Homeಸುದ್ದಿಗಳುಮೌಲಾಲಿಯವರ ನಾವು ಭಾರತೀಯರು ಕೃತಿಗೆ ಬೆಳ್ಳಿಚುಕ್ಕಿ ಪ್ರಶಸ್ತಿ

ಮೌಲಾಲಿಯವರ ನಾವು ಭಾರತೀಯರು ಕೃತಿಗೆ ಬೆಳ್ಳಿಚುಕ್ಕಿ ಪ್ರಶಸ್ತಿ

ಸಿಂದಗಿ: ಹುನಗುಂದ ತಾಲೂಕು ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು, ಹಾಗೂ ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಘ (ರಿ) ಕಮತಗಿ ವತಿಯಿಂದ ಇದೆ ನ. 27 ರಂದು ಕಮತಗಿಯಲ್ಲಿ ಮಕ್ಕಳ ಹಿರಿಯ ಸಾಹಿತಿ ಶ್ರೀಮತಿ ಲಲಿತಾ ಹೊಸಪ್ಯಾಟಿ ಇವರ ಸರ್ವಾಧ್ಯಕ್ಷತೆಯಲ್ಲಿ ನಡೆಯುವ ಪ್ರಥಮ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ತಾಲೂಕಿನ ಬೋರಗಿ ಗ್ರಾಮದ ಆರಕ್ಷಕ ಮುಖ್ಯಪೇದೆ ಮೌಲಾಲಿ ಕೆ. ಆಲಗೂರ ರಚಿತ ನಾವು ಭಾರತೀಯರು (2021) ಶಿಶುಗೀತೆಗಳ ಸಂಕಲನ ಬೆಳ್ಳಿಚುಕ್ಕಿ ಪುಸ್ತಕ ಪ್ರಶಸ್ತಿ ದೊರೆತಿದೆ.

ಈ ಸಮ್ಮೇಳನದಲ್ಲಿ  ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಸ್ಥೆಯ ಮುಖ್ಯಸ್ಥ ರಮೇಶ್ ಕಮತಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES

Most Popular

close
error: Content is protected !!
Join WhatsApp Group