ಕವನ

ಎರಡು ಕವನಗಳು : ಶ್ರೀಮತಿ ಶಾಮಲಾ ಪಾಟೀಲ

ಹಬ್ಬ ಹಬ್ಬ ಮಕ್ಕಳ ಹಬ್ಬಕಲಿಕಾ ಹಬ್ಬ ಮಕ್ಕಳ ಹಬ್ಬ ಆಡಿ ನಲಿವ ಹಬ್ಬ ನೋಡಿ ಕಲಿವ ಹಬ್ಬ ಮಾಡಿ ತಿಳಿವ ಹಬ್ಬಮಕ್ಕಳ ನಗುವಿನ ಹಬ್ಬ . ಸುಂದರ ಹಬ್ಬ ಕನ್ನಡ ಹಬ್ಬ ಚೆಲುವಿನ ಹಬ್ಬ ಒಗ್ಗಟ್ಟಿನ ಹಬ್ಬ ಗೆಳೆಯರ ಸುಂದರ ನಂದನ ಹಬ್ಬ..!ಕಲಿಕೆಗೆ ಚೇತನ ಕೊಡುವ ಹಬ್ಬ.ಮಕ್ಕಳ ಅಭಿವ್ಯಕ್ತಿಯ ಪ್ರೇರೇಪಿಸುವ ಹಬ್ಬ .ಮಕ್ಕಳ ಕಲೆಯ ಉತ್ತೇಜಿಸುವ ಹಬ್ಬ ಹರಟೆ,ಮೋಜು, ಕುಣಿತದ ಹಬ್ಬ...!ಮಕ್ಕಳ...

ಕವನ : ರೆಕ್ಕೆಗಳಿವೆ

ರೆಕ್ಕೆಗಳಿವೆನೀನು ಮೇಲೆ ಹಾರಲು ಯಾರ ಅನುಮತಿ ಕೇಳಬೇಕಿಲ್ಲ ಗುಡುಗು ಸಿಡಿಲು ಮಳೆ ಗಾಳಿ ಬಿಸಿಲು ಚಳಿ ಕಷ್ಟ ಸಂಕಟ ನೋವು ಹಸಿವು ವೇದನೆ ಯಾತನೆ ಅಳುಕು ಅಂಜಿಕೆ ಏಕೆ? ನಿನಗೆ ನಿನ್ನ ಕನಸಿನ ರೆಕ್ಕೆಗಳಿವೆ ಹಾರಿ ಬಿಡು ಆಗಸಕೆ ನಿನ್ನ ಗುರಿ ಮುಟ್ಟುವ ತನಕ ನಿಲ್ಲದಿರು ಮುಗಿಲು ಯಾರ ಸೊತ್ತಲ್ಲ ನಿನ್ನ ರೆಕ್ಕೆಯ ಶಕ್ತಿಯಲಿ ನಿನಗೆ ನಂಬಿಕೆಯಿರಲಿ ________________________ಡಾ.ಶಶಿಕಾಂತ ಪಟ್ಟಣ ರಾಮದುರ್ಗ

ಎರಡು ಕವನಗಳು : ಪಾರ್ವತಿದೇವಿ ತುಪ್ಪದ

ಜೀವನದ ಪಾಠ ಸಣ್ಣವರು, ಬಡವರು ಎಂದು ನಿಕೃಷ್ಟ ಮಾಡದಿರಿ ಕಸ ದೂಳು ಎಂದು ತಿಳಿಯದಿರಿ ಅಹಂಕಾರದಿಂದ ತುಳಿದು ಹೋಗದಿರಿ ಅದು ನಿನ್ನನೇ ಅಳಿಸುತ್ತದೆ ಒಂದು ದಿನ ಗೊತ್ತಾಗುವುದು ಧೂಳು ಕಣ್ಣುಗಳಿಗೆ ಬಿದ್ದ ದಿನಗೌರವ ಕೇಳಿ ಪಡೆಯುವುದಲ್ಲರೀ ಬದಲಾಗಿ ಅದು ತಾನಾಗಿಯೆ ಬರಬೇಕರೀ ನಾವು ಯಾರನ್ನೂ ಕೀಳಾಗಿ ನೋಡಬಾರದು ರೀ ಪ್ರತಿಯೊಬ್ಬರಿಗೂ ಗೌರವ ಕೊಡಬೇಕರೀನಿರ್ಮಲ ಮನದ ಮಾತು ಕೇಳಿ ನಡೆಯೋಣ ಸಮಾಜದಲ್ಲಿ ಶಾಂತಿ ಮತ್ತು ಸುಖವನ್ನು ತರೋಣ ಗೌರವ ಮತ್ತು...

ಕವನ : ಅಕ್ಷರ ಕಿಚ್ಚಿನ ಹುಚ್ಚರು

ಅಕ್ಷರ ಕಿಚ್ಚಿನ ಹುಚ್ಚರು​ಬರಹಗಾರರೆಲ್ಲಾ ಬಲು ಹುಚ್ಚರು! ಯಾಕೆಂದರೆ... ಹರಿಯುವ ನದಿ, ಅಲೆವ ಕಡಲಿನ ಆಳವ ಬರಿದು ಮಾಡಿ ತಮ್ಮ ಭಾವದ ಮಳೆಯಲಿ ಮತ್ತೆ ತುಂಬಿಸಿಬಿಡುತ್ತಾರೆ.​ಭುವಿ, ಭಾನು, ಭಾಸ್ಕರನನ್ನೂ ತಮ್ಮ ಕಲ್ಪನೆಯ ಬಂಜರು ಭೂಮಿಗೆ ತಂದು, ಮತ್ತೆ ಅಕ್ಷರಗಳ ಒರತೆಯಲಿ ಜೀವ ಚೇತರಿಕೆ ನೀಡುತ್ತಾರೆ.​ಹೆಣ್ಣು, ಕಣ್ಣು, ಹಣ್ಣು, ಮಣ್ಣನ್ನೆಲ್ಲಾ ಸವಿದು ಸಂಭ್ರಮಿಸಿ, ಶಬ್ದಗಳಲಿ ಬರಿದು ಮಾಡಿ ಮತ್ತೆ ಹೊಸ ಅಕ್ಷರಗಳಿಗಾಗಿ ಹಗಲಿರುಳು ಅರಸುತ್ತಾರೆ.​ಸಿಟ್ಟು, ಸೆಡವು, ಕೋಪ, ತಾಪಗಳ ಮೌನದ ಕುಂಚದಲಿ ಅದ್ದಿ, ಭಾವಗಳ ಬಣ್ಣ ಬಳಿದು ಓದುಗರ ಮನದಂಗಳದಿ ಅಚ್ಚಳಿಯದೆ ಉಳಿದು...

ಕವನ : ಪ್ರೀತಿಸಿದ ತಪ್ಪಿಗೆ

ಪ್ರೀತಿಸಿದ ತಪ್ಪಿಗೆ... ಇಂದು ಈ ಮುಸ್ಸಂಜೆಯಲಿ.... ಯಾರೋ ಎಲ್ಲೋ ಪ್ರೀತಿಸುವ ಹೃದಯಕೆ ನೋವುಣಿಸಿರಬೇಕು... ಅಕಾಲದಲ್ಲಿ ಆಕಾಶ ಆರ್ಭಟಿಸಿ ಭೋರ್ಗರೆದು ಹೀಗೆ ಸುರಿಯಬೇಕಾದರೆ... ಸದ್ದಿಲ್ಲದೇ ಒಡೆದ ಎದೆ ತುಣುಕುಗಳು ಮುಗಿಲಲಿ ಶೋಕಗೀತೆ ನುಡಿಸುತಿವೆ....ಯಾರೋ ಎಲ್ಲೋ ಹೂವಂತ ಮನಸನು ಮಾತಿನ ಮುಳ್ಳುಗಳಿಂದ ಚುಚ್ಚಿ ನೋಯಿಸಿರಬೇಕು... ಹೆಪ್ಪುಗಟ್ಟಿದ ದುಃಖ ಕಪ್ಪು ಮೋಡದ ಒಡಲ ಬಗೆದು ಭೋರೆಂದು ಭುವಿಯ ಅಪ್ಪುತಿದೆ...ಯಾರೋ ಎಲ್ಲೋ ಸ್ನೇಹ ತುಂಬಿದ ಕಂಗಳಿಗೆ ಅಪಮಾನ ಆಪಾದನೆ ಪಟ್ಟಿ ಕಟ್ಟಿರಬೇಕು.... ಗರಬಡಿದ ಮುಗಿಲು ದುಃಖಿಸಿ ಬಿಕ್ಕಿಅಳುತ ಮುತ್ತುಮಳೆ ಸುತ್ತ ಸುರಿಸುತಿದೆ ನೋಡು..ತಪ್ಪು ಮಾಡದ ಜೀವ ಬಿಟ್ಟ ಬಿಸಿಯುಸಿರ ಕಾವಿಗೆ ಸುಟ್ಟು ಸುಡುವ ಸೂರ್ಯನೇ ನಲುಗಿ ಮರೆಯಾಗಿ ಹೋದ.... ಹೂಹೃದಯ...

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ, ನೋವಿನಲ್ಲೂ ಉಸಿರಾಡುವ ನಂಟು. ತಾಯಿ–ಮಗುವಿನ ಹಸಿರು ಪ್ರೀತಿಯಂತೆ ಸ್ನೇಹಿತರ ನಿಷ್ಕಪಟ ನಗು, ಗುರುವಿನ ಮಾರ್ಗದರ್ಶನ, ಅಸ್ಪಷ್ಟ ಮೌನ ಅನುಬಂಧದ ಬೇರೆ ಬೇರೆ ರೂಪಗಳು ಒಂದೇ ಕಾಲ ದೂರಿರಿಸಿದರೂ, ಸ್ಮೃತಿ ಪಟದಲ್ಲಿ ಹತ್ತಿರ. ದೇಹಗಳು ದೂರವಾದರೂ, ಮನಗಳು ಒಡಲಿನಂತೆ ಬಿರುಗಾಳಿಯಲ್ಲಿ ಮರವನ್ನೆತ್ತಿದ ಬೇರುಗಳಂತೆ, ಗಟ್ಟಿ ಎತ್ತುವ ಶಕ್ತಿಯೇ ಅನುಬಂಧ. ಜಗತ್ತು ಕೈಬಿಟ್ಟ...

ಕವನ : ಭಯದ ಬಾಹುಗಳು

ಭಯದ ಬಾಹುಗಳು ಕಂದು ಕಂಗಳ ಮುದ್ದು ಮಗಳು ಬಂದೆನ್ನ ತಬ್ಬಿ, ಮತ್ತೆ ಮಲಗುವ ಗುಂಗಿನಲ್ಲಿದ್ದಾಳೆ ಅರೆಮುಚ್ಚಿದ ಕಣ್ಣ ಬಣ್ಣ ನನ್ನನ್ನೇ ಹೋಲುತ್ತದೆ ತುಸು ಹೆಚ್ಚಿಗೆ ಮಿಂಚಿದೆಯಷ್ಟೇ. ಮೆದು ಮೈಯ್ಯ ಸ್ಪರ್ಶ, ಮೆಲ್ಲುಸಿರ ಬಿಸಿ, ಗುಟ್ಟಿನ್ನೂ ರಟ್ಟಾಗದ ಹೃದಯ ಬಡಿತ ಎದೆಯ ಕಸಿವಿಸಿ ಮರೆಸಿ ರೆಪ್ಪೆಗಳ ದಪ್ಪಗಾಗಿಸಿ ನಿದ್ರಾಲೋಕದ ಅತಿಥಿಯಾಗಿಸಿ ಸಮಾಧಾನಿಸುವುದರಲ್ಲಿ ಫಕ್ಕನೆ ಎಚ್ಚರ !ನೆನ್ನೆ ನೋಡಿದ ಸುದ್ದಿ ತರಳೆಯ ಕಗ್ಗೊಲೆ ಮೊನ್ನೆ ಕೇಳಿದ್ದು ಬಾಲೆಯ ಬಲಾತ್ಕಾರ ಇಲ್ಲೇನೋ ಜಿಹಾದ ಅಲ್ಲೇನೋ ಜಾತಿ ವಿವಾದ ಹೆಣ್ತನಕ್ಕೆ ಹೇಸಿಗೆ ಪಡುವ ಸಂವಾದ ನಾಲಿಗೆಯ ನರ ಕಸಿಯುತ್ತಿರುವ...

ಕವನ : ಶ್ರದ್ಧೆ

ಶ್ರದ್ಧೆಶ್ರದ್ಧೆ ಎಂದರೆ ಕೇವಲ ನಂಬಿಕೆ ಅಲ್ಲ, ಸಾಧನೆಯ ಕೀಲಿ ಕೈ ಆಗಿದೆಯಲ್ಲ ಹೃದಯದಿಂದ ಹೊಮ್ಮುವ ಶಕ್ತಿ ಎಲ್ಲ ಕಣ್ಣಿಗೆ ಕಾಣದ ಅದ್ಭುತ ಅನುಭವದ ಬೆಲ್ಲ ಹೆಜ್ಜೆಗೆ ದಿಕ್ಕು ತೋರುವ ಬೆಳಕ ಸಾಧನೆಯ ಹಾದಿಯ ದೀಪಿಕೆಶ್ರದ್ಧೆಯೇ ಧೈರ್ಯದ ನೆರಳು. ಸೋಲಿನ ಕ್ಷಣದಲ್ಲಿ ಕುಗ್ಗದ ಹೊನಲು ಅದು ಹೊಸ ಪ್ರೇರಣೆ ಮಣ್ಣಿನಲ್ಲಿ ಯಶಸ್ಸಿನ ಬೀಜ ಫಲದ ನಿರೀಕ್ಷೆ ಇಲ್ಲದ ನಂಬಿಕೆ ಶ್ರಮದ ಜೊತೆಗಿನ ಶಕ್ತಿ ಕಾಲದಲ್ಲಿ ಸುವರ್ಣ ಫಲಶ್ರದ್ಧೆಯಿಲ್ಲದ ಜ್ಞಾನ ನಿರ್ಜೀವ, ಸಾಧನೆಗೂ ಕರ್ಮ...

ಕವನ : ನಾನೂ ಮನುಷ್ಯನಾಗಬೇಕು

​ ನಾನೂ ಮನುಷ್ಯನಾಗಬೇಕುಹಣ್ಣು ಹಣ್ಣು ಮುದುಕಿಯೊಂದು ನಳನಳಿಸಿ ರಸ್ತೆಯ ದಾಟುವಾಗ ನಾನು ಕೈಹಿಡಿದು ನಡೆಸಲಿಲ್ಲ ​ಸುಕ್ಕುಗಟ್ಟಿದ ಆ ಮುದುಕಿಯ ಕೈಗಳು ನನ್ನದೇ ಭವಿಷ್ಯದ ಕನ್ನಡಿಯಾಗಿತ್ತು; ಅದನ್ನು ನೋಡಿ ಮುಖ ತಿರುಗಿಸಿದೆ ಅವಳಾರೋ.... ಗೊತ್ತಿಲ್ಲ ಕೃತಕ ಬಣ್ಣ ಬಳಿದು ಮುಗುಳು ನಗೆ ಬೀರಿದ ಕೋಮಲೆ ಕರೆಗೆ ಜೊಲ್ಲು ಸುರಿಸುತ ಓಡಿದೆ ನನಗೆ ಹಸಿವಾಗಿತ್ತು; ಧರ್ಮದ ಮುಖವಾಡವನ್ನೇ ಕಳಚಿದೆ. ಮೊದ ಮೊದಲು ಎಡವಿದ್ದು ಗೊತ್ತಾಗಲಿಲ್ಲ ​ಮುದುಕಿಯ ಕಣ್ಣೀರು ಬತ್ತಿದ ನದಿಯಾಗಿತ್ತು ಅಲ್ಲಿ ದಾಹ ತೀರಿಸುವ ಯಾವ ಲಕ್ಷಣವಿರಲಿಲ್ಲ ಮತ್ತೊಮ್ಮೆ ​ಅವ್ವನ ಸುಕ್ಕುಗಳಲ್ಲಿ ಅಡಗಿದ್ದ ಕಾಶಿಯನ್ನು ನಾನು ಕಾಣಲಿಲ್ಲ, ಸಿಡಿಮಿಡಿಗೊಂಡು ರೇಗಾಡಿದೆ ನಿನ್ನೆ ಮೊನ್ನೆ ಬಂದವಳು ಕಣ್ಣಿನ ಸಂಚಿನಲಿ ಕೈಲಾಸವ ಕಂಡೆ ಮಾತಿನ ಚಕಮುಖಿಯ ಅವಳ ನಗೆಯ ಓಘವು ನನ್ನ ಪಾಲಿಗೆ ವೇದವಾಗಿತ್ತು ​ಮುಗುಧನಾಗಿ ನಗುತ ಅವಳ...

ಕವನ : ಶಿರಸಂಗಿ ಲಿಂಗರಾಜರು

ಶಿರಸಂಗಿ ಲಿಂಗರಾಜರುಹುಟ್ಟಿದಿರಿ ನೀವು ಶಿಗ್ಗಲಿಯ ಕೊಂಪೆಯಲ್ಲಿ ಬಡತನ ಬಳಲಿಕೆ ದಾರಿದ್ರ್ಯದ ಬದುಕು ಪ್ರತಿಭೆಗೆ ಉಸಿರು ರಾಮಪ್ಪನ ಹೆಸರು ಶಿರಸಂಗಿ ಸಂಸ್ಥಾನಕೆ ದತ್ತು ಬಂದಿರಿ ನೀವು ಕಟ್ಟಿದಿರಿ ಕೆರೆ ಭಾವಿ ಕೃಷಿಯ ಸಿರಿ ಸಂಪತ್ತು ಮಕ್ಕಳಿಲ್ಲದೆ ಬಂತು ಸಂಸ್ಥಾನಕ್ಕೆ ಆಪತ್ತು ಅರಟಾಳರ ಸಹಯೋಗ ಅಥಣಿ ಶಿವಯೋಗಿಗಳ ದರ್ಶನ ಮಕ್ಕಳೆಲ್ಲರೂ ನಿನ್ನವರು ಶಿಕ್ಷಣಕೆ ಕೊಟ್ಟುಬಿಡು ಶಿವಯೋಗಿಯ ವಾಣಿ ಸಂಸ್ಥಾನವ ದಾನ ಮಾಡಿದರು ಲಿಂಗಾಯತ ಮಕ್ಕಳಿಗೆ. ಬಸವ ಹಚ್ಚಿದ ದೀಪಕ್ಕೆ ತೈಲವಾದಿರಿ ನೀವು ನಿಮ್ಮ ಬೆಳಕಲ್ಲೇ ಬಾಳು ನೂಕಿದೆವು ನಾವು                  ...
- Advertisement -spot_img

Latest News

ಮತದಾರ ಪಟ್ಟಿಗೆ ಮ್ಯಾಪಿಂಗ್‌ ಮಾಡಲು ಮತದಾರ ಜಾಗ್ರತಿ ಸಭೆ 

  ಸಿಂದಗಿ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ 2002ನೇ ಸಾಲಿನ ಮತದಾರ ಪಟ್ಟಿಯನ್ನು 2025ರ ಮತದಾರ ಪಟ್ಟಿಗೆ ಮ್ಯಾಪಿಂಗ್‌ ಮಾಡುವ ಕಾರ್ಯಕ್ರಮ ಗ್ರಾಮದಲ್ಲಿ ನಡೆಯುತ್ತಿದೆ ಎಂದು...
- Advertisement -spot_img
error: Content is protected !!
Join WhatsApp Group