ಕವನ

ಕವನ : ವೀರಗಾಥೆ

ವೀರಗಾಥೆ ವೀರ ಯೋಧರಿಗೊಂದು ನನ್ನ ನುಡಿ ನಮನ ಕೇಳಿರಿ ಭಾರತೀಯರೇ ಕೆಚ್ಚೆದೆಯ ವೀರರ ಕಥೆಯನ್ನ ನುಸುಳಿ ಬಂದ ಪಾಕಿಸ್ತಾನಿಯರ  ಹೊಸಕಿ ಹಾಕಿದ ಗಾಥೆಯನ್ನ // ಬೆನ್ನಿಗೆಂದೂ ಇರಿಯೆವು ಎದುರಿಗೆ ಬಂದರೆ ಬಿಡೆವು ನಾವು ಕೆಚ್ಚೆದೆಯ ಭಾರತೀಯ ವೀರರು ಸೈನಿಕರು ಕದನಕ್ಕಿಳಿದರೆ ಗೆಲ್ಲದೆ ಇರಲಾರೆವು ನಾವು ಇರಲಾರೆವು ವೈರಿಗಳ ಕೊಚ್ಚದೆ ಇರಲಾರೆವು ನಾವು ಬದುಕಲಾರೆವು// ಭಾರತೀಯರು ನಾವು ಗಂಡೆದೆ ಹುಲಿಗಳು ತಡವಿದರೆ ಬಿಡಲೊಲ್ಲೆವು ಗೆಲ್ಲದೆ ಇರಲಾರೆವು ಎದೆ ಬಗೆದರೂ ಗುಂಡಿಗೆ...

ಕವನ : ಗಂಗಾವತಿ ಪ್ರಾಣೇಶ

ನಗೆಗಾರ ಗಂಗಾವತಿ‌ ಪ್ರಾಣೇಶ (ಸುನೀತ ಛಂದಸ್ಸಿನಲ್ಲಿ ಬರೆಯಲಾಗಿದೆ) ಬೀಚಿ ಮೈದಾನದಲಿ ಹಸುರ ಮೇಯಿತು ಪ್ರಾಣಿ ಮಂದಹಾಸವ ಬೀರಿ, ಚಂದ್ರಚುಕ್ಕಿಯ ತೋರಿ ನಗೆಗಂಗೆಯಲಿ ಮಿಂದು, ನಡೆದು ಸಾಗಿತು ಮೀರಿ ದೂರದೂರಕೆ ದಾಟಿ ಸಪ್ತ ಪರ್ವತ ಶ್ರೇಣಿ. ತಿಳಿಹಾಸ್ಯ ಹಾಲ್ಗರೆದು ಜನರಿಗೂಡಿಸಿ ತಣಿಸಿ ಮೋಡಿ ಮಾಡಿತು ನುಡಿಮಂತ್ರ ದಂಡವ ಹಿಡಿದು ಉತ್ತರದ ಕರುನಾಡ ಭಾಷೆ ಸೊಬಗನು ನುಡಿದು ಮಂತ್ರಮುಗ್ಧರ ಮಾಡುತವರ ಖುಷಿ ಇಮ್ಮಡಿಸಿ. ಸಾಹಿತ್ಯ ದರ್ಪಣದಿ ಮುಖವ‌ ಕಂಡರು ಚೂರು ಕನ್ನಡಕದಲಿ ಕನ್ನಡಮ್ಮನ...

ಕವನ : ಮೂಕ ಹಕ್ಕಿಯ ಹಾಡು

ಮೂಕ ಹಕ್ಕಿಯ ಹಾಡು ಹೃದಯ ರಾಗ ಹಾಡದಂತೆ ಕೊರಳ ಕೊಯ್ದೆಯಲ್ಲ... ಹೇಗೆ ಹಾಡಲಿ... ನೀನೇ ಹೇಳು ಎದೆಯ ಮಾತು ಆಡದಂತೆ ತುಟಿಯ ಹೊಲಿದೆಯಲ್ಲ ಹೇಗೆ ನುಡಿಯಲಿ...ನೀನೇ ಹೇಳು ಎತ್ತರ ಹಾರುವ ಕಂಗಳ ಕನಸ ಬೆಳಕ ಕಸಿದೆಯಲ್ಲ ಹೇಗೆ ಹಾರಲಿ...ನೀನೇ ಹೇಳು. ರೆಕ್ಕೆ ಕತ್ತರಿಸಿ ಆಕಾಶ ತೋರಿಸುತ ನಕ್ಕುಬಿಡು ಎಂದೆಯಲ್ಲಾ ಹೇಗೆ ನಗಲಿ..ನೀನೇ ಹೇಳು ಭಾವಗಳ ಬಂಧಿಸಿ ಮೌನವಾಗಿ ಜೀವ ಕಡಲಲಿ ಎಸೆದೆಯಲ್ಲಾ ಹೇಗೆ ತೇಲಲಿ...ನೀನೇ ಹೇಳು ಉಸಿರ ಕಸಿದು ಹಸಿರಾಗಿ ಹಾಯಾಗಿರು ಎಂದು ಹರಸಿದೆಯಲ್ಲ ಹೇಗೆ ಜೀವಿಸಲಿ... ನೀನೇ ಹೇಳು -ಇಂದಿರಾ ಮೋಟೆಬೆನ್ನೂರ. ಬೆಳಗಾವಿ

ಕವನ : ಪ್ರಕೃತಿ

ಪ್ರಕೃತಿ ಮಂಜಿನ ಹೊದಿಕೆಯ ಹೊದ್ದು ಮಲಗಿದ ಗಿರಿಸಾಲು, ಹಸಿರಸಿರು ಹಾಸಿನಲಿ ತಂಗಾಳಿ ಬೀಸಿನಲಿ, ಆಗಸವು ಭುವಿಗಿಳಿದು ಬರೆಯುತಿದೆ ಪ್ರೇಮಕಾವ್ಯ, ಅಂಕುಡೊಂಕು ಸಾಲುಗಳಲಿ, ತಟಪಟದ ಪದಗಳಲಿ, ಎಲೆಯಂಚಿನ ಮೊನಚಿನಲಿ, ಚಿಗುರು ಕೆಂಬಣ್ಣದಲಿ, ಉತ್ತುಂಗದ ಉಪಮೆಯಲಿ, ಬೆಟ್ಟದಡಿಯ ಉಪಮಾನದಲಿ, ಪುಷ್ಪಗಳ ಅಲಂಕಾರದಲಿ, ಇಂದ್ರಚಾಪ ವೃತ್ತದಲಿ, ಚೆಂದದ ಸಂಧಿಗಳಲಿ, ಮಾಸದ ಸೌಂದರ್ಯದ ಸಮಾಸಗಳಲಿ, ಮನದ ನದಿಗಳಲಿ ಚೈತನ್ಯದ ಸಂಚಾರ ನೋಡಿದಷ್ಟು ನಯನ ಮನೋಹರ, ಪ್ರಕೃತಿಯ ವ್ಯಾಕರಣದ ವಯ್ಯಾರ... ಪ್ರಸನ್ನ ಜಾಲವಾದಿ architect             ...

ಕವನ : ಎಲ್ಲರಂತೆ ನಕ್ಕು ಬಿಡು

ಎಲ್ಲರಂತೆ ನಕ್ಕು ಬಿಡು ನೀನು ಒಳಗೊಳಗೆ ಎಷ್ಟು ಅತ್ತಿರುವೆ ಗೊತ್ತಿಲ್ಲ ಗೆಳತಿ ಹೊರಗೆ ಸೂಸಿರುವೆ ಚಂದ್ರನ ಸವಿ ನಗೆಯ ದಿವ್ಯ ಬೆಳಕು ನೂರು ಮೈಲಿಯ ನಡೆ ಹಗಲು ಇರುಳು ಮಳೆ ಕಲ್ಲು ಮುಳ್ಳು ದಿಬ್ಬದಲಿ ಕನಸು ಕೈ ಹಿಡಿದು ಬವಣೆ ಭರವಸೆಯ ಒಂಟಿ ಬದುಕು ಸಾಕಿನ್ನು ಸಂಘರ್ಷ ಬಿಟ್ಟು ಭಯ ಭೀತಿ ಸಾವು ನೋವಿನ ಲೆಕ್ಕ ನೀ ನಡೆದದ್ದೆ ದಾರಿ ಎಲ್ಲರಂತೆ ನಕ್ಕು ಬಿಡು ನಿನ್ನ ಚಿತ್ತದ ಮೆಲಕು ಡಾ.ಶಶಿಕಾಂತ ಪಟ್ಟಣ, ರಾಮದುರ್ಗ

ಕವನ : ಮುನಿಬೇಡ್ವೋ ಮಳೆರಾಯಾ

ಮುನಿ ಬೇಡ್ವೋ ಮಳೆರಾಯಾ ಇದೇನ್ ಕೋಪಾನೋ ರಾಜಾ ನಿಂಗೆ ಹೋಗ್ಬೇಕು ನಾವ್ ಕ್ಯಾಮೆಗೆ ಹಿಂಗಾದ್ರೆ ನಮ್ಜೀವನಾ ಹೆಂಗೆ ಒಂಚೂರು ಪಾರು ನಿಲ್ಬಾರ್ದೆ || ನಿನ್ ಬರೋದ್ ಬರ್ತಿಯಾ ಹೊತ್ತುಗೊತ್ತು ನೋಡಿ ಬಾರಯ್ಯಾ ಯಾಕೆ ಕಿರಿಕಿರಿ ಮಾರಾಯಾ ನಮ್ಮ ಪಾಡ್ ವಸಿ ನೋಡಯ್ಯಾ || ಊಟ್ದೊತ್ತಿಗೆ ಮತ್ತಂಗೇ ಬರ್ತಿ ಹೋಗೋದ್ಹೇಗೆ ನಿನ್ನ್ ತಪ್ಸಿ ಸಾಕ್ ಸಾಕಾಯ್ತು ನಂಗುನೂ ಇದೇನ ಕತೆನೋ ನಿಂದೂನೂ || ಸಂಜೆ ಹೊತ್ತಲ್ಲರ ಬಿಡ್ತೀಯಾ ಹೆಚ್ಚ ಹೆಚ್ಚಾಗಿ ಕಾಡ್ತೀಯಾ ಕೋಡ್ಬೇಳೆ ಕೊಡಸ್ತೀನಿ ಸುಮ್ಕಿರೋ ಮುನಿ ಬೇಡ್ವೋ...

ಕವನ : ನೆನಪುಗಳು

ನೆನಪುಗಳು ಕಳೆದ ಕ್ಷಣಗಳ ಮಳಿಗೆಯಲಿ, ನೆನಪುಗಳ ಮಾಳಿಗೆಯಲಿ, ಹುಡುಕುತಿರುವೆ ನಿನ್ನೊಡನೆ ಕಳೆದ ರಸ ನಿಮಿಷಗಳ, ಹೃದಯದ ಕನ್ನಡಿಯ ಮೇಲೆ ಅಳಿಯದೇ ಉಳಿದಿರುವ ಕೆಲ ಬಿಂಬಗಳ, ಸಾಗರದ ತೀರದಲಿ ಮರಳಿನ ಮೇಲೆ ಗೀಚಿದ ಹೆಸರುಗಳ, ಮರಳು ಮನದಂಗಳದಿ ರಿಂಗಣಿಸುತಿರುವ ಪಿಸುಮಾತುಗಳ.. ಕಳೆದ ದಿನಗಳು ಬಾರದೇ ಇರಬಹುದು, ಹಳೆಯ ಓಣಿಗಳು ಇರದೇ ಇರಬಹುದು, ಇಂದಿಗೂ ಸಾಗುತಿರುವೆ ನಾವು ಸಾಗಿದ ದಾರಿಯಲಿ, ಹುಡುಕುತ ಹೆಜ್ಜೆ ಗುರುತುಗಳ, ನೀ ಮುಡಿದ ಮಲ್ಲಿಗೆಯ ಪರಿಮಳದ ಜಾಡುಗಳ, ನೀ ನಕ್ಕಾಗ...

ಕವನ : ಬನ್ನಿರೈ ಬಸವ ಭಕ್ತರೆ

ಬನ್ನಿರೈ ಬಸವ ಭಕ್ತರೇ ಬನ್ನಿರೈ ಬಸವ ಭಕ್ತರೇ ಒಂದಾಗುವ ಬನ್ನಿ ಸತ್ಯ ಸಮತೆ ಶಾಂತಿ ಪ್ರೀತಿ ಜಗಕೆ ಸಾರ ಬನ್ನಿ ಹಸಿದ ಹೊಟ್ಟೆಗೆ ಅನ್ನವಿಕ್ಕಿ ಬಂಧುವೆನ್ನ ಬನ್ನಿ ಅರಿವೇ ಗುರು ಲಿಂಗ ಜಂಗಮ ದುಡಿಮೆ ಪಾವನ ಎನ್ನಿ ಬಿಟ್ಟು ಹೋದ ಬಸವ ಭಕ್ತಿ ಮತ್ತೆ ಮೆರೆಸ ಬನ್ನಿ ದುಡಿಮೆ ದೇವರು ಶ್ರಮವೆ ಪೂಜೆ ಶರಣ ಪಥಕೆ ಬನ್ನಿ ಬಸವ ಅಲ್ಲಮ ಅಕ್ಕರನ್ನು ಹೊತ್ತು ನಡೆಯ ಬನ್ನಿ ವಚನ ಅಸ್ತ್ರ ಗಣಾಚಾರ ಹೊಸ ಬದುಕ ಕಟ್ಟ ಬನ್ನಿ _______________________ ಡಾ.ಶಶಿಕಾಂತ ಪಟ್ಟಣ ರಾಮದುರ್ಗ

ಕವನ : ಬಳಿ ಬಂದು ಒಮ್ಮೆ

ಬಳಿ ಬಂದು ಒಮ್ಮೆ ಕಾಡಬೇಡ ಜೀವವೇ ಅರಳಿ ನಿಂತ ನೇಹವ ಅಳಿಸಿ ನಗುತಲಿ ದೂರ ಬೇಡ ಜೀವವೇ ಬೆಸೆದ ಭಾವ ಬಂಧ ಹೊಸಕಿ ಹಾಕುತ ನೀಡಬೇಡ ನೋವನು ಬಳಿಯಲಿದ್ದು ಮೌನದಲಿ ಕೊಲ್ಲುತ ನೋಡಿಯೂ ನೋಡದಂತೆ ಹೋಗಬೇಡ ಜೀವವೇ ಬಳಿ ಬಾರ ಒಮ್ಮೆ.... ಪ್ರೀತಿಯಿಂದ ಬಳಿ ಕರೆದು ಎದೆ ತುಂಬಿ ಹಸಿರಾಗಿ ಉಸಿರೇ ತೊರೆಯ ಬೇಡವೇ ನಿನ್ನ ಸ್ನೇಹ ಸಂಪ್ರೀತಿ ಹನಿಯ ಹಾಡಿಗಾಗಿ ಕಾಯುತಿರುವೆ ನೋಡಾ... -- ಇಂದಿರಾ ಮೋಟೆಬೆನ್ನೂರ. ಬೆಳಗಾವಿ.

ಕವನ : ಹೀಗೇ ಒಮ್ಮೆ

ಹೀಗೇ ಒಮ್ಮೆ ____________ ಹೀಗೇ ಒಮ್ಮೆ ನಾನು ನೀನು ಅದೇ ಮರದ ನೆರಳಲಿ ಕುಳಿತು ಮಾತಾಡಬೇಕಿದೆ ನೆನಪಿಸಿಕೊಳ್ಳಬೇಕಿದೆ ಮತ್ತೆ ಹಳೆಯ ಕ್ಷಣಗಳ ಹಂಚಿಕೊಂಡ ಕಥೆ ಕವನ ಮಾತು ಚರ್ಚೆ ಸಂವಾದ ನಗೆ ಪ್ರೀತಿಯ ಸವಿಯ ಸವಿಯಬೇಕಿದೆ. ಆಗ ನಮ್ಮಿಬ್ಬರ ಮಧ್ಯೆ ಮೆರೆದ ಆದರ್ಶಗಳ ಮೆಲುಕು ಹಾಕಬೇಕಿದೆ ಅಂದು ಮಳೆಯಲ್ಲಿ ತಪ್ಪನೆ ತೊಯ್ದ ಹಸಿ ಇನ್ನೂ ಆರಿಲ್ಲ ಬೈಕ್ ನಿಂದ ನಾವಿಬ್ಬರೂ ಬಿದ್ದ ಪೆಟ್ಟು ಮಾಸಿಲ್ಲ ಕೈ ಕೈ ಹಿಡಿದು ದೂರ ದೂರ ಹೆಜ್ಜೆ ಹಾಕಿದ ನೆನಪು ನಾವಿನ್ನೂ ಮರೆತಿಲ್ಲ ಏಕೋ ಕೆಲ ದಿನಗಳಲ್ಲಿ ಮೌನ ಆವರಿಸಿತು ನನ್ನ ನಿನ್ನಯ ಮಧ್ಯೆ ಹೀಗೆ ದೂರಾದೆವು ಒಲವ...
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -
close
error: Content is protected !!
Join WhatsApp Group