ಬೀದರ – ರಾಜ್ಯದ ಮಾಜಿ ಸಚಿವ ಪ್ರಭು ಚೌಹಾಣ ಅವರಿಗೆ ಪರಿಶಿಷ್ಠ ಜಾತಿ ಹೆಸರಿನಲ್ಲಿ ಪ್ರಮಾಣ ಪತ್ರ ಕಂಟಕವಾಗಿ ಪರಿಣಮಿಸುವ ಸಾಧ್ಯತೆಗಳು ಗೋಚರಿಸುತ್ತಿವೆ.
ಸದ್ಯ ಸಚಿವ ಸಂಪುಟದಲ್ಲಿ ಸ್ಥಾನಕ್ಕೆ ಪ್ರಯತ್ನ ಪಡುತ್ತಿರುವ ಪ್ರಭು ಚೌಹಾಣ್ ಅವರ ಮಗ ಪ್ರತೀಕ್ ಚೌಹಾಣ್ ಗೂ ಜಾತಿ ಪ್ರಮಾಣ ಪತ್ರದ ಬಿಸಿ ತಟ್ಟಿದ್ದು ಅವರು ಮಹಾರಾಷ್ಟ್ರದಲ್ಲಿ ವಿದ್ಯಾಭ್ಯಾಸ ಮುಗಿಸಿದ್ದಾರೆ. ಆದರೆ ಮಹಾರಾಷ್ಟ್ರದಲ್ಲಿ ಬಂಜಾರ ಸಮುದಾಯ ಓಬಿಸಿ ವರ್ಗಕ್ಕೆ ಸೇರದಿದ್ದರೂ ಕರ್ನಾಟಕದಲ್ಲಿ ಪರಿಶಿಷ್ಠ ಜಾತಿ ಹೆಸರಿನಲ್ಲಿ ಪ್ರಮಾಣ ಪತ್ರ ಪಡೆಯಲಾಗಿದೆ.
ಈ ಕಾರಣದಿಂದಾಗಿ ಜಾತಿ ಪ್ರಮಾಣ ಪತ್ರ ಪರಿಶೀಲಿಸಲು ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗದಿಂದ ಬೀದರ್ ಜಿಲ್ಲಾಧಿಕಾರಿಗಳಿಗೆ ಸೂಚನೆ ಬಂದಿದೆಯೆನ್ನಲಾಗಿದೆ.
ಇದೆ ಆಗಷ್ಟ್ 6 ರಂದು ವಿಚಾರಣೆಗೆ ಹಾಜರಾಗುವಂತೆ ಜಿಲ್ಲಾಧಿಕಾರಿ ಡಾ. ಆರ್. ರಾಮಚಂದ್ರ ಅವರಿಂದ ಮಾಜಿ ಸಚಿವರು ಮತ್ತು ಅವರ ಪುತ್ರ ಇಬ್ಬರಿಗೂ ಸೂಚನೆ ನೀಡಿದ್ದಾರೆ
ಒಂದು ಕಡೆ ಸಚಿವ ಸ್ಥಾನಕ್ಕೆ ಪೈಪೋಟಿ ನಡೆಸಿರುವ ಸಚಿವ ಪ್ರಭು ಚೌಹಾಣ್ ಈ ಹಿಂದೆ ಪರಿಶಿಷ್ಟ ಜಾತಿ ಹೆಸರಿನಲ್ಲೇ ಸಚಿವ ಸಂಪುಟದಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದರು. ಆದರೆ ಈಗ ಜಾತಿ ಪ್ರಮಾಣಪತ್ರದ ಈ ವಿಚಾರಣೆ ಎಲ್ಲಿಗೆ ಮುಟ್ಟುವುದೋ ಕಾದು ನೋಡಬೇಕಾಗಿದೆ.
ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ