ಗೋದಾವರಿ ಸಕ್ಕರೆ ಕಾರ್ಖಾನೆ ಕಬ್ಬು ನುರಿಸುವ ಹಂಗಾಮು ಶುಕ್ರವಾರ ಮುಕ್ತಾಯ
ಹಳ್ಳೂರ – ಸಮೀಪದ ಗೋದಾವರಿ ಬಯೋರಿಫೈನರಿಸ್ ಲಿಮಿಟೆಡ್ ಸಮೀರವಾಡಿ ಸಕ್ಕರೆ ಕಾರ್ಖಾನೆಯ 2024-25 ನೇ ಸಾಲಿನ ಕಬ್ಬು ನುರಿಸುವ ಹಂಗಾಮು ಯಶಸ್ವಿಯಾಗಿದೆ.
ಗುರುವಾರ ದಂದು ಸುಮಾರು 24.58 ಲಕ್ಷ ಟನ್ ಕಬ್ಬು ನುರಿಸಿ ಕಾರ್ಖಾನೆಯು ಇತಿಹಾಸದಲ್ಲಿಯೇ ಅತ್ಯಧಿಕ ದಾಖಲೆ ಮಾಡಿದೆ. ಕಾರ್ಖಾನೆಯು ಕಬ್ಬು ನುರಿಸುವಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಪಡೆದಿದೆ. ಶುಕ್ರವಾರ ದಂದು ಮುಂಜಾನೆ 9 ಗಂಟೆಗೆ ಕಬ್ಬು ನುರಿಸುವ ಹಂಗಾಮು ಮುಕ್ತಾಯ ಸಮಾರಂಭವು ಜರುಗುವುದು.
ಸಮಾರಂಭಕ್ಕೆ ರೈತ ಬಾಂಧವರು, ಕಾರ್ಮಿಕರು, ಆಡಳಿತ ವರ್ಗದವರು ಎಲ್ಲರೂ ಕಾರ್ಯಕ್ರಮಕ್ಕೆ ಆಗಮಿಸಿ ಶೋಭೆ ತರಬೇಕೆಂದು ಕಾರ್ಖಾನೆಯ ಕಾರ್ಯ ನಿರ್ವಾಹಕ ನಿರ್ದೇಶಕರಾದ ಬಿ ಆರ್ ಬಕ್ಷಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.