ಮೂಡಲಗಿ: ತಾಲೂಕಿನ ಹುಣಶ್ಯಾಳ ಪಿ.ವಾಯ್ ಗ್ರಾಮ ಪಂಚಾಯತ ವ್ಯಾಪ್ತಿಯ ಭೈರನಟ್ಟಿ ಗ್ರಾಮದ ಬಲಭೀಮ ತೋಟದ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಯೋಜನೆಯಾದ ಜಲ ಜೀವನ ಮಿಷನ್ ಕಾಮಗಾರಿಗೆ ಭೂಮಿ ಪೂಜೆಯನ್ನು ಜನಪ್ರತಿನಿಧಿಗಳು ಮತ್ತು ಮುಖಂಡರು ನೆರವೇರಿಸಿದರು.
ಈ ಸಂದರ್ಭದಲ್ಲಿ ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ ಮಾತನಾಡಿ, ಭೈರನಟ್ಟಿ ಗ್ರಾಮದ ಬಲಭೀಮ ತೋಟದ ಜನತೆಗೆ ಪ್ರತಿ ಮನೆ ಮನೆ ನೀರಿನ ಸೌಲಭ್ಯ ಒದಗಿಸಲಿಕ್ಕೆ ಕೆ.ಎಮ್.ಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಜೆ.ಜೆ.ಎಂ ಯೋಜನೆಯಡಿ ಸುಮಾರು 36 ಲಕ್ಷ ಅನುದಾನ ನೀಡಿರುವದನ್ನು ಗ್ರಾಮಸ್ಥರ ಸದ್ಭಳಕೆ ಮಾಡಿಕೊಳ್ಳ ಬೇಕೆಂದರು.
ಈ ಸಮಯದಲ್ಲಿ ಭೈರನಟ್ಟಿ ಗ್ರಾಮದ ಹಿರಿಯರಾದ ಗಿರಪ್ಪ ಈರಡ್ಡಿ, ಗ್ರಾಮ ಪಂಚಾಯತ ಸದಸ್ಯರಾದ ಮಾರುತಿ ನಡಬಟ್ಟಿ, ಹನಮಂತ ಜೋಗನ್ನವರ, ವಾಸುದೇವ ಬಿ.ಪಾಟೀಲ ಮತ್ತು ಲಕ್ಷ್ಮಣ ಖಿಲಾರಿ, ಬಸಪ್ಪ ಖಿಲಾರಿ, ಪಾರಿಸ ಉಂದ್ರಿ, ಉದಪ್ಪ ಖಿಲಾರಿ, ಪಾಂಡು ಜೋಗನ್ನವರ, ಅರ್ಜುನ ಹಲಗತ್ತಿ, ರವಿ ಡೊಳ್ಳಿ, ಬಾಲಚಂದ್ರ ಪಾಟೀಲ, ಕೆಂಚಪ್ಪ ಡೊಳ್ಳಿ, ವಿಠ್ಠಲ ಪಾಟೀಲ, ವೆಂಕಪ್ಪ ಗಿರಡ್ಡಿ, ಬೀರಪ್ಪ ಕಾರದಗಿ, ರಾಯಪ್ಪ ಬಾನಸಿ, ಪ್ರಕಾಶ ಸನದಿ, ಪಾಂಡು ಜಾಡರ, ಜಗದೀಶ ಖಿಲಾರಿ, ಲಕ್ಷ್ಮಣ ಕಾರದಗಿ, ಶ್ರವಣ ಜೋಗನ್ನವರ, ಅಮರ ಚಂದರಗಿ, ಶ್ರೀಶೈಲ ಖಿಲಾರಿ, ವಿಠ್ಠಲ ಹುಣಶಿಕಟ್ಟಿ, ಪಾಂಡು ದೊಡ್ಡಮನಿ, ಮಾರುತಿ ಚಪರಿ, ಮಾಳೆಪ್ಪ ಪೂಜೇರಿ ಮತ್ತು ಗ್ರಾ.ಪಂ ಪಿಡಿಒ ಉದಯ ಬೆಳುಡುಗಿ ಮತ್ತಿತರರು ಉಪಸ್ಥಿತರಿದರು.