಎ ಮಿಸಲಾತಿಗೆ ಆಗ್ರಹಿಸಿ ತಾಲೂಕಾ ಪಂಚಮಸಾಲಿ ಸಮಾಜದಿಂದ ತಹಶೀಲ್ದಾರ ಕಾರ್ಯಾಲಯದ ಶಿರಸ್ತೆದಾರ ಶ್ರೀಮತಿ ಲಮಾಣಿ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕಾಧ್ಯಕ್ಷ ಎಂ.ಎಂ.ಹಂಗರಗಿ, ಚಂದ್ರಶೇಖರ ನಾಗರ ಬೆಟ್ಟ, ಯುವ ಸಂಘಟನೆಯ ತಾಲೂಕಾಧ್ಯಕ್ಷ ಯುವರಾಜ ಪಾಟೀಲ ಮಾತನಾಡಿ, ಕಳೆದ ದಿನಗಳಲ್ಲಿ ಕೂಡಲ ಸಂಗಮದ ಜಗದ್ಗುರು ಜಯಮೃತ್ಯುಂಜಯ ಸ್ವಾಮೀಜಿಗಳ ನೇತೃತ್ವದಲ್ಲಿ...
ಸಿಂದಗಿ: ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ ಅವರು ಪಟ್ಟಣದ ನಿವಾಸಿಯಾದ ಬಂದೇನವಾಜ ಸೈಫನಸಾಬ ಶಹಾಪೂರ ಅವರನ್ನು ಅಸಂಘಟಿತ ಕಾರ್ಮಿಕರ ವಿಭಾಗದ ತಾಲೂಕಿನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ ಎಂದು ಜಿಲ್ಲಾಧ್ಯಕ್ಷ ಮಹ್ಮದ್ ಹನೀಪ ಮಕಾಂದಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಿಂದಗಿ: ಪ್ರಸ್ತುತ ದಿನದಲ್ಲಿ ಮಾನವೀಯ ಮೌಲ್ಯಗಳು ಕಡಿಮೆಯಾಗಿ ವಿಕೃತ ಕೃತ್ಯಗಳು ನಡೆದು ಮನುಷ್ಯತ್ವ ಮರೆತು ರಾಕ್ಷಸೀಯ ಪ್ರವೃತ್ತಿ ಬೆಳೆಯುತ್ತಿರುವುದು ವಿಪರ್ಯಾಸದ ಸಂಗತಿ ಎಂದು ಕಲಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವ ಡಾ. ಬಸವರಾಜ ಡೋಣೂರ ಅವರು ಹೇಳಿದರು.
ಪಟ್ಟಣದ ಪಿ.ಇ.ಎಸ್ ಸಂಸ್ಥೆಯಲ್ಲಿ ಲಯನ್ಸ್ ಕ್ಲಬ್ ಹಾಗೂ ಮಾತೋಶ್ರೀ ಗುರುಬಸಮ್ಮ ಹಣಮಂತ್ರಾಯ ಸೋಮಾಪೂರ ಸೇವಾ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ...
ಕನ್ನಡ ಸಾಹಿತ್ಯ-ವಿದ್ವತ್ ಕ್ಷೇತ್ರದಲ್ಲಿ ಪರಿಚಿತ ಹೆಸರು, ಪ್ರೊ|| ಅ. ರಾ. ಮಿತ್ರ ಅವರದ್ದು. ಉಪನ್ಯಾಸಕರಾಗಿ, ಭಾಷಣಕಾರರಾಗಿ, ಕನ್ನಡೇತರರಿಗೆ ಕನ್ನಡ ಕಲಿಸುವ ಶಿಕ್ಷಕರಾಗಿ, ಹಾಸ್ಯೋತ್ಸವಗಳಲ್ಲಿ ಮುಖ್ಯ ಕಲಾವಿದರಾಗಿ _ ಹೀಗೆ ಕನ್ನಡದ ಕೆಲಸದಲ್ಲಿ ನಿರಂತರ ತೊಡಗಿಕೊಂಡಿರುವ ಮಿತ್ರರ ಬರವಣಿಗೆ ನವುರಾದದ್ದು, ಸುಲಲಿತವಾದದ್ದು. ಹೆಸರಿನಲ್ಲಷ್ಟೇ ಅಲ್ಲ, ಭಾಷೆ-ಶೈಲಿ-ಕಥನಕಲೆಗಳಲ್ಲಿ ಅವರು ಓದುಗರ ನಿಜವಾದ ಮಿತ್ರರು! ಹಾಗಾಗಿ ಅವರ ಬರಹಗಳನ್ನು...
“ಯಾವುದೇ ಕೆಲಸ ಕೀಳಲ್ಲ. ನಿನ್ನ ಕೆಲಸ ಈ ರಸ್ತೆಯ ಈ ಭಾಗವನ್ನು ಗುಡಿಸುವುದಾಗಿದ್ದರೆ, ಜಗತ್ತಿನ ಅತ್ಯಂತ ಸ್ವಚ್ಚ ರಸ್ತೆಯಾಗುವಂತೆ ಗುಡಿಸು. ಅದೃಷ್ಟ ಎನ್ನುವುದು ದೇವರ ಕೈಯಲ್ಲಿ ನಿಷ್ಕ್ರಿಯವಾಗಿರುವ ಸಾಧನವಲ್ಲ. ನಮ್ಮ ಡೆಸ್ಟಿನಿ, ನಮ್ಮ ವಿಧಿ – ಮನುಷ್ಯನ ಕೈಯಲ್ಲಿರುವ ಸಾಧನ” ಎಂದು ಹೇಳುತ್ತಿದ್ದವರು ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು.
ನೂರಾ ಎರಡು ವರ್ಷಗಳ ತುಂಬು ಬದುಕನ್ನು ಕರ್ಮಯೋಗಿಯಂತೆ...
ತಿರುಳ್ಗನ್ನಡ ನಾಡಿನ ಹೆಸರಾಂತ ಮಕ್ಕಳ ಸಾಹಿತಿ, 'ಸತ್ಯಾರ್ಥಿ' ಕಾವ್ಯನಾಮ ದಿಂದ ಜನಜನಿತರಾಗಿದ್ದ ಶ್ರೀ ಚನ್ನಬಸಪ್ಪ ಹೊಸಮನಿಯವರು ಬೈಲಹೊಂಗಲದಲ್ಲಿ ನಿಧನರಾಗಿದ್ದಾರೆ. ಅವರ ಅಗಲಿಕೆ ಮಕ್ಕಳ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ. ತಮ್ಮ 'ಅನ್ನದಾತ 'ಕವನದಿಂದ ರೈತನ ಹಿರಿಮೆಯನ್ನು ಎತ್ತಿಹಿಡಿದು ಮಕ್ಕಳಿಗೂ ಸಹ ರೈತನ ಬಗ್ಗೆ ಹೆಮ್ಮೆ ಬರುವಂತೆ ಮಾಡಿದ್ದು ಮತ್ತು ಈ ಕವನ ಹಲವು ದಶಕಗಳ...
ಉತ್ತಮ ಸಂಯಮ ಧರ್ಮ
ಪಂಚೇಂದ್ರಿಯಗಳ ದಮನವೇ ಸಂಯಮದ ಮರ್ಮ. ಅದು ಇಹ ಪರಲೋಕಕ್ಕೆ ಹಿತಕಾರಿ ಯಾದುದಾಗಿದೆ. ಪಾಪ ಎಂಬ ಬೀಜದ ವಿನಾಶ, ಜ್ಞಾನ ಬಲದ ಬಂಧನ, ಸಂಸಾರ ಸಾಗರ ಪಾರುಮಾಡುವಂತದು. ಉತ್ತಮ ಸಂಯಮ ಧರ್ಮವು ದುರ್ಗತಿ ನಿವಾರಿಸಿ ಸಂಪತ್ತಿ ವೃದ್ದಿಸುವಂಥದಾಗಿದೆ. ಪರಮಾರ್ಥ ಪದವಿ ಪಡೆಯಲು ಸಾಧಕ ಮಂತ್ರ ಇದಾಗಿದೆ.
ಪಂಚೇಂದ್ರಿಯಗಳು ಸಂಸಾರ ದುಖವನ್ನುಂಟು ಮಾಡುತ್ತಿವೆ. ಆದ್ದರಿಂದ ಮುನಿವರ್ಯರು...
ದ್ರೌಪದಿಯ ಸ್ವಗತ
ನಾನು ಅರಸುಮನೆತನದ ಹೆಣ್ಣು,
ಅರ್ಧಜಗದ ಮಣೆ ಹಿಡಿದ ಹೆಣ್ಣು.
ಆದರೂ ನನ್ನ ಬದುಕು ಒಂದು ಕತ್ತಲು ಗವಿಯಂತೆ,
ನೂರು ಚೂಪಿನ ಕತ್ತಿಗಳ ಮಧ್ಯೆ
ಹೆಜ್ಜೆ ಹಾಕಿದಂತಿತ್ತು.
ನಾನು ಕದನದ ಕಿಡಿಯಾದೆ
ಅವಮಾನಗಳ ನೆರಳಲ್ಲಿ...