ಮೂಡಲಗಿ: ತಾಲೂಕಿನ ಕುಲಗೋಡ ಗ್ರಾಮದ ಸರಸ್ವತಿ ಶಾಲೆಯ ವಿದ್ಯಾರ್ಥಿ ಹಾಗೂ ಮಡಿವಾಳ ಸಮಾಜದ ಕೀರ್ತಿ ಹನಮಂತ ಮಡಿವಾಳ ವಿದ್ಯಾರ್ಥಿಯು ವಿಜಯಪುರ ಸೈನಿಕ ಶಾಲೆಯ ಪ್ರವೇಶ ಪರೀಕ್ಷೆಯಲ್ಲಿ ಆಯ್ಕೆಯಾದ ಪ್ರಯುಕ್ತ ಮುನ್ಯಾಳ ಗ್ರಾಮದ ಮಡಿವಾಳ ಸಮಾಜದ ಮುಖಂಡ ಶಿವಾನಂದ ಮಡಿವಾಳ ಸತ್ಕರಿಸಿ ಗೌರವಿಸಿದರು.
ಈ ಸಮಯದಲ್ಲಿ ಶಿವಾನಂದ ಮಡಿವಾಳರ ಮಾತನಾಡಿ, ಪ್ರತಿಯೊಬ್ಬರು ಪಾಲಕರೂ ತಮ್ಮ ಮಕ್ಕಳಿಗೆ ಒಳ್ಳೆಯ ವಿದ್ಯೆಯನ್ನು ನೀಡಿ ಮಕ್ಕಳನ್ನು ಆಸ್ತಿಯನ್ನಾಗಿಸಬೇಕೆಂದರು. ಬಡ ಮತ್ತು ಹಿಂದುಳಿದ ಸಮಾಜವಾದ ಮಡಿವಾಳ ಸಮಾಜದ ಬಾಂಧವರು ಮಕ್ಕಳಿಗೆ ವಿದ್ಯೆಯ ಜೊತೆಗೆ ಸಂಸ್ಕಾರ ನೀಡಬೇಕೆಂದರು.
ಈ ಸಮಯದಲ್ಲಿ ಉಮೇಶ ಮಡಿವಾಳರ, ಹನಮಂತ ಮಡಿವಾಳ, ಭೀಮಶಿ ಮಡಿವಾಳ, ಶ್ರೀಕಾಂತ ಮಡಿವಾಳ, ವಿದ್ಯಾರ್ಥಿ ತಾಯಿ ಲತಾ ಹ.ಮಡಿವಾಳ, ಸಾವೀತ್ರಿ ಮಡಿವಾಳ, ಉಮಾ ಮಡಿವಾಳ ಮತ್ತಿತರರು ಉಪಸ್ಥಿತರಿದರು.