ಕವನ

ಕವನ: ಹೃನ್ಮನೆ

ಎಲ್ಲಾ ‌ಹೃದಯವಂತರಿಗೆ ವಿಶ್ವ ಹೃದಯ ದಿನಾಚರಣೆಯ ಶುಭಾಶಯಗಳು. ಹೃನ್ಮನೆ ಎರಡು ಬಾಗಿಲು ಇರುವ ಈ ಪುಟ್ಟ ಮನೆಗೆ ನಾಲ್ಕು ಕೋಣೆಗಳಿಹವು ಬಡಿತ ಗಳಿಗೆ-ಗಳಿಗೆ!! ನಿಚ್ಚಳ ಪ್ರೀತಿಗೆ ನೆಲೆ ಇಹುದು ಒಳಗೆ ಕಶ್ಮಲ ಕಪಟತನವದು ಬಾಗಿಲಿನ ಹೊರಗೆ ಬಿಟ್ಟ ಲಜ್ಜೆಯ ಹಗೆಯು ಚುಚ್ಚು ಮಾತಿನ ಬಗೆಯು ಸುಟ್ಟ ಚುಟ್ಟದ ಹೊಗೆಗೆ ಉಸಿರು ಕಟ್ಟುವುದಿದಕೆ!! ಕೆಟ್ಟ ಕೊಬ್ಬಿನ ಸ್ನೇಹ ದುಷ್ಟ ವ್ಯಸನದ ದಾಹ ಕುಟ್ಟುವಂಥಾ ಚಿಂತೆ ಧ್ವಂಸಗೊಳಿಸಲು ನಾಂದಿ!! ಸ್ವಾಸ್ಥ್ಯಚಿತ್ತದ ಗಾಳಿ ನೇಮ-ನಿಷ್ಠೆಯ ಬೇಲಿ ಪ್ರಮುಖ ಶಾಂತಿಯ ರವಳಿ ಈ ಮನೆಯು ಬೆಳಗಲು!! ಚುಟ್ಟ=ಬೀಡಿ ರವಳಿ= ಶಕ್ತಿ ✍️ ಕಮಲಾಕ್ಷಿ ಕೌಜಲಗಿ.

ಕವನ: ಅವ್ವ ನೀ ಭಾಳ ಸುಳ್ಳು ಹೇಳತಿ

ಅವ್ವನ ಮನಸೇ ದೊಡ್ಡದು, ಅವ್ವ ಅನ್ನುವ ಹೆಸರಿನ ಜೀವವೇ ಬಂಗಾರ. ಅವ್ವ ಸುಳ್ಳು ಹೇಳುತ್ತಾಳೆ ಆದರೆ ಅದರಲ್ಲಿ ಪ್ರೀತಿ ಇದೆ, ಒಲವು ಇದೆ, ಮುದ್ದು ಇದೆ, ಕಾಳಜಿ ಇದೆ. ವಾಟ್ಸಪ್ ನಲ್ಲಿ ಬಂದ ಅವ್ವನ ಕುರಿತ ಕವನ ಮನ ತಟ್ಟುತ್ತದೆ. ನಮ್ಮ ಅವ್ವನಿಗೆ ಅರ್ಪಣೆ ಅವ್ವ ನೀ ಭಾಳ ಸುಳ್ಳು ಹೇಳತಿ ಮುಂಜಾನೆ ಜಲ್ದಿ ಎಬ್ಬಸಾಕ, ಏಳಕ್ಕೆ ಎಂಟು ಆಗೆತಿ ಅಂತಿ ಜಳಕ...

ಚುಟುಕುಗಳು

...ಕಟು ವಾಸ್ತವ.... ಗಾಂಧಿ ತತ್ವವನ್ನು ನಾವು ಪಾಲಿಸುತ್ತಿದ್ದೇವೆ, ರಸ್ತೆಗೆ, ಉದ್ಯಾನವನಕೆ ಗಾಂಧಿ ಹೆಸರು ಕೊಟ್ಟಿದ್ದೇವೆ, ಗಾಂಧಿ ತತ್ವಗಳ ಜೊತೆ ಅವರ ಭಾವಚಿತ್ರಕೆ ಫ್ರೇಂ ಹಾಕಿ, ಮೊಳೆ ಹೊಡೆದು ಗೋಡೆಗೆ ನೇತುಹಾಕಿದ್ದೇವೆ !!! .........ಆದರ್ಶ ಭಾರತ........ 'ಆದರ್ಶ ಭಾರತ 'ಕಟ್ಟೋಣವೆಂದು ಕಂಡಕಂಡಲ್ಲಿ ಭಾಷಣ ಬಿಗಿಯುವ ಖಾದಿ ತೊಟ್ಟ ವೀರರೇ ನಿಮ್ಮ ಸಂತಾನವನ್ನು ಹಣ,ಡ್ರಗ್ಸ್, ಮೋಜಿನಿಂದ ದೂರವಿಡಿ, ಆದರ್ಶ ಭಾರತ ತಾನೇ ನಿರ್ಮಾಣವಾಗುತ್ತದೆ. .........ಕಪ್ಪೆಗಳು......... ಕಪ್ಪೆಗಳು , ಇವು ಕಪ್ಪೆಗಳು ತಾವೂ ಮೇಲೆ ಬರವು, ಇನ್ನೊಬ್ಬರನೂ ಮೇಲೆ ಬಿಡೆವು, ಅದರ ಕಾಲ ಇದು,ಇದರ ಬಾಲ...

ಕವನ:ದಾರಿ ಯಾವುದಾದರೇನು!!!

..ದಾರಿ ಯಾವುದಾದರೇನು!!!... ದಾರಿ ಯಾವುದಾದರೇನು ? ತಲುಪುವ ಗುರಿ ನಿಶ್ಚಿತವಿರಲಿ, ನಿನ್ನ ಗುರಿ ಅಭ್ಯುದಯದತ್ತ ಸಾಗುತಿರಲಿ, ಗುರಿ ತಲುಪಲು ಏಕಾಗ್ರತೆಯ ಅರಿವಿರಲಿ, ನಿನ್ನ ದಾರಿಯ ಪಥಿಕ ನೀನೆ, ನಿನ್ನ ಸಮಾಜದ ನಿರ್ಮಾತೃ ನೀನೆ !! ಈ ದಾರಿ ಇಂದು ನಿನ್ನೆಯದಲ್ಲ, ಗಾಳಿ ,ಬೆಳಕು ಜನಿಸಿದಾಗ, ಮಾನವ ಪ್ರಾಣಿಯ ಉಗಮವಾದಾಗ, ದಾರಿ ತನ್ನಂತೆ ತಾನೇ ರೂಪುಗೊಂಡಿದ್ದು... ದಿಗಂಬರನಾಗಿದ್ದ ಮಾನವ ಮರದ ತೊಗಟೆ ,ಎಲೆಗಳ ಸುತ್ತಿ ಬೆತ್ತಲೆ ದೇಹ ಮುಚ್ಚಿಕೊಂಡಿದ್ದು, ಕಲ್ಲುಗಳ ಚಚ್ಚಿ ಬೆಂಕಿಯ ಹಚ್ಚಿ ದ್ದು, ಕಾಡುಗೆಣಸು,ಮಾಂಸಗಳ...

ಕವನ

..ವೃಕ್ಷ ಸಂದೇಶ.... ಬಾಳೆಂಬ ವಿಚಿತ್ರ ಸಂತೆಯಲಿ ಭೀಕರ ಬಿರುಗಾಳಿ,ಭೂಕಂಪ,ಪ್ರವಾಹ ನಿನ್ನನೆಂದೂ ಅಲುಗಿಸಲಾರವು ನಿಲ್ಲು, ನೀ ಧೃಡವಾಗಿ ನಿಲ್ಲು !!! ನಿನಗೆ ಅದೃಷ್ಟ ದೇವತೆಯ ಕಟಾಕ್ಷವಿದೆ, ಧೃಡವಾಗಿ, ವಿಸ್ತರಿಸಿ,ಕೊಂಬೆ-ರೆಂಬೆಗಳ ಹರಡಿ ನಿನ್ನದೇ ಸಾಮ್ರಾಜ್ಯದಲಿ ಸಂತಸದಿ ನಲಿಯುತ್ತಿದ್ದೀ, ಹಸಿರಾಗಿ,ಪಕೃತಿಯ ಉಸಿರಾಗಿ ನಳನಳಿಸುತ್ತಿದ್ದೀ..... ನಿನ್ನ ಕೊಂಬೆಗಳಲಿ ಸಾವಿರ ಪಕ್ಷಿಗಳು ಕುಳಿತು, 'ಕುಹು-ಕುಹು' ಸಂಗೀತ ಹಾಡಿ ನಲಿಯಲಿ; ನವಿಲು ನರ್ತಿಸಲಿ, ಶುಕ-ಪಿಕಗಳು ಆನಂದಿಸಲಿ, ನಿನ್ನ ನೆರಳಲಿ ಜಿಂಕೆ,ಮೊಲ,ಸಾರಂಗಗಳು ನಲಿಯಲಿ... ಓ ಮಾನವ ,ಈ ಹಸಿರು ವೃಕ್ಷದಂತೇ ನಿನ್ನ ಬಾಳು, ಜಾತಿ,ಮತ,ಪಂಥಗಳೆಲ್ಲವ...

ಚುಟುಕುಗಳು

ಸಹಜವಾಗಲಿದೆ ಜೀವನ !! ಈ ಕೊರೊನಾ ಕಾಲದಲ್ಲಿ.. ನಾವಾಗಬಾರದು.. ಒಬ್ಬರೇ ಏಕಾಂಗಿ! *ಮನಸ್ಸು* ಮಂಕಾಗಿ!! ಮೊಬೈಲ್ ಗೆ ಸಿಂಕಾಗಿ!!! 🤳🤳 (sync) ನಾವಾಗಬೇಕು.. ಸ್ನೇಹದ ಸೊಂಕಾಗಿ! ಲವಲವಿಕೆಯ ಲಿಂಕಾಗಿ!!(link) *ಆತ್ಮಸ್ಥೈರ್ಯದ* ಶಂಖವಾಗಿ!!!🐚🐚 ಕಣ್ಣಿಗೆ ಕಾಣದ ವೈರಸ್ ವೊಂದು ಕಾಡುತ್ತಿದೆ ಧರೆಯನಿಂದು; ಹಿಂದೆಂದೂ ಕಂಡು ಕೇಳರಿಯದ *ಅವಲಕ್ಷಣಗಳಲ್ಲಿ!!* ಕಣ್ಣಿಗೆ ಕಾಣದ ದೇವರಿಂದು ಕಾಪಾಡುತ್ತಿದ್ದಾನೆ ಧರೆಯನಿಂದು; ಹಿಂದೆಂದೂ ಕಂಡು ಕೇಳರಿಯದ *ಅವತಾರಗಳಲ್ಲಿ!!* ಮಾಸ್ಕ್ ಇದ್ದರೆ ಜೀವಕ್ಕೆ _ರಿಸ್ಕ್ ಇಲ್ಲ!_ 😷😷 ಪ್ರೇಮವಿದ್ದರೆ ಜೀವನವು _ಶುಷ್ಕವಲ್ಲ!!_ 💖💖 ಕಷ್ಟಗಳ ಬಂಡೆಗಳೇ ಉರುಳಿದರೂ! ಜಾರಬಾರದು ನಾವು 🙇🏻‍♂️ *ಖಿನ್ನತೆಗೆ* 🙇🏻‍♀️ ಸಾಮಾಜಿಕ ಅಂತರದಲ್ಲೂ ಸನಿಹವಾಗಬೇಕಿದೆ! ನಾವು ಮನ-ಮನಗಳ 🎭 *ಭಿನ್ನತೆಗೆ* 🎭 ಮೊನ್ನೆ ಮೊನ್ನೆಯ ನಿರುದ್ಯೋಗಿ, ಇಂದಿನ ಅಗರ್ಭ *ಸಿರಿದ್ಯೋಗಿ!* ಹೂಡಿಕೆ ಮಾಡಿದ್ದ ತಾಳ್ಮೆಯನ್ನು *ನಿಯತ್ತಾಗಿ !* ಹೃದಯಕ್ಕೆ ನಾಟುವಂತೆ ನಾಟಿ ಮಾಡಿದ್ದಾನೆ ಸಸಿಯನ್ನು ಅನವರತ ಅನ್ನದಾತ; ಪೂಜಿಸುತ್ತಾ ಭೂತಾಯಿಯನ್ನು ಬೆಳೆಯಲು *ಫಲವತ್ತಾಗಿ!* ಗುರುವಿನ ಗೋತ್ರ ಶಿಷ್ಯನ ಬಾಳಿನ ಸೂತ್ರ; ಸರಿಪಡಿಸುವನು ಶಿಷ್ಯನ ಜಾತಕ ಮನದಲ್ಲಿ ಮುಚ್ಚಿಟ್ಟುಕೊಂಡು ಸೂತಕ! ಮೊಂಬತ್ತಿಯಂತೆ ಮಾಯವಾಗುವನು ಶಿಷ್ಯಂದಿರ *ಉತ್ತಿಷ್ಠತೆಗಾಗಿ!* ನಿನ್ನೆಯ ಗದ್ಯವನ್ನೇ ಬರೆಯುತ್ತಿದ್ದೇನೆ; ನಾನಿಂದು ಪದ್ಯವಾಗಿ ಕೊರೊನಾ ಕಾಲದಲ್ಲಿ ಸಕಲರ *ಸುರಕ್ಷತೆಗಾಗಿ!* ಸಂತೋಷ ವಾಲಿ ಬಿ ಆರ್ ಪಿ...

ಕವನಗಳು: ಶಿಕ್ಷಕರ ದಿನಾಚರಣೆಯ ಶುಭಾಶಯಗಳು

ಗುರುವೆ ಶಕ್ತಿ ಗುರುವೆನ್ನ ಭಕ್ತಿ ಗುರುವೆನ್ನ ಶಕ್ತಿ ಗುರುವೇ ಪರಮೋದ್ಧಾರ ಗುರುತರ ಜವಾಬ್ದಾರಿಯಲಿ ಕರುಣೆಯ ಕಾರ್ಪಣ್ಯ ಸಿಂಧು ಸಹಕಾರಕೆ ಮಾದರಿಯು ಮಕ್ಕಳ ಪ್ರೀತಿಯಲಿ ಪೊರೆದು ಗುರಿಯೆಡೆಗೆ ಪಯಣಕೆ ದಾರಿ ತೋರಿಸುವ ದೀಪ ತಪ್ಪಾದರೆ ಶಿಕ್ಷಿಸುವ ನೋವಿನಲಿ ಸ್ಪಂದಿಸುವ ಸಾಧನೆಗೆ ಬೆನ್ನು ತಟ್ಟುವ ಬಾಳ ನೌಕೆಯ ದಿಕ್ಸೂಚಿ ತಿಳಿವಳಿಕೆಯ ಹರಿಸಿ ಅರಿವಿನ ಧಾರೆಯಲಿ ಜೀವಿಸಲು ಕಲಿಸಿ ಪರಿವರ್ತನೆಯ ತೋರಿ ಮನದ ಕಲ್ಮಶವ ಕಳೆದು ಕೌಶಲ್ಯ ವೃದ್ಧಿಗೆ ಸಹನೆಯ ಗುಣದಿ ವಿಚಾರವಂತಿಕೆಗೆ ಕಾರಣೀಭೂತ ಸಮಾಜದ ಕೇಂದ್ರ ಬಿಂದು ನಿರ್ವಹಣೆಗೆ ಹೊಂದಿಸಿ ಲೆಕ್ಕ ಪಕ್ಕದಿ ಗಮನಿಸಿ ಸೂಕ್ತ ವ್ಯವಸ್ಥೆ ಶಕ್ತ ಸಮಾಜ ಕಲ್ಪಿಸಿ ಸೂಕ್ತ ಪರಿಸರದ ಚಾಲಕ. ರೇಷ್ಮಾ...

ಗುರುವಿನ ಪಾದಕೆ ನಮೋನಮಃ ಶಿಕ್ಷಕರ ದಿನಾಚರಣೆಯ ಸಂದರ್ಭದ ಕವನಗಳು

ಶಿಕ್ಷಕರು ಇವರೇ ನೋಡಿ ಶಿಕ್ಷಕರು ಸಮಾಜದ ಆಪ್ತ ರಕ್ಷಕರು ಮಣ್ಣಿನ ಮುದ್ದೆಯ ತಿದ್ದುತ ಮೂರ್ತಿ ಮಾಡಿದ ಶಿಲ್ಪಕಾರರು ಮಕ್ಕಳ ಮನವನು ಅರಿತವರು ಸಹನೆಗೆ ಇವರೇ ಹೆಸರಾಗಿಹರು ಸಕಲ ಕಲೆಯನು ಬಲ್ಲವರು ಪ್ರತಿಭೆಯ ಬೆಳಕಿಗೆ ತಂದವರು ಶಿಕ್ಷಕ ಎನ್ನುವ ಪದದಲ್ಲೆ ದಿವ್ಯ ಶಕ್ತಿಯು ಅಡಗಿಹುದು ಚೈತನ್ಯದ ಚಿಲುಮೆ ನೀವಾಗಿರಲು ಸೇವೆಗಾಗಿ ಮನ ಮಿಡಿದಿಹುದು ಅಜ್ಞಾನದ ಕತ್ತಲೆ ಆಳಿದವರು ಜ್ಞಾನ ಜ್ಯೋತಿಯ ಬೆಳಗಿದವರು ಮಾನವೀಯ ಮೌಲ್ಯಗಳ ತಿಳಿಸಿದರು ಸಮಾಜದ ಏಳ್ಗೆಗೆ ದುಡಿವವರು ಸರ್ವ ಸಮಾನತೆ ತಂದವರು ಜಾತ್ಯತೀತತೆ ಮೆರೆದವರು ವಿಶ್ವಾಸಕೆ ಬೆಲೆಯನುಕೊಟ್ಟವರು ನೈತಿಕತೆಯನು ಬೆಳೆಸುವವರು ಪೂರ್ಣಿಮಾ ಯಲಿಗಾರ ಶಿಕ್ಷಕಿ...

ಕವನ: ಜಾತಿ ಬೇಕೇ ? ಮತ ಏಕೆ ?

ಜಾತಿ ಬೇಕೇ ? ಮತ ಏಕೆ ? ಜಾತಿ ಏಕೆ ? ಮತ ಏಕೆ ? ಧರ್ಮ ಏಕೆ? ಹಿಂಸೆ ಏಕೆ ? ಕಾಯುವ ದೇವ ಎಲ್ಲರಿಗೊಬ್ಬನಿರಲು, 'ಮನುಜ ಒಂದೇ ಕುಲಂ ' ಧ್ವನಿ ಎಲ್ಲೆಲ್ಲೂ ಮೊಳಗಿರಲು ಸ್ವಾರ್ಥದ ಮರಳ ಮಹಲನು ವೈರಸ್ ಗಳೆಂಬ ದುರದೃಷ್ಟದ ಅಲೆಗಳು, ನಿರ್ಧಯವಾಗಿ ಕೊಚ್ಚಿಹಾಕುತಿರಲು, ಮತ್ತೇಕೆ ನಿನಗೆ ,ಅನುದಿನ-ಅನುಕ್ಷಣ ಜಾತಿ,ಮತ,ಧರ್ಮಗಳ ಹುಲಿವೇಷ !!! ಕುಡಿವ ನೀರೊಂದೇ,ಹರಿವ ರಕ್ತವೊಂದೇ ಉಸಿರಾಡುವ ಗಾಳಿಯೊಂದೇ ಇರಲು ನೋವಾದಾಗ,ನಲಿವಾದಾಗ ಕಣ್ಣಲಿ ಚಿಮ್ಮುವ ಕಂಬನಿಗೆ ಜಾತಿ,ಮತ,ಧರ್ಮ ಗಳ...

ಕವನ: ಕನ್ನಡಕಾಗಿ ಹೋರಾಡು…

ಕನ್ನಡಕಾಗಿ ಹೋರಾಡು ಕನ್ನಡ ಭಾಷೆಯ ಮಾತಾಡು, ಕನ್ನಡದಲೇ ಉಸಿರಾಡು, ಕನ್ನಡ ತಾಯಿಗೆ ಪ್ರಾಣ ನೀಡು.. ಪಂಪ,ರನ್ನ,ರಾಘವಾಂಕ,ಹರಿಹರ, ಕುಮಾರವ್ಯಾಸರು ಕನ್ನಡದ ಪಂಚಕಿರೀಟಗಳು, ಬೇಂದ್ರೆ,ಕುವೆಂಪು, ಮಾಸ್ತಿ,ಕಾರಂತ, ವಿ.ಕೃ.ಗೋಕಾಕರು ಕನ್ನಡದ ಪಂಚ ಕಳಸಗಳು...... ಕಾವೇರಿ,ಕೃಷ್ಣೆ,ತುಂಗೆ,ಹೇಮಾವತಿ, ಶರಾವತಿ ನಾಡ ಕಾಮಧೇನುಗಳು, ಮೈಸೂರು, ಬೆಂಗಳೂರು,ಬೆಳಗಾವಿ,ಕಲ್ಬುರ್ಗಿ, ಹುಬ್ಬಳ್ಳಿ-ಧಾರವಾಡಗಳು ಕನ್ನಡದ ಕೆಚ್ಚೆದೆಯ ಕೇಂದ್ರಗಳು..... ಹಂಪೆ,ಬಾದಾಮಿ-ಐಹೊಳೆ, ಮೇಲುಕೋಟೆ, ಬೇಲೂರು-ಹಳೇಬೀಡು, ಶ್ರವಣಬೆಳಗೊಳಗಳು ಕನ್ನಡದ ಶಿಲ್ಪಕೇಂದ್ರಗಳು, ರಾಜ್,ವಿಷ್ಣು,ಅಂಬಿ,ಅನಂತ್ ನಾಗ್,ಅಶ್ವತ್ಥ್ ಕನ್ನಡನಾಡಿನ ನಟನಾ ರತ್ನಗಳು.... ಕನ್ನಡನಾಡಲಿ ಎಲ್ಲವೂ ತುಂಬಿವೆ, ಚಿಂತೆಯೇತಕೆ ಓ ಕನ್ನಡಿಗ, ಕನ್ನಡಕಾಗಿ ಹೋರಾಡು,ಕನ್ನಡತನವ ಕಾಪಾಡು... ಕನ್ನಡವೇ ನಿನ್ನಮ್ಮ,ನಿನ್ನ ಪೊರೆವ ದೇವರು, ಕನ್ನಡಕಾಗಿ ಕೈಎತ್ತು,ಕನ್ನಡ ಬಾವುಟ ಮೇಲೆತ್ತು, ಕನ್ನಡ ..ಕನ್ನಡ..ಸವಿಗನ್ನಡ ,ಸಿಹಿ...
- Advertisement -

Latest News

ಹನಿಗವನಗಳು

ಹನಿಗವನಗಳು 1) ಸುಳ್ಳುಗಾರರು ಹತ್ತು ನಾಲಿಗೆಯ ರಾವಣ ಹೇಳಲಿಲ್ಲ ಒಂದು ಸುಳ್ಳು ಒಂದೇ ನಾಲಿಗೆಯ ರಾಜಕಾರಣಿ ಹೇಳುತ್ತಾನೆ ದಿನಕ್ಕತ್ತು ಸುಳ್ಳು! 2) ಶೀಲಾ ನೆರೆಮನೆ ಶೀಲಾ ಪರ ಪುರುಷರೊಡನೆ ಸೇರಿ ಹೆಸರು ಕೆಡಿಸಿಕೊಂಡಳು 3) ಟಿವಿ ಹಾವಳಿ ಮನೆಯಲ್ಲಿ ಟಿವಿ ಮುಂದೆ ಸದಾ ಇರುವ ವಿದ್ಯಾ ರ್ಥಿಗಳು ಶಾಲೆಯಲ್ಲಿ ಹಿಂದೆ ಬೀಳುವರು. 4) ವಾಸ್ತವ ಕಟ್ಟುವವು...
- Advertisement -
close
error: Content is protected !!
Join WhatsApp Group