ಕವನ

ಮೊರೆ ಕೇಳು ಮಹಾದೇವ

ಮೊರೆ ಕೇಳು ಮಹಾದೇವ ವರುಷದ ಮೊದಲ ಹಬ್ಬ ಯುಗಾದಿ ತರಲಿ ನಮಗೆಲ್ಲ ಹರುಷ ಅನುದಿನದಿ ಕೋಪ ತಾಪ ದ್ವೇಷ ಅಸೂಯೆ ತನುಮನಗಳಿಂದ ‌ ದೂರಾಗಲಿ ಮಹಾದೇವ|| ಚಿಗುರೆಲೆಗಳು  ಚಿಗುರುವಂತೆ ತರುಲತೆಗಳು ಬೆಳೆಯುವಂತೆ ನವ ಯುಗದಿ ನವ ತರುಣರು ಸತ್ಕಾರ್ಯಗಳಲಿ ತೊಡಗಲಿ ಮಹಾದೇವ|| ಮಾವಿನ ಸಿಹಿ ಬೇವಿನ ಕಹಿ ಜೀವನದ ಸಮರಸಕೆ ಮಾದರಿ ಸಿಹಿಕಹಿಯ ಸಮಾನತೆಯಲಿ ಸ್ವೀಕರಿಸುವಂತೆ ಮಾಡು ಮಹಾದೇವ || ದುಶ್ಚಟಗಳು ದೂರಾಗಲಿ ಕಷ್ಟಗಳು ಮಾಯವಾಗಲಿ ಹೊಸ ವರುಷಕೆ ಹುಮ್ಮಸ್ಸಿನಲಿ ದುಡಿದುಣ್ಣುವ ಶಕ್ತಿ ನೀಡು ಮಹಾದೇವ|| ಕಾಲ ಸದ್ದಿಲ್ಲದೆ...

ಕವನ: ರೈಲು ನಿಲ್ದಾಣದಲ್ಲಿ…

ರೈಲು ನಿಲ್ದಾಣದಲ್ಲಿ ತುಂಟ ನಿಹಾಲ್ ನನ್ನು ಇಂದು ರೈಲು ನಿಲ್ದಾಣಕ್ಕೆ ಕರೆದೊಯ್ದಾಗ  ಅವ ಕೇಳಿದ ಪ್ರಶ್ನೆಗೆ ಸುಸ್ತೋ ಸುಸ್ತು!  ದಾರಿಯಲ್ಲಿ ಸಿಕ್ಕ ಕುದುರೆ ಟಾಂಗಾ  ನೋಡಿ ಕುದುರೆಯನ್ನು ಮುಟ್ಟಿದ್ದೇ ಮುಟ್ಟಿದ್ದು! ಆ ಖುಷಿ ಕುದುರೆ ಮಾಲೀಕನಿಗೂ ಸಿಕ್ಕಿದೆಯೋ ಇಲ್ಲವೋ ದೇವನೇ ಬಲ್ಲ !  ಅವನಿಗಂತೂ ಖುಷಿಯಾಗಿತ್ತು.  ಆಗ ನನಗನಿಸಿದ್ದು  ಚಿಕ್ಕ ಚಿಕ್ಕ ಸಂಗತಿಗಳು ನೀಡುವ ಖುಷಿ ಕೋಟಿ ಕೋಟಿ ಕೊಟ್ಟು ಖರೀದಿಸುವ ವಸ್ತುವಿನಲ್ಲಿಲ್ಲವಲ್ಲಾ ಎಂದು! ನಿಲ್ದಾಣ ಪ್ರವೇಶಿಸಿದಾಗ ಅವ ಕೇಳಿದ...

ಕಿವಿಯೋಲೆ

ಕಿವಿಯೋಲೆ ಕಣ್ಣುಗಳ ಕಪ್ಪು ಚಲುವೆಗೆ ನೀಡಿವೆ ನಲ್ಲನ ಕರೆಯೋಲೆ  ಕಣ್ಣೋಟ ಸೆಳೆಯುವ  ಸುಂದರ ಕಿವಿಯೋಲೆ ಮನಸೆಳೆಯುವ ಸುಂದರಿಗೆ ಮುಡಿಪಾಗಿ ತೋರಿವೆ ನನ್ನ ಮನದ ಮಾತನು  ಪಿಸುಗುಡುತ ನೀ ಹೇಳೆ  ಬಾ ಇನಿಯ ಬರಸೆಳೆದು ಅಪ್ಪಿ ಮುದ್ದಾಡಲು ದುಂಬಿ ಮಕರಂದ  ಹೀರುವ ತೆರದಿ ನನ್ನನು ಏನೋ ಹೇಳಬೇಕು ಕಿವಿಯಲಿ ಎನುತ ಹತ್ತಿರ ಬರಲು  ಬರಸೆಳೆದ ಕಿವಿಯೋಲೆ  ನನ್ನ ಬಳಿಗೆ ಹೇಳು ನೀ ಹೇಳುವ ಮಾತುಗಳ ಎನಲು ಕೆಣಕಿದಂತಾಗಿ ನನ್ನ ಪ್ರೀತಿ ಎಲ್ಲಿ ಗುಟ್ಟು ನಿನ್ನ ಮೂಲಕ ರಟ್ಟಾಗುವುದೋ ಎನುತ ದೂರ ಸರಿಯಲು ನಾ ನಿಮ್ಮ ನಡುವೆ ಪ್ರೇಮ ಸೇತುವೆ ಹೇಳಿ ಬಿಡು ನೀ...

ಮಹಿಳಾ ದಿನದ ವಿಶೇಷ ಕವನಗಳು

ಹೆಣ್ಣೇ ಈ ಸೃಷ್ಟಿಗೆ ನೀ ವರದಾನ!  ತ್ರಿಮೂರ್ತಿಗಳನ್ನು ಸೃಷ್ಟಿಸಿದ ಹೆಣ್ಣೇ ಆದಿಶಕ್ತಿ, ಹೆಣ್ಣೇ ನೀನಿಲ್ಲದೆ ಈ ಸೃಷ್ಟಿಯಿಲ್ಲ , ಈ ಸೃಷ್ಟಿಗೆ ಆಧಾರವೂ ನೀನೇ ಶಕ್ತಿಯು ನೀನೇ ಯುಕ್ತಿಯು ನೀನೇ. ನೀನಿಲ್ಲದೇ ಜೀವವಿಲ್ಲ ನೀನಿಲ್ಲದೇ ಭಾವವಿಲ್ಲ ನೀನಿಲ್ಲದೇ ಪ್ರೀತಿ, ಪ್ರೇಮವಿಲ್ಲ ನೀನಿಲ್ಲದೇ ಕೋಪವೂ ಇಲ್ಲಾ  ನೀನಿಲ್ಲದೇ ಮಮತೆ, ವಾತ್ಸಲ್ಯವೂ ಇಲ್ಲ ನೀನಿಲ್ಲದೇ ಕರುಣೆ, ಕ್ಷಮೆಯು ಇಲ್ಲಾ  ನೀನಿಲ್ಲದೇ ನವ ಜೀವದ ಉಗಮವು ಇಲ್ಲಾ ನಿನ್ನಿಂದಲೇ ಸಂತೋಷ  ನಿನ್ನಿಂದಲೇ ದುಃಖ  ನಿನ್ನಿಂದಲೇ ಚೆಲುವು, ನಿನ್ನಿಂದಲೇ ಒಲವು ನಿನ್ನಿಂದಲೇ ಧೈರ್ಯ  ನಿನ್ನಿಂದಲೇ ಸೌಂದರ್ಯ  ನೀನೇ ಅಬಲೆ,ನೀನೇ...

ಬಣ್ಣದ ಹಬ್ಬದ ಕವಿತೆಗಳು

ಹೋಳಿ ಹುಣ್ಣಿಮೆ  ಹೋಳಿ ಹುಣ್ಣಿಮೆಯ ಶುಭದಿನ ಬಂದಿದೆ ಧರೆಗೆ ರಂಗಿನ ಅಭಿಷೇಕ ತಂದಿದೆ  ಕೆಟ್ಟದ್ದನ್ನ ಸುಟ್ಟು ಭಸ್ಮ ಮಾಡಿದೆ ಒಳ್ಳೆಯದನ್ನು ಧರೆಯಲ್ಲಿ ಸ್ಥಿರವಾಗಿ ಮೆರೆಸಿದೆ  ನಮ್ಮ ಜೀವನದ ಕೆಡುಕನ್ನು ತೊರೆದು ರಂಗು ರಂಗಿನ ಬಣ್ಣಗಳ ಹಾಗೆ  ಹೊಂಬೆಳಕು ತರಲೆಂದು ಹರಿ ಹರರಲ್ಲಿ  ಬೇಡುವ ಶುಭದಿನ ಬಂದಿದೆ ರತಿ ಮನ್ಮಥರ ಮಹತ್ವ ತಿಳಿಸಿದೆ  ಲೋಕ ಕಲ್ಯಾಣಕ್ಕಾಗಿ ಮಾಡಿದ ತ್ಯಾಗವ  ಸ್ಮರಿಸುವ ಶುಭ ಸಮಯ ಬಂದಿದೆ ಒಂದುಗೂಡುವ ಪವಿತ್ರ ಹೋಳಿ ಬಂದಿದೆ ಶಿವನ ರುದ್ರ ರೂಪವ...

ಕವನ: ಪಕ್ಷಿಯ ಪ್ರಪಂಚ

ಪಕ್ಷಿಯ ಪ್ರಪಂಚ ಯಾವಾಗಲೂ ಎಲ್ಲರ ನಿಂದಿಸುವ ಓ ಮನುಜನೇ ಇಗೋ ನೋಡಿದು ನಮ್ಮದು ಪ್ರಾಣಿ ಪಕ್ಷಿಯ ಪ್ರಪಂಚ ಯಾರ ಆಸರೆಯೂ ಇಲ್ಲ ಊಟವಿಲ್ಲದಿದ್ದರೂ ಮುಖದಲ್ಲಿ ಮಂದಹಾಸ ಮರೆಮಾಚಿಲ್ಲ ನನ್ನದು ಪ್ರಾಣಿ ಪಕ್ಷಿಯ ಪ್ರಪಂಚ ಅಲ್ಲಿಂದ ಇಲ್ಲಿಂದ ಎಲ್ಲಿಂದಲೋ ಹೊಂದಿಸಿ ತಂದ ಊಟ ಮರದ ಪೊಟರೆಗಳಲ್ಲಿ ಹೊಂದಿಸುತ ನಾಳೆಯೊಂದರ ಬಗ್ಗೆ ಯೊಚಿಸುವುದೇ ನನ್ನ ಪ್ರಪಂಚ ಓ ಮನುಜನೇ ನಿನಗೆ ಕೈ ಮುಗಿದು ಯಾಚಿಸುವೆ ನನ್ನ ಪ್ರಪಂಚವ ದೂರಗೊಳಿಸದಿರು ನಾ ಬೀಡು ಬಿಟ್ಟ ಆ ಮರ ಅಲುಗಿಸದೆ ಉರುಳಿಸದಿರು..... ಎಲ ಎಲವೋ ಮನುಜ...

ಕವನ: ನಾನೇನು ಸಾಧಿಸಿದೆ?

ನಾನೇನು ಸಾಧಿಸಿದೆ? ವರುಷವೊಂದು ಸಂದುತಲಿದೆ ಬದುಕಿನಲಿ ಒಂದು ವರುಷ ಕಳೆದು ಹೋಗಿದೆ ಸುಮ್ಮನೇ ಹಿಂತಿರುಗಿ ನೋಡಿದೆ ಈ ಕಳೆದ ವರುಷದಲಿ ನಾನೇನು ಮಾಡಿದೆ? ಕಳೆದು ಹೋದ ದಿನಗಳ ಜಾಲಾಡಿದೆ ಗುಟ್ಟಿನಲಿ ಮನವು ಮಾತಾಡಿದೆ ಸಾಧನೆಯ ಹಾದಿಯ ಮೊದಲ ಮೆಟ್ಟಲು ನಿರ್ಮಿಸಿದೆ ನಿನ್ನ ಬದುಕಿನಲಿ ಈ ವರುಷ ವ್ಯರ್ಥ ಮಾಡಿದೆ ಬರಹದ ಹಾದಿಯಲಿ ತೊಡಗಿದ್ದೆ ಸಾಧನೆಯ ಶಿಖರವನೇರುವ ಬಯಕೆಯಿದೆ ಪ್ರೋತ್ಸಾಹ, ಅವಕಾಶಗಳೂ ಸಿಗುತಲಿದೆ ಛಲವಿದೆ, ಮನವೂ ಖುಶಿಯಾಗಿದೆ. ಹೊಸ ವರುಷದ ಸಂಭ್ರಮವು ಬರುತಿದೆ ಬದುಕಿನಲಿ ಒಂದು...

ಕವನ: ಪೌಷ್ಟಿಕಾಂಶಗಳ ದೊರೆ

ಪೌಷ್ಟಿಕಾಂಶಗಳ ದೊರೆ 'ಅಕ್ಕಿ ಇದ್ದರೆ ಲಕ್ಕಿ' ಹಣ ಇದ್ದರೆ ಸಂಪತ್ತಣ್ಣ, ಆ ಕಾಲ ಮುಗಿದ ಕಥೆಯಣ್ಣ , ಅಕ್ಕಿ ತಿಂದವ  ರೋಗಿ, ರಾಗಿ ತಿಂದವ ನಿರೋಗಿ, ಜೋಳ ತಿಂದವ ತೋಳ ಇದು ಇಂದಿನ ಕಾಲವಣ್ಣ.... ಹತ್ತಕ್ಕೆ ಬಾಲ್ಯ, ಇಪ್ಪತ್ತಕ್ಕೆ ಯೌವನ ಮೂವತ್ತಕ್ಕೆ ಗೃಹಸ್ಥ, ಐವತ್ತಕ್ಕೆ ವಾನಪ್ರಸ್ಥ, ಅರವತ್ತಕ್ಕೆ ಅರಳು, ಎಪ್ಪತ್ತಕ್ಕೆ ಮರುಳು, ಎಂಭತ್ತರ ನಂತರ ಪರಲೋಕಕ್ಕೆ ತೆರಳು ಸಿರಿಧಾನ್ಯಗಳ ಬೆಳೆಯುತ್ತಿದ್ದ, ಉಣ್ಣುತ್ತಿದ್ದ ಆ ದಿನಗಳ ಲೆಕ್ಕಾಚಾರ, ನಲವತ್ತಕ್ಕೆ ಸಕ್ಕರೆ ಕಾಯಿಲೆ, ಅಧಿಕ ರಕ್ತದೊತ್ತಡ, ಹೃದಯಾಘಾತ ಎಲ್ಲಾ...

ಕವನ: ವೈಣಿಕನ ಕೈ ಸೇರಿದ ವೀಣೆ…

  ವೈಣಿಕನ ಕೈ ಸೇರಿದ ವೀಣೆ..  ವೈಣಿಕನ ಕೈ ಸೇರಿದ ವೀಣೆಯಿಂದ ಹೊಮ್ಮುವುದು ಸುಮಧುರ ಸಂಗೀತವು ಕಲೆಗಾರನ ಕುಂಚದಲಿ ಗೀಚಿದ ಗೆರೆಗಳು ಆಗುವುದು ಸುಂದರ ಚಿತ್ರಗಳು ದರ್ಜಿಯ ಕೈ ಸೇರಿದ ತುಂಡು ಬಟ್ಟೆಯು ರೂಪುಗೊಳ್ಳುವುದು ಅಂದದ ಉಡುಪಾಗಿ ಕಮ್ಮಾರನ ಬಡಿತದಿಂದ ಮಾತ್ರ ಕಬ್ಬಿಣವು ರೂಪುಗೊಳ್ಳಲು ಸಾಧ್ಯ ಆಯುಧಗಳಾಗಿ ಕುಂಬಾರನ ಕರಸ್ಪರ್ಶದಿಂದ ಮಣ್ಣಿನ ರೂಪವು- ಬದಲಾಗಿ ಪಾತ್ರೆ, ಹಣತೆಗಳಾಗುವುದು ಸೋನಗಾರನ ಕೈಚಳಕದಿಂದ ಮಣ್ಣಾಗಿದ್ದ- ಚಿನ್ನವು ಚಂದದ ಆಭರಣಗಳಾಗುವುದು ಕಡಲಿನಾಳವನು ಸೇರಿದ ಮಳೆಹನಿ ಮಾತ್ರವೇ ಕಣ್ಮನ ಸೆಳೆಯುವ ಮುತ್ತಾಗುವುದು ಸಪಾತ್ರವನು...

ಕವನ: ಕನ್ನಡ ರಾಜ್ಯೋತ್ಸವ ದಿನ

ಕನ್ನಡ ರಾಜ್ಯೋತ್ಸವ ದಿನ ನಮ್ಮ ಭಾಷೆ ಕನ್ನಡ ನಮ್ಮ ನಾಡು ಕನ್ನಡ ಪ್ರಾಚೀನ ಭಾಷೆ ಶಾಸ್ತ್ರೀಯ ಭಾಷೆ ಕನ್ನಡ ಹಲ್ಮಿಡಿ ಶಾಸನ ಹೇಳಿದೆ ಪ್ರಾಚೀನ ಕನ್ನಡ ಕುರಿತೋದದೆ ಕಾವ್ಯ ರಚಿಸಿದರ ನಾಡಿದು ಪಂಪ ರನ್ನ ಜನ್ನ ಪೊನ್ನ ಕವಿಗಳ ನಾಡಿದು ಕುವೆಂಪು ಬಿಎಂಶ್ರೀ ಮಾಸ್ತಿ ಬೇಂದ್ರೆ ಇದು ಸಕಲ ಕವಿ ಪುಂಗವರು ಬೆಳೆಸಿದ ನಾಡಿದು ಕಿತ್ತೂರು ಚೆನ್ನಮ್ಮ ಬೆಳವಡಿಯ ಮಲ್ಲಮ್ಮ ಶೂರ ಸಂಗೊಳ್ಳಿ ರಾಯಣ್ಣ ಅನೇಕರಮ್ಮ ಕನ್ನಡ ನೆಲಜಲ...
- Advertisement -

Latest News

ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ವಿಧಿವಶ- ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಕಂಬನಿ

ಬೆಂಗಳೂರು- ಶ್ರವಣ ಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನಿಧನಕ್ಕೆ ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕಂಬನಿ ಮಿಡಿದಿದ್ದಾರೆ. ಜೈನ್ ಸಮುದಾಯದ ಸಮಗ್ರ...
- Advertisement -
close
error: Content is protected !!