ಕವನ

ಕವನ: ಶರಣು ಗುರುವೆ ಶರಣು

ಶರಣು ಗುರುವೆ ಶರಣು ಕರುಣಾಮಯಿ ತಂದೆ ಗುರುವೆ ಕರಮುಗಿಯುವೆ ಶರಣು ಗುರುವೆ ಶರಣು ಕಾನನದಿ ಅಲೆವಂಗೆ ಕಾಣದೇ ಗುರುವಾದವಗೆ ಶರಣು ಕಿನ್ನರರ ಕಿತಾಪತಿಗಳ ಸಹಿಸಿ ದಹಿಸಿದ ಕಿರಣ ಸ್ವರೂಪಿ ಗುರುವೆ ಶರಣು ಕೀಟಲೆಗಳ ಬದಿಗೊತ್ತಿ ಕೀರ್ತಿ ತರುವಂತೆ ಬೆಳಸಿದ ತಮಗೆ ಶರಣು ಕುಣಿಸಿ ನಲಿಸಿ ಕಲಿಸುತ ಕುಶಲಮತಿಗಳಾಗಿಸಿದಾತಗೆ ಶರಣು ಕೂಡಿ ಬಾಳುವ  ನೀತಿ ಕೂಡಿ ನಲಿಯುವ ರೀತಿ ಕಲಿಸಿದಾತಗೆ ಶರಣು ಕೆಸರಿನಲ್ಲಿರುವ ಕಮಲದಂತೆ  ಕೆಸರಿನಲ್ಲಿರುವ ಎರೆಹುಳುವಿನಂತೆ ಬಾಳೆಂದಾತಗೆ ಶರಣು ಕೇದಿಗೆಯ ಘಮಲು ಹೊತ್ತ ಕೇವಿಗೆಯ ಹೊಳಪುಳ್ಳವಗೆ ಶರಣು ಕೈ...

ರಕ್ಷಾ ಬಂಧನ ಕವನ: ಮೆಲುಕು

ಮೆಲುಕು ಬೆಳ್ಳಂ ಬೆಳ್ಗೆ ಅವ್ವನ ಕೂಗು ಕೇಳಿದ್ರೂ ಕೇಳದಂತೆ ಮಲ್ಗೋದು ಇತ್ತ ನಾನುನೂ  ಕಿರುಚಿದೆ ಅವ್ವ ಕರಿತೈತೆ ಎದ್ದೇಳಣ್ಣಯ್ಯ ಜಳಕಾ ಮಾಡಿ ಮಡಿಉಟ್ಕೊ ರಾಕಿ ಕಟ್ಟಸ್ಕೊ ಹಬ್ಬಾ ಐತಿ ಸೋಂಬೇರಿ ಸೋಮಾರಿ ನೀ ಹೊರ್ಗ ಹೋಗಬ್ಯಾಡಾ ಅಣ್ಣಯ್ಯ ಮತ್ತದೇ ಜಗಳಾ ಜಡೆ ಎಳೆದು ರಿಬ್ಬನ್ ಜಗ್ಗಿ ನೂಕಿ ಓಡೋದು ಅವ್ವನ ದನಿಗೆ ಮುದುಡಿಕೊಳ್ಳುವ ಮುದ್ದು ಪೆದ್ದು ಅಣ್ಣಯ್ಯ ರಾಕಿ ಕಟ್ಟಿ ಸಕ್ಕರೆ ಬದಲು  ಉಪ್ಪು ತಿನಿಸಿ ಗೋಳಾಡಿಸಿ ತಲೆಗೂದಲ ಜಗ್ಗಿ ತಿವಿದು ಓಡಿದ ನೆನಪು ಮಾಸಿಲ್ಲ ಅಣ್ಣಯ್ಯ ಅಪ್ಪಂಗೆ...

ಭಾರತೀಯರ ಹಬ್ಬ

ಭಾರತೀಯರ ಹಬ್ಬ ಮರೆಯದಿರಿ ಭಾರತದ, ಪ್ರಜೆಗಳೇ ಸ್ವಾತಂತ್ರ್ಯವ, ತಂದಕೊಟ್ಟವರ ಕಹಳೆ ತ್ಯಾಗ ಬಲಿದಾನದ ವೀರರವರು ಅಮರರಾಗಿ ಕೈಗಿತ್ತರು ದೇಶದ ತೇರು ವ್ಯರ್ಥವಾಗದಿರಲಿ, ವೀರರ ಹನಿಹನಿ ರಕ್ತ ಸಂಕೋಲೆಯಿಂದ ನಮ್ಮ, ದೇಶವಾದ ಮುಕ್ತ ಸ್ವಾತಂತ್ರ್ಯಕೆ ಹೋರಾಡಿದ ದೇಶ ಭಕ್ತರವರು  ‌ಅವರ ದಿಟ್ಟ ಹೆಜ್ಜೆಯೇ ನಮಗಾದ ಉಸಿರು ಶಾಂತಿ ಅಹಿಂಸೆಯವ ಅವರೇರಿದ ಮೆಟ್ಟಿಲು ಈ ದಿನತೂಗುತಿವೆ, ಭಾರತದ ಮನೆತೊಟ್ಟಿಲು ೧೫ ಅಗಷ್ಟ ನಮ್ಮೆಲ್ಲರ, ಹರ್ಷತುಂಬಿದ ಹಬ್ಬ ಭಾರತೀಯರ ಸಹನೆಗೆ ಬ್ರಿಟಿಷರಾದರು ಸ್ತಬ್ಧ  ಅಖಂಡ ಭಾರತಕೆ ಪಣತೊಟ್ಟ...

ಮಕ್ಕಳ ಕವಿತೆ

ಮಕ್ಕಳ ಕವಿತೆ ಒಂದು ಎರಡು ತಿನ್ನಲು ಬೇಕು ಲಡ್ಡು ಮೂರು ನಾಲ್ಕು ಇಡ್ಲಿ ಚಟ್ನಿ ಸಾಕು ಐದು ಆರು ತಿಳಿ ಬದುಕಿನ ಸಾರ ಏಳು ಎಂಟು ಶ್ರಮದೊಂದಿಗೆ ನಂಟು ಒಂಬತ್ತು ಹತ್ತು ಯಶದ ಮೆಟ್ಟಿಲು ಹತ್ತು ಲೀಲಾ ರಜಪೂತ ಹುಕ್ಕೇರಿ

ಕವನ: ಪ್ರೇಮಾಂತರಂಗ

ಪ್ರೇಮಾಂತರಂಗ ನಿನ್ನ ಸೆಳೆತ ಕಲಾತ್ಮಕ ಸಂವೇದನೆ ಬಯಸಬಹುದು ಎನಿಸಿರಲಿಲ್ಲ ನಿನ್ನ ನಾ ಅಂದು ಆದರೂ ನಿನ್ನ ನುಡಿಗಳಲ್ಲೇನೋ ಸೆಳೆತ ಸೌಂದರ್ಯ ಕಪ್ಪು ಬಿಳುಪಿನಲ್ಲಿಲ್ಲ ಸುಂದರವಾದ ಆಲೋಚನೆ, ಸುಂದರವಾದ ಕ್ರಿಯೆ,  ಭೌತಿಕವು ದೈವಿಕತೆಯ ಕುರುಹು ಬರೀ ಭ್ರಾಂತಿ ಇರದ ಲೋಕ ಬೇಕುಬೇಡಗಳ ಪೂರೈಸುವ ಬಂಧನ ಹೃದಯಾಂತರದ ಮಿಡಿತ ಬಾಹ್ಯ ಕಣ್ಣು ನೋಡದ ಆಂತರಿಕ ಸ್ಪಂದನೆ ಬರೀ ಮಾತುಗಳು ಮನೆ ಕಟ್ಟಲಾಗದ ಸ್ಥಿತಿ ಆತ್ಮ ಮತ್ತು ಆತ್ಮಗಳ ಮಿಲನ ಸ್ಥಿತಿ ಮೇಲ್ಮೈ ದೃಷ್ಟಿಗೆ ಗೋಚರಿಸದ ಆಂತರ್ಯ ಎರಡು ಜೀವಗಳ ಮನದಾಳದ...

ಕವನ: ನಾ ನಿನಗೆ- ನೀ ನನಗೆ

ನಾ ನಿನಗೆ- ನೀ  ನನಗೆ ಎಲ್ಲೋ ಹುಟ್ಟಿ ಎಲ್ಲಿಯೋ ಹರಿದು ನದಿ ಸಾಗರವ ಸೇರುವ ಹಾಗೆ ಎಲ್ಲಿಯೋ ಇರುವ ನಾವು ಪ್ರೀತಿಯ ಅಲೆಯಲ್ಲಿ ಸೇರಿ ಭಾವನಾತ್ಮಕ ಬಂಧದಲ್ಲಿ ಜೀವನ ಕಳೆಯುತಿರುವೆವು ನಿನಗೆ ಅಲ್ಲಿ ನೋವಾದರೆ ನನಗೆ ಇಲ್ಲಿ ವ್ಯಥೆ ಹೇಗೆ ನಿನ್ನ ಸಲುಹಲಿ  ಚಿಂತೆ ಕಾಡುತಲಿ ನೋವ ಅನುಭವಿಸುತಿರುವೆ ಹೃದಯವು ಅಷ್ಟು ಹಚ್ಚಿಕೊಂಡಿದೆ ನಿನ್ನ ನಾನು ನನ್ನದೆಂಬ ಭಾವಗಳ ಸೆಳೆತ ಬಂಧಿಸಿಹುದು ಪ್ರೀತಿಯಲಿ ನಮ್ಮನು ಬಿಟ್ಟೆನೆಂದರೂ ಬಿಡದೀ ಬೇಗುದಿಯ ಛಾಯೆ. ಪ್ರೀತಿ ಯೆಂದರೆ ಹೀಗೇನೇ ಬಿಡದ ನಂಟನು ಮೂಡಿಸಿಹುದು ಪ್ರೀತಿ ಪ್ರೇಮಕೆ...

ಕವನ: ತುಂತುರು ಮಳೆ

  ತುಂತುರು ಮಳೆ ವರುಣನಾಗಮನದಿ ಭುವಿಗೆ ಕಳೆ ಬಾಣಂಚಿನ ಮಡಿಲಿನಿಂದ  ಜಾರಿ  ಭೂಮಾತೆಯ ಒಡಲ ಸೇರಿ  ತಂಪೆರಗಿತು ಸುತ್ತಲೂ ಹರಡಿ ಮೈ ಜಾಡಿಸುವ ಗುಬ್ಬಚ್ಚಿಗಳು ಗರಿಗೆದರುವ ಸುಂದರ ನವಿಲುಗಳು  ಎಲೆಗಳಿಂದ ಜಾರುವ ನೀರ ಬಿಂದುಗಳು  ಆ ಬಿಂದುಗಳ ಹೊತ್ತು ನಿಂತ ಸುಮಗಳು ತಂಪಾದ ಗಾಳಿಯ ಇಂಪಿನ ಒಡನಾಟ  ಗಾಳಿಯಲ್ಲಿ ತುಂತುರು ಹನಿಗಳ ಚೆಲ್ಲಾಟ  ರೋಮಾಂಚನಗೊಳಿಸುವ ವಾತಾವರಣ  ಮುಂಗಾರಿನ ಮಳೆಯ ಈ ಸಂಚಲನ ಸದ್ದು ಗದ್ದಲಗಳಿಗೆ ಕೊಂಚ ವಿರಾಮ  ಸಂಚಾರ ವಿಹಾರಕ್ಕೆ ಹಾಕುವ ಕಡಿವಾಣ ತುಂತುರು ಮಳೆಯ ಆಸ್ವಾದಿಸೋಣ ಮಳೆ...

Poems: ಇವು ಸ್ಪೆಶಲ್ ನಗೆ-ಹನಿಗವಿತೆಗಳು

ವರ್ತಮಾನದ ವಿದ್ಯಮಾನಗಳತ್ತ ಹಾಸ್ಯದ ಹೊಂಬೆಳಕು ಚೆಲ್ಲುವ ಅಕ್ಷರಪ್ರಣತೆಗಳು. ಇಲ್ಲಿ ವಿನೋದವಿದೆ, ವಾಸ್ತವವಿದೆ, ಜೊತೆಗೆ ಸಣ್ಣದೊಂದು ವಿಷಾದವೂ ಇದೆ. ಸೌಲಭ್ಯಗಳಿರಲಿ, ಅವಕಾಶಗಳಿರಲಿ ಅದನ್ನು ಎಷ್ಟು ಸೂಕ್ತವಾಗಿ, ಸಮಯೋಚಿತವಾಗಿ, ಸಮರ್ಪಕವಾಗಿ, ಯಾರಿಗೂ ಹೊರೆಯಾಗದಂತೆ, ಎಲ್ಲೂ ಕೊರೆಯಾಗದಂತೆ ನಿಭಾಯಿಸುವ ಜವಾಬ್ಧಾರಿ, ಕೊಡುವವರ ಮೇಲಷ್ಟೇ ಅಲ್ಲ, ಬಳಸಿಕೊಳ್ಳುವವರ ಮೇಲೂ ಇರುತ್ತದೆ. ಏನಂತೀರಾ..?” - ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ. 1. ಸಾರಿಗೆ..! ತೀರ್ಥಕ್ಷೇತ್ರಗಳಲ್ಲಿ  ಸಿಕ್ಕಾಪಟ್ಟೆ ಬೇಡಿಕೆ  ಅನ್ನ...

ಕವನ: ಹೇ ಗುರುವರ್ಯ…

ಹೇ  ಗುರುವರ್ಯ… ಅಜ್ಞಾನ ಕಳೆದು ಜ್ಞಾನ ನೀಡಿ ಜನತಾ ಗುರುಕುಲ ವಿದ್ಯಾ ಆಲಯದೊಳ್ ಮನುಜನ್ಮ ಜ್ಞಾನಜ್ಯೋತಿಯೊಳ್… ವಿದ್ಯೆ ನೀಡಿದ ಗುರುವರ್ಯ ನಿಮಗೆ ನನ್ನ ನಮನ ಬೆಳಕು ಕಾಣುತಿಹೆ ಮನದಾಕಾಂಕ್ಷೆಯೊಳು ನೂರಾರು ವಿದ್ಯಾರ್ಥಿಗಳು ವಿದ್ಯೆಯಂಚಿನ ಬುದ್ಧಿ ರತ್ನ ರಾಶಿಯ ಹೊನ್ನು ಉತ್ಸಾಹ ಉಲ್ಲಾಸದಾ ಬುಗ್ಗೆಯೊಳ್ ನೀನ್ ಮರೆಯಲಾಗದ ಗುರುವರ್ಯ… ಮಕ್ಕಳ ತಪ್ಪು ಹೆಜ್ಜೆಯ ಬಲೆ ಬಿಡಿಸಿ ತಪ್ಪುದಾರಿಯ ತಡೆದು ಸರಿದಾರಿಯೊಳ್ ನಡೆಯ ಕಲಿಸಿ ಮರೆಯಲಾಗದ ನೆನಪಾಗಿ ಹೇ ಗುರುವರ್ಯ….. ಆತ್ಮವಿಶ್ವಾಸ, ಶಿಸ್ತಿನಾ ಬೆಳೆ ಬಿತ್ತಿ ವಿದ್ಯಾರ್ಥಿಗಳ...

ಕವನ: ಪರಿಸರ ನೀ ಉಳಿಸು ಸರಸರ

ಪರಿಸರ ನೀ ಉಳಿಸು ಸರಸರ ನಿನ್ನ ಪಾಪಗಳೆಲ್ಲವ ಕ್ಷಮಿಸಿ ಮಾತೃ ಹೃದಯದಿ ಹರಸುತಿಹಳು ಭೂ ಮಾತೆ ಸ್ವಾರ್ಥಕಾಗಿ ಆಕೆಯ ಒಡಲ ಬಗೆಯುವೆ ಏಕೆ..ಓ ಮೂಢಾ !! ನಗರೀಕರಣದ ನೆಪದಲಿ ವೃಕ್ಷಗಳ ಕಡಿದೆ, ಬೆಟ್ಟಗುಡ್ಡಗಳ ಆಪೋಶನ ಮಾಡಿದೆ, ಸುಂದರ ಪ್ರಕೃತಿಯ  ಕೊಂದು, ಬಾರ್,ರೆಸಾರ್ಟಗಳ ಮಾಡಿ ನೀ ಉದ್ಧಾರವಾದೆ.. ಆಧುನೀಕರಣದ  ನೆಪದಲಿ ಭೂತಾಯಿಯ ಉಸಿರಾದ ಬೆಟ್ಟಗುಡ್ಡಗಳ ಬಗೆದೆ, ಹಸಿರು ಮರಗಳ ಜೀವಂತ ಕೊಂದೆ, ಎಲ್ಲಕೂ ಸಮಾಜದ ಪ್ರಗತಿಯ ನೆಪ ಹೇಳಿದೆ.. ಮಲೆನಾಡು ಹಸಿರು, ಗುಡ್ಡಬೆಟ್ಟಗಳು   ಕರಗಿ ಬಯಲಾಯಿತು,ಮಳೆ...
- Advertisement -

Latest News

ಶ್ರೀ ಬಸವೇಶ್ವರ ಸೊಸಾಯಿಟಿಗೆ ರಜತ ಮಹೋತ್ಸವ ಸಂಭ್ರಮ

ಮೂಡಲಗಿ -ಪಟ್ಟಣದ ಶ್ರೀ ಬಸವೇಶ್ವರ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಗೆ ೨೫ ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಇದೇ ದಿ. ೨೫ ರಂದು ಸಂಭ್ರಮದ ಬೆಳ್ಳಿ ಮಹೋತ್ಸವ...
- Advertisement -
close
error: Content is protected !!
Join WhatsApp Group