ಕವನ

ಬಸವಣ್ಣನ ಕವನಗಳು

ಬಸವಣ್ಣನೆಂದರೆ ಬಸವಣ್ಣನೆಂದರೆ ಸಾಕು . ನಾವು ಭಾವುಕರಾಗುತ್ತೇವೆ . ಅವನ ಪುತ್ಥಳಿಗೆ ಮಾಲೆ ಹಾಕಿ ದಿನವಿಡೀ ಕುಣಿಯುತ್ತೇವೆ. ಶರಣರ ಸೂತಕದಲ್ಲಿ ವಚನ ಹೊತ್ತು ಮೆರೆಯುತ್ತೇವೆ. ಅವರ ಅಂಕಿತ ತಿದ್ದಿ ನಾವು ದೊಡ್ಡವರಾಗುತ್ತೇವೆ. ಗುರು ವಿರಕ್ತರ ಪಲ್ಲಕ್ಕಿ ಹೊತ್ತು ಕಾದಾಡುತ್ತೆವೆ . ಬಸವನ ಕಂಚಿನ ಮೂರ್ತಿಗೆ ಕೋಟಿ ಕೋಟಿ ಸುರಿಯುತ್ತೇವೆ. ಜಾತ್ರೆ ಹಬ್ಬ ಮೇಳ ಉತ್ಸವದಲ್ಲಿ . ಚಂದಾ ವಸೂಲಿ ಹಪ್ತಾ ಎತ್ತುತ್ತೇವೆ. ಅಕ್ಕ ಮಾತೆ ಸ್ವಾಮಿ ಶರಣರ ಅಣತಿಯಂತೆ ದುಡ್ಡು ಮಾಡುತ್ತೇವೆ. ಮಠದೊಳಿಗಿನ ಬೆಕ್ಕು ಒಮ್ಮೊಮ್ಮೆ ಇಲಿಯ ಕಂಡು ನೆಗೆಯುತ್ತವೆ ಸುದ್ದಿಯಾಗುತ್ತವೆ. ವರ್ಷವಿಡಿ...

ಕವನ : ದ್ರೌಪದಿಯ ಸ್ವಗತ

ದ್ರೌಪದಿಯ ಸ್ವಗತ ನಾನು ಅರಸುಮನೆತನದ ಹೆಣ್ಣು, ಅರ್ಧಜಗದ ಮಣೆ ಹಿಡಿದ ಹೆಣ್ಣು. ಆದರೂ ನನ್ನ ಬದುಕು ಒಂದು ಕತ್ತಲು ಗವಿಯಂತೆ, ನೂರು ಚೂಪಿನ ಕತ್ತಿಗಳ ಮಧ್ಯೆ ಹೆಜ್ಜೆ ಹಾಕಿದಂತಿತ್ತು. ನಾನು ಕದನದ ಕಿಡಿಯಾದೆ ಅವಮಾನಗಳ ನೆರಳಲ್ಲಿ ಹೊತ್ತಿಕೊಂಡ ಬೆಂಕಿ. ಆದರೂ ನಾನು ಸೋಲಲಿಲ್ಲ; ಬಾಳಿನ ಹೊಗೆಯಿಂದ ಕರಗಿ ಹೋಗದೇ, ಹೆಮ್ಮೆಯಿಂದ ಉರಿಯುತ್ತಲೇ ಇದ್ದೆ. ನಾನು ಪರಿತಾಪದ ನೆರಳು, ನನ್ನ ಜೀವನವೇ ನೋವಿನ ದೀಪಮಾಲಿಕೆ. ನಾನೊಬ್ಬ ಪ್ರಯೋಗದ ಹೆಣ್ಣು, ಅಪಮಾನಗಳ ಪಥವನ್ನೇ ನಿರಂತರವಾಗಿ ಹಾದುಹೋಗಿದ ಕವಚಧಾರಿ. ನನ್ನ...

ಕವನ : ಜಾತಿ ಸಂತಿ

ಜಾತಿ ಸಂತಿ !   ಜಾತಿ ಹೆಂಗೈತಿ ಅಂದ್ರ ನನ್ನ ಹೆಸರಿನಾಗ ಐತಿ ವಾಸಿಸೋ ಮನೆಯಲ್ಲಿ ಐತಿ ನಾ ಕುಡಿಯೋ ನೀರಾಗೈತಿ ನಾ ತೊಡೋ ಬಟ್ಟೆಗೈತಿ ಮತ್ತ ಅದ ರಾಡಿ ಕಟ್ಟಬೇಕು ಯಾವಾಗ ವಸುದೇವ ಕುಟುಂಬದ ಜೋಡಿ ! ಮತ್ತ ನೀ ಕೇಳು‌ ಜಾತಿ‌ ಹೆಂಗೈತಿ ‌, ಹೆಂಗೈತಿ ಅಂದ್ರ ನಾ ಹುಟ್ಟೋ ಗರ್ಭದಾಗೈತಿ ನನ್ನೊಳಗ ಹರಿಯ ರಕ್ತದಗೈತಿ ನಮ್ಮ ಮನೆಮಂದಿಯೊಳಗೈತಿ ಯಾವುದೈತಿ ಅಂದ್ರ...

ಕವನ : ನಿನ್ನೊಲವ ಕಾಯ್ದು

ಹಾಗೆ....ಸುಮ್ಮನೆ ಒಂದು ಕವಿತೆ. ನಿನ್ನೊಲವ ಕಾಯ್ದು •••••••••••••••••••••••••• ನಾವಂದುಕೊಂಡ ಆ...ರಾತ್ರಿ ಬರಲೇ ಇಲ್ಲ., ಮನದ ಮೂಲೆಯ ಮುತ್ತುಗಳು ನಲುಗಿದವು. ಒಣಗಿದ ಎಲೆಗಳಂತೆ ನರಳುತ ಉರುಳಾಡುತಿವೆ ಸಪ್ಪಳವಿದ್ದೂ ಗಪ್ಪನೆ ಮಲಗುತಿವೆ ಕಂಗಳು. ತಿಂಗಳ ಏಕಾಂತದಲಿ ಚಂದ್ರನು ಕಾಡಿದ ತಂಗಾಳಿ ಸ್ಪರ್ಶದಿ ಹರುಷ ಕಸಿದು ಮರೆಯಲಿ ನಗತೊಡಗಿದ. ಕಲೆಯಿಲ್ಲ,ಗಾಯವಿಲ್ಲ, ನೀಡಲೇಗೆ...ದೂರು...? ಹಂಬಲಿಸಿದ ವಿರಹವು, ಅಲೆಗಳ ಜೊತೆ ಕೈ ಜೋಡಿಸಿ, ದುಃಖದಲ್ಲೂ ಸುಖಿಸುತಿದೆ. ತನಗೆ....ತಾನೆ.... ನಗುತಿದೆ ಹುಚ್ಚೋ....ಪೆಚ್ಚೋ..? ನಾವಂದುಕೊಂಡ ಆ....ರಾತ್ರಿ ಬರಲಿಲ್ಲ ಹೃದಯದ ಬಾಗಿಲು ತೆರೆಯಲಿಲ್ಲ., ಎದೆಗಿರಿಯುವ ನೆನಪುಗಳಿಗೆ ಆಕಳಿಕೆ ಬರಲಿಲ್ಲ., ಸಂತೆಯ ಗದ್ದಲದಲಿ ಉಸಿರು ಆರ್ಭಟಿಸಿದರೂ, ಯಾರಿಗೂ ಕೇಳುತ್ತಿಲ್ಲ., ಕಣ್ಣೊಳಗಿನ ನೀರಿಗೆ ದಣಿವಾಗಿದೆ. ಆ ರಾತ್ರಿ ಬರಲೇ ಇಲ್ಲ., °°°°°°°°°°°°°°°°°°° ಶರಣಪ್ಪ ತಳ್ಳಿ ಕುಪ್ಪಿಗುಡ್ಡ

ಕವನ : ಗರತಿಯ ಹಾಡು

ಜನಪದ ಶೈಲಿಯ ಗರತಿಯ ಹಾಡು ಮುಂಜಾನೆ ಏಳುತ್ತ ಮನೆ ದೇವ್ರ ನೆನೆಯುತ್ತ ಅಂಗಳದಿ ರಂಗೋಲಿ ಬಿಡಿಸ್ಯಾಳ ಅಂಗಳದಿ ರಂಗೋಲಿ ಬಿಡಿಸ್ಯಾಳ ಮಾದೇವಿ ಮನದಾಗ ಮಾದೇವನ ನೆನೆದಾಳ|| ಪತಿಯ ಪ್ರಾಣ ಪದಕ ವಂಶದ ಕುಲತಿಲಕ ಮಕ್ಕಳಿಗೆ ಮಾಣಿಕ್ಯ ಮಾದೇವಿ ಮಕ್ಕಳಿಗೆ ಮಾಣಿಕ್ಯ ಆಗ್ಯಾಳ ಮಾದೇವಿ ಹಿರಿಯರಿಗೆ ತಲೆಬಾಗಿ ನಡೆದಾಳ|| ನೆರೆಹೊರೆಗೆ ಬೇಕಾಗಿ ಬಡವರಿಗೆ ನೆರವಾಗಿ ಮನೆಯೆಂಬ ಮಂದಿರಕ್ಕೆ ಬೆಳಕಾಗಿ ಮನೆಯೆಂಬ ಮಂದಿರಕ್ಕೆ ಬೆಳಕಾಗಿ ಮಾದೇವಿ ಗುರುವಿಗೆ ಶರಣಾಗಿ ನಡೆದಾಳ|| ಮನೆ ಕೆಲಸಕ್ಕೂ ಸೈ ಇವಳು ಹೊರ ದುಡಿಮೆ ಬಲ್ಲವಳು ಕಾಯಕವೇ ಕೈಲಾಸ ಅಂತಾಳ ಕಾಯಕವೇ ಕೈಲಾಸ ಅಂತಾಳ ಮಾದೇವಿ ಕುಲಕೆ...

ಕವನ : ಬೇಕೆನಗೆ ಸಾಂಗತ್ಯ

ಬೇಕೆನಗೆ ಸಾಂಗತ್ಯ ನೀ ಬಂದ ಗಳಿಗೆ ಸಂಭ್ರಮದ ಹೋಳಿಗೆ ನೋವೆಲ್ಲಾ ಮರೆಸಿ ಕರುಳ ಸಂಬಂಧ ಆದರಿಸಿ. ನನ್ನದ್ದೆಲ್ಲವ ತೊರೆದು ನಿನ್ನಲ್ಲಿ ನಾ ಬೆರೆತು ಸ್ವರ್ಗ ಧರೆಗಿಳಿದಂತೆ ನಿನ್ನಾರೈಕೆಯ ಹೆಗಲ ಹೊತ್ತು. ಬೆಳೆಸಿದೆ ಬಾಂಧವ್ಯ ಬೇಕು ಬೇಡಿಕೆಗಳ ಪೂರೈಸಿ ಉರುಳುತಿದೆ ದಿನಮಾನ ನಾನೇನಾ ಎಂಬ ಅನುಮಾನ. ದಡ ಸೇರಿಸುವ ಹೊಣೆ ಮುಡಿಗೇರಿದ ಬವಣೆ ಹಗಲು ಇರುಳಿನ ಪರಿವೆಯಿಲ್ಲ ಮುಗುಳು ನಗೆಯ ಮುನಿಸೆಲ್ಲ. ಬೆಳೆದು ನೀನಾದೆ ಹೆಮ್ಮರ ಮೈದಳೆದ ಹೊಸ ಆಶಯದಿ ಬರಿದು ಕಾನನ ನಾನು ಮುಕ್ಕಿ ತಿನ್ನುತಿಹ ಒಂಟಿತನ. ಕೇಳುವವರಿಲ್ಲದ ಬೆಂಗಾಡು ಮೊದಲಿತ್ತಿದು ನಂದನ ಕೈಚೆಲ್ಲಿದೆ ನಿರ್ಲಕ್ಷಿಸಿ ನೇವರಿಸುವರಿಲ್ಲದ ಕೊರಗು. ಬೇರೇನೂ...

ಕವನ : ಓ ಬಾಪು

ಓ ಬಾಪು ಜಗದ ಬೆಳಕೇ ಸದ್ದಿಲ್ಲದಂತೆ ಸರಿದು ಸರಹದ್ದಿಗೂ ಮೀರಿ ದಿನಕರ ಮಬ್ಬಿಗೆ ಸರಿಸಿ ಕೊನೆಯ ಉಸಿರೆಳೆದಿದೆ. ಮಹಾತ್ಮನೆಂಬ ವ್ಯಕ್ತಿತ್ವ ಸತ್ಯ ಪಥದ ಸಾಕಾರ ಮೂರ್ತಿ ವ್ಯತಿರಿಕ್ತದಿ ನಂದಿದೆ ಪರಿತ್ಯಾಗಿಯಾಗಿ ನಡೆದು ಕರುಣೆ ಹೇಳ ಹೆಸರಿಲ್ಲದಂತಾಗಿದೆ. ಭಾರತದ ದಿವ್ಯ ಜ್ಯೋತಿ ಸ್ವಾತಂತ್ರ್ಯದ ಹರಿಕಾರ ಚಳವಳಿಯ ನೇತಾರ ನಿನಗೆ ಹತ್ಯೆಯ ಬಳುವಳಿ ಏಕಿಂತಹ ಘೋರ. ವಿಶ್ವ ಶಾಂತಿಗೆ ರಕ್ತದೋಕುಳಿ ಹರಿಸಿ ಬೆರಗು ಮೂಡಿಸಿದಾತನಿಗೆ ಚಿರನಿದ್ರೆಯ ಬಾಗಿನವೇ ಕಳವಳಕಾರಿ ಸುದ್ದಿಯ ನೇಮ. ಓ ಬಾಪು ನಿನಗಾರು ಸರಿಸಾಟಿ ಉಪವಾಸದ ನಡಿಗೆ ಸರಳ ಸುವಿಚಾರದ ವ್ಯಕ್ತಿಗೆ ದುರುಳತನದಿ ಹರಿತವೇ. ಮತ್ತೊಮ್ಮೆ ಬಂದು ಬಿಡು ಮತ್ತಿನ ಜನಕೆ ಪಾಠ ಕಲಿಸಿ ಮುತ್ತಿನ...

ಕವನ : ಶುಭೋದಯ

ಶುಭೋದಯ ಚಂದನವನದ ಶುಭೋದಯದಲಿ ಮೂಡಿಬಂದಿರಿ ನೀವು ಅಗಾಧ ವ್ಯಕ್ತಿತ್ವದ ಮೇರುಪರ್ವತದ ನಿಲುವಿನಲಿ ವಚನದಾರ್ಶನಿಕರಾಗಿ ಎಲ್ಲರ ಮನ ಮುಟ್ಟಿದಿರಿ ಇಂದು ತಿಳಿಹೇಳಿದಿರಿ ಔಷಧಿ ಆರೋಗ್ಯ ಕೃಷಿಯ ಕುರಿತು ಮನನಮಾಡಿಸಿದಿರಿ ವಚನಸಾರದ ಒಳಾರ್ಥಗಳ ಹೆಮ್ಮೆಯಿಂದ ಹಂಚಿಕೊಂಡಿರಿ ಅಕ್ಕನ ಅರಿವಿನ ಉಪನ್ಯಾಸಗಳ ಅದಕ್ಕಾಗಿ ದುಡಿವವರ ಹೆಸರುಗಳ ಕವಿಯಾಗಿ ಕುವೆಂಪು ಅವರ ನೆನಪಿಸುತ್ತಾ ನಿಸರ್ಗಪ್ರೇಮಿಯಾಗಿ ಪ್ರಾಣಿ -ಪಕ್ಷಿ ಸಂಕುಲವನ್ನು ಪ್ರೀತಿಸುವುದ ಅರುಹಿದಿರಿ ಭಾವುಕರಾದಿರಿ ಅವ್ವನ ಮಾತೃ ಹೃದಯವನ್ನು ತಂದೆಯ ಕಳಕಳಿಯ ನೆನೆದು ಅಭಿಮಾನದಿಂದ ಹೇಳಿದಿರಿ ಧರ್ಮಪತ್ನಿಯ ಸಹಕಾರ ಮನೋಭಾವವ ಮೂಡಿಬಂದಿರಿ ಶುಭೋದಯದಲಿ ಇಂದು ನಮ್ಮೆಲ್ಲರ ಹೆಮ್ಮೆಯ ಮಾರ್ಗದರ್ಶಕರಾಗಿ ಬುದ್ಧ -ಬಸವ - ಅಂಬೇಡ್ಕರರ ಶರಣತತ್ವದ ನಿಜವಾದ ಹರಿಕಾರರಾಗಿ ಸುಧಾ ಪಾಟೀಲ ಬೆಳಗಾವಿ

ಕವನ : ಸಂವಿಧಾನ ಕುರಿತ ನೀಳ್ಗವನ

ಸಮಾನತೆಯ ಪಲ್ಲವಿ ಭಾರತಾಂಬೆಗೆ ಹೊನ್ನ ಕಿರೀಟವಿದು ಸರಳ ಸಂವಿಧಾನ ನಮ್ಮ ಸಂವಿಧಾನ ಪೀಠಿಕೆ ಪರಿಧಿಯಪಲ್ಲವಿ ಸಾರ್ವಭೌಮತೆ, ಸಮಾಜವಾದಿ, ಜಾತ್ಯತೀತತೆ, ಗಣತಂತ್ರ,ನ್ಯಾಯ, ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವದ ದುಂಧುಭಿ ಜೀವದಾಯಿನಿ ಇದು ಭಾರತದ ಪಾಲಿಗೆ ಮುಕ್ತಿದಾಯಿನಿ ಇದು ರಾಷ್ಟ್ರದ ಸಂಕೋಲೆಗೆ ಸಂವಿಧಾನ ನಮಗೆ ಸುವಿಧಾನ... ಲಿಖಿತವೂ,ದೀರ್ಘವೂ ಭಾರತೀಯರಿಗಿದು ಮಾರ್ಗವು ಮನದಲ್ಲಿ ಮಡುಗಟ್ಟಿದ ಅಸಮಾನತೆಯ ಮೌನಕ್ಕೆ ಅಂಬೇಡ್ಕರರ ನವ್ಯ ಚಿಂತನೆಗಳ ಸಿರಿ ದೀಪವು ಶತಶತಮಾನಗಳ ದಾಸ್ಯದ ಕಾರ್ಗತ್ತಲೆಯ ಅಳಿಸಿ ದಿವ್ಯ ಚೇತನದ ಮಾನವೀಯತೆ ಎಲ್ಲೆಲ್ಲೂ ಬೆಳೆಸಿ ಭವ್ಯ ಭಾರತಕ್ಕೆ ಭದ್ರಬುನಾದಿ ಈ ಸಂವಿಧಾನ ನಮಗೆ ಸುವಿಧಾನ ಪವಿತ್ರ ಪದಪುಟಗಳ ಸ್ವೀಕಾರ 1949 ರಂದು,ಜಾರಿಗೆ...

ಕವನ : ನಾನು ಬೆಂಕಿಯ ಮಗಳು

ನಾನು ಬೆಂಕಿಯ ಮಗಳು ಬಿರುನುಡಿಗಳ ಬಿರುಸು ಬಾಣಗಳ ನೋವನುಂಡು ಬೆಳೆದವಳು ನಾನು ನಿಮ್ಮ ಕುಹಕ ನಗೆ ನನ್ನನ್ನೇನು ಮಾಡೀತು? ನನ್ನದೇ ಕನಸು ಗುರಿಗಳ ಗಮ್ಯತೆಯಲಿ ನಡೆದವಳು ನಾನು ನಿಮ್ಮ ಅಲಕ್ಷ್ಯ,,ನಿರ್ಲಕ್ಷ್ಯ ನನ್ನನೇನು ಮಾಡೀತು? ಚೂರಿಯಂತ ಬದುಕ ದಾರಿ ಸಾಗಿ ಮುಂದೆ ಬಂದವಳು ನಾನು ನಿಮ್ಮ ಬೆನ್ನಿನ ಚೂರಿ ನನ್ನನ್ನೇನು ಮಾಡೀತು? ಕಷ್ಟಗಳ ಕಲ್ಲು ಕವಣೆ ಹಾದಿಯಲಿ ನಡೆದವಳು ನಾನು ನಿಮ್ಮ ಕಾಲೆಳೆಯುವಿಕೆ ನನ್ನನ್ನೇನು ಮಾಡೀತು? ದಿವ್ಯ ಧಿಕ್ಕಾರವಿರಲಿ ಬೆನ್ನ ಹಿಂದೆ ಬೊಗಳುವ ಶ್ವಾನಗಳಿಗೆ...... ಹೆಣ್ಣು ಹೆಣ್ಣೆಂದು ಮೂಗೆಳೆಯುವ ಮೂದೇವಿಗಳೇ ಅವಳೊಡಲು ಇಲ್ಲದಿರೆ ನಿಮಗೆಲ್ಲಿದೆ ಅಸ್ತಿತ್ವ?   ಶ್ರೀಮತಿ...
- Advertisement -

Latest News

ಕಿಟದಾಳದಲ್ಲಿ ಜರುಗಿದ ಕಲಿಕಾ ಹಬ್ಬ

ಸೀರೆ ತೊಟ್ಟುಕೊಂಡು ಬಂದ ಬಾಲಕಿಯರು, ಮದುವಣಗಿತ್ತಿಯಂತೆ ಕಂಗೊಳಿಸಿದ ಶಾಲಾ ಆವರಣ. ಎಲ್ಲರ ತಲೆ ಮೇಲೊಂದು ಕಲರ್ ಕಲರ್ ಪೇಪರ್ ಟೋಪಿ. ಹೌದು, ಹೀಗೆ ಶಾಲೆಯಲ್ಲೊಂಥರಾ ಹಬ್ಬದ...
- Advertisement -
close
error: Content is protected !!
Join WhatsApp Group