ಕವನ

ಕವನ : ಲಿಂಗಾಯತ ಸಾಫ್ಟವೇರ್ ಕರಪ್ಟಾಗಿದೆ

ಲಿಂಗಾಯತ ಸಾಫ್ಟ್‌ವೇರ್ ಕರಪ್ಟಾಗಿದೆ... ಕ್ಷಮಿಸಿ ವಚನ ಶಾಸ್ತ್ರ ಲಿಂಗಾಯತ ಸಾಫ್ಟ್‌ವೇರುಗಳೆಲ್ಲಾ ಕರಪ್ಟಾಗಿವೆ ಮೊನ್ನೆಮೊನ್ನೆ ಹಾಕಿಸಿದ ಶರಣರ ಮದರಬೋಡಿಗೆ ಮೆಮೊರಿ ಆಪ್ಷನ್ನೇ ತೆಗೆದುಹಾಕಲಾಗಿದೆಯಂತೆ ಈಗ ಅನುಭವ ಸಾಫ್ಟ್‌ವೇರೂ ಬರುವುದೇ ಹೀಗಂತೆ! ಬಸವ ಧರ್ಮ ಹೊಸ ಲ್ಯಾಪ್‌ಟಾಪಿಗೆ ಬ್ಯಾಟರಿ ಡ್ರೈವೇ ಇಲ್ಲ ಬಸವ ಭಕ್ತರ ಮೇನ್‌ಸ್ವಿಚ್ಚಿನೊಂದಿಗೆ ಕನೆಕ್ಷನ್ನೂ ಇಲ್ಲ ಅಲ್ಲದೆ ಯಾವ ನೆನಪೂ ಇಲ್ಲ ಮೆಮೋರಿ ಲಾಸಾಗಿದೆ, ಎಲ್ಲವೂ ಮರೆತಿದೆ... ಅರಿವಳಿಕೆ ತಿನ್ನುತ್ತ ಆಪರೇಷನ್ ಟೇಬಲ್ಲಿನ ಮೇಲೆ ಒಂಬತ್ತು ಶತಮಾನ ಕಳೆದದ್ದೂ ನೆನಪೇ ಇಲ್ಲ ಇದೀಗ ವಚನ ದರ್ಶನ ವೈರಸ್ ಒಳಗೆ ನುಸುಳಿದೆ. ಸಿಸ್ಟಮ್ ಕೆಟ್ಟು ಹೋಗಿದೆ ಮಠ ಸ್ವಾಮಿಗಳ ಫೈಲುಗಳಲ್ಲೂ, ಅಗ್ರಹಾರದ ಮುದ್ರೆ ಬಿದ್ದಿದೆ ಫೋಲ್ಡರುಗಳಲ್ಲೂ ಶರಣರು ವಿಂಡೋ ಬಂದಾಗಿದೆ.. ಇನ್ನು ವೈರಸ್ ಗಾರ್ಡ್‌ಗಳಾಕಿ ಉಪಯೋಗವಿಲ್ಲ.. ಮೆಮೋರಿ ಮರೆತ ನಿವೃತ್ತಿ ಅಧಿಕಾರಿಗಳ ಮೊದಲು...

ಕವನ : ಬೆಲೆಯಿಲ್ಲ ಭಾವನೆಗೆ

ಬೆಲೆಯಿಲ್ಲ ಭಾವನೆಗೆ ಭಾವನೆಗಳಿಗೆ ಬೆಲೆ ಇಲ್ಲ ಮನುಜ ಮೋಹದ ಬಲೆ ಸಹಜ ಕೊಟ್ಟು ತೆಗೆದು ಕೊಳ್ಳುವ ಇರಾದೆಯಲಿ ಒಗ್ಗಟ್ಟು ಬರೀ ನೆಪದ ತೆರದಲಿ. ನಾನೆಂಬ ಗರಿ ಮೂಡಿ ನೀನೆಂಬ ಭೇದ ಹರಡಿ ಬೆನ್ನಿಗೆ ಚೂರಿ ಹಾಕುವ ಹುನ್ನಾರ ಚೆನ್ನಿಗನ ಮಾತಂತೆ ಬಿಡಾರ. ಹೊದಿಕೆಗೆ ಹೂಡಿಕೆ ಮಾಡಿ ಒಳ ಮರ್ಮ ತಿಳಿಯದೆ ತಡಕಾಡಿ ಗಾಳಕ್ಕೆ ಸಿಕ್ಕ ಮೀನು ಕಲಿಗಾಲದ ಬಳುವಳಿ ನೀನು. ಸಂಪತ್ತಿನ ನಶೆಗೆ ವಿಪತ್ತು ಆಹ್ವಾನಿಸಿದ ಬಗೆಗೆ ವಿಷಪ್ರಾಶನವಾದ ಆಹಾರ ಮೋಸದ ಜಾಲಕೆ ಆಕರ. ಡಂಭಾಚಾರದ ಬದುಕಿಗೆ ಮಾನವೀಯತೆ ತೆರೆ...

ಕವನ : ಮೋಹಕ ಚೆಲುವೆ

ಮೋಹಕ ಚೆಲುವೆ ಬಾಂದಳದಿ ಹೊಳೆಯುವ ತಿಂಗಳ ಬೆಳಕಿನ ಶ್ವೇತವರ್ಣೆ ನನ್ನ ಚೆಲುವೆ ಬೆಳಗುವ ನಿನ್ನ ಕಣ್ಣುಗಳಲಿ ಈ ಚೆಲುವನ ರೂಪವೇ ಅಡಗಿಕೊಂಡಿರುವುದ ನಾ ಬಲ್ಲೆ ನಾಚಿ ನೀರಾದ ಮೊಗ್ಗಿನ ಮುಡಿಯಂತಿರುವ ನಿನ್ನ ಚೆಂದುಟಿ ರುಧಿರ ವರ‍್ಣದ ಚೆಂಗುಲಾಬಿಯಲ್ಲವೇ ಚೆಲುವೆ ? ನಾಟ್ಯ ಮಯೂರಿಯ ಕುಣಿತ ನಾಚಿಸುವ ನಿನ್ನ ಹೆಜ್ಜೆಯ ನಾದಗಳು ಎದೆ ಝಲ್ಲೆನಿಸಿ ತುಂತುರು ಮಳೆಯ ಸಿಂಚನದಂತೆ ನಾಟ್ಯವಾಡಿ ಮನವ ತಣಿಸುತಿವೆ ಆಗಸದಿ ಹೊಳೆಯುವ ಚೆಲುವಿನ ಮೋಹಕ ತಾರೆ ನೀನಲ್ಲದೆ ಮತ್ತಾರು ಹೇಳು ಚೆಲುವೆ ? ನನ್ನ ಮನದ...

ಕವನ : ಕೆಂಪು ಸೂರ್ಯ

ಕೆಂಪು ಸೂರ್ಯ ಕಪ್ಪು ಮಣ್ಣಿನ ದಲಿತ ಕೇರಿಯ ಮಹಾರಾಷ್ಟ್ರದ ಕೆಂಪು ಸೂರ್ಯ. ಬುದ್ಧ ಬಸವ ಮಾರ್ಕ್ಸ್ ಪುಲೆ ಶಾಹು ಚಿಂತನ ಬರಿಗಾಲಿನ ಪಯಣ ಕಿತ್ತು ತಿನ್ನುವ ಬಡತನ ಶೃದ್ಧೆ ಶ್ರಮದ ಗೆಳೆತನ ಕೊಲಂಬಿಯಾ ಶಿಕ್ಷಣ ನೂರು ಪದವಿಯ ಜಾಣ ಸತ್ಯ ಸಮತೆಯ ಬಾಣ ಹಗಲಿರುಳು ಕಠಿಣ ಕಾರ್ಯ ಬರೆದಿಟ್ಟರು ಲಿಖಿತ ಘಟನಾ ಭಾರತ ದೇಶದ ಮಾನ ಸಮ್ಮಾನ ಡಾ ಅಂಬೇಡ್ಕರರ ದಿವ್ಯ ಜ್ಞಾನ ನ್ಯಾಯಕ್ಕಾಗಿ ಘೋಷಣಾ ಇಲ್ಲವಾಯಿತು ಶೋಷಣಾ ಬನ್ನಿ ಭಾರತೀಯರೇ ಉಳಿಸುವ ನಮ್ಮ ಸಂವಿಧಾನ. ಕೆಂಪು ಸೂರ್ಯ ಮುಳಗಲಾರ ಸಮಾನತೆಯ ಹರಿಕಾರ ಬಾಬಾ ಸಾಹೇಬ ಅಮರ...

ಕವನ : ಸುಣಧೋಳಿಯ ಶ್ರೀಗುರು

ಸುಣದೋಳಿಯ ಶ್ರೀ ಗುರು ಗಟ್ಟಿ ಇರಲಿ ತಂಗಿ ನಿನ್ನ ಭಾವ ಭಂಗಿ ನಾನು 'ದೊಡ್ಡಾಕೆಂದು ಕುಣಿಬ್ಯಾಡ ಹಿಗ್ಗಿ ಗುರುವಿನ ಮರೆತು ಮಾಡಬ್ಯಾಡ ನೀ ಸುಗ್ಗಿ|| ಪ || ಮನದ ಮೈಲಿಗೆ ತೊಳಕೋರ ಶಿರಬಾಗಿ ನಾನು 'ಹೋದರೆ ವರವಾಗಿ ಶಿವಯೋಗಿ ಹೀನ ದುರ‍್ಗುಣಗಳನ್ನು ನೀ ನೀಗಿ ಬಂದರೆ ಅಪ್ಪಿಕೊಳ್ಳದೆ ಬಿಡದಿಹನು ಶಿವಯೋಗಿ ಸತಿಸುತರ ಚಿಂತ್ಯಾಗ ಯತಿವರನ ಮರತ್ಯಾಕ ಪಂಚಾಕ್ಷರಿ ಮಂತ್ರ ಪಠಿಸಿದರ ಸಾಕ ಸುಣದೋಳಿ ಯೋಗಿ ಬರತಾನ ಹಂತ್ಯಾಕ ಹಗ್ಗವಿಲ್ಲದ ತೇರ ಹಿಗ್ಗಿಲೆ...

ಕವನ : ದೇವ ಮಾನವ ಬಾಬಾ ಸಾಹೇಬ 

ದೇವ ಮಾನವ ಬಾಬಾ ಸಾಹೇಬ  ಆ ದೇವರನ್ನು ಕಂಡಿಲ್ಲ ನಾವು ದೇವರನ್ನು ನಿಮ್ಮಲ್ಲಿಯೇ ಕಂಡು ಕೊಂಡೆವು ನಾವು ಅಕ್ಷರಶಃ ದೈವೀ ಗುಣಗಳನ್ನು ಮೈಗೂಡಿಸಿಕೊಂಡ ನಿಜವಾದ ದೇವರು ನೀವು ದೇವತಾ ಮನುಷ್ಯರು ನೀವು ಮನುಜರೆಲ್ಲ ಒಂದೇ ನಮ್ಮಲ್ಲಿ ಹರಿವ ರಕ್ತ ಒಂದೇ ಈ ಭೂಮಿಯ ಬೆಳಕು, ಹರಿಯುವ ನೀರು ಒಂದೇ ಎಂದು ಸಮಾನತೆಯ ಮಾನವೀಯತೆಯ ತತ್ವಗಳನು ಎಲ್ಲರಿಗೂ ತಿಳಿಸಿದ ದೇವರು ನೀವು. ಹಿಂದುಳಿದ ಸಮಾಜಕ್ಕಷ್ಟೇ ಅಲ್ಲದೇ ಮಹಿಳೆಯರ ಮತ್ತು               ...

ಎರಡು ಕವನಗಳು

 ಮಹಾಮನೆಯ ಮಹಾಮಗಳು _____________________ ಮಹಾಮನೆಯ ಮಗಳು ಉರಿಯು೦ಡ ಕರ್ಪುರ ಕದಳಿಯ ಕತ್ತಲೆಯ ಬೆಳಗುವ ಮಹಾಬೆಳಗು ಅಕ್ಕರೆಯ ಅಕ್ಕ ಮಹಾದೇವಿಯಕ್ಕ ತೊರೆದು ಕೌಶಿಕನರಮನೆ ಹೊರಟಳು ಕಲ್ಯಾಣಕೆ ತುಂಡು ಕಂಬಳಿ ಹೊತ್ತು ತವರ ಮೋಹವ ಬಿಟ್ಟು ತರು ಗುಲ್ಮ ಲತೆ ಹೂವು ಪಶು ಪಕ್ಷಿ ದುಂಬಿಯ ಸ್ನೇಹ ತೊಟ್ಟು ಮಗಳೆ೦ದು ಕರೆದೊಯ್ದ ಅನುಭವದ ಮಂಟಪಕೆ ಅಣ್ಣ ಬಸವಣ್ಣ ಶರಣರ ದಂಡು ಅಲ್ಲಮರ ಪ್ರಶ್ನೆಗೆ ಕೊಟ್ಟಳು ಉತ್ತರ ಅಪರೂಪದ ಅನುಭಾವ ಚೆಲುವಿನ ಚಿತ್ಕಳೆ ಜ್ಞಾನದ ಜ್ಯೋತಿ ಉಡತಡಿಯ ಉಡುಗೊರೆ ಕಲ್ಯಾಣದ ಐಸಿರಿ ಶ್ರೀಶೈಲಕೆ ನಡೆ ನಿಂತಳು ಗುರು ಲಿಂಗವಿಡಿದು ಚೆನ್ನಮಲ್ಲಿಕಾರ್ಜುನರ ನೆರಳು ಮಹಾಮನೆಯ...

ಎರಡು ಕವನಗಳು

ಇದ್ದ ಅಲ್ಲಮ ಇಲ್ಲದಂತೆ  ------------------------------ ಕಲ್ಯಾಣ ಹಣತೆ ಭಕ್ತಿ ರಸ ತೈಲ ಅನುಭವ ಅಬ್ಬರ ಚಿಂತನೆ ಹೊರಗೆ ದುಡಿ ಮದ್ದಳೆ ಸದ್ದು ಒಳಗೊಳಗೆ ಮಿಡಿವ ತಂತಿ ಕಾಣಲಾಗದ ತೋರಬಾರದ ಮಹಾ ಘನವ ತೋರಿ ಅರಿವು ಮರೆಯ ಜಾಣ. ಅಂಧ ಮೌಡ್ಯಕೆ ಬಾಣ ಜಗದ ಭೂತಲದ ಕಾಲಜ್ಞಾನ ಶಬ್ದದೊಳಗಿನ ಮಹಾ ನಿಶಬ್ದ ಬೀಜದೊಳಗಿನ ಉಲಿವ ಮರ. ವ್ಯೋಮ ಕಾಯದ ಬಯಲು ಮಂತ್ರ ಗೌಪ್ಯದ ಮುನ್ನುಡಿ ಅನುಭೂತಿಯ ಕನ್ನಡಿ ಅಲ್ಲಾನ ಆಗಮನ ಲಾಮಾನ ನಿರ್ಗಮನ ಮಧ್ಯ ಅಲ್ಲಮ ನಿನ್ನ ಜನನ ಜ್ಞಾನದ ಚಿಜ್ಜ್ಯೋತಿ ವೈರಾಗ್ಯದ ಮೂರುತಿ ವಚನಗಳ...

ಕವನ : ಬಿಡದಿರಿ ನಮ್ಮತನ

ಬಿಡದಿರಿ ನಮ್ಮತನ ತನ್ನತನವ ಬಿಟ್ಟು ತನ್ನದಲ್ಲದಕೆ ಹರಿ ಬಿಟ್ಟು ಕನ್ನಿಕೆಯ ಹಿಂದೋಡಿ ಕುನ್ನಿಯಂತಾಗಬೇಕೆ ಮೋಡಿ. ನಮ್ಮೊಳಗಿನದ ಸರಿಸಿ ಪರರದಕೆ ಮೋಹಿಸಿ ದಾಹ ತೀರಿದ ಮೇಲೆ ಎಡ ಬಿಡಂಗಿಯಾಗಬೇಕೆ. ಹರಸುವರು ಮೊದಲು ಹೌಹಾರ ಬೇಡ ಆರಿಸಿ ನೋಡೋಮ್ಮೆ ತಾರಸಿಯ ಹತ್ತಿಸಿ ಒದೆಯುವರು. ಮತ್ತಿನ ರಂಗು ತೋರಿಸಿ ರಂಗಿನಾಟ ಆಡುವರು ಕುಣಿಸುತಿಹರು ಮನ ಬಂದಂತೆ ದಂಗಾಗದಿರು ಹಂಗು ತೊರೆದು. ನೆಪ ಒಡ್ಡಿ ಕರೆವರು ಕೊರಳ ಕೊಯ್ಯುವರು ಪರ ಮೋಹ ತರವಲ್ಲ ಓರೆ ಕೊರೆಗಳು ಸಹಜ ತಿದ್ದಿ ಮುಂದೆ ನಡೆ. ರೇಷ್ಮಾ ಕಂದಕೂರ ಶಿಕ್ಷಕಿ ಸಿಂಧನೂರು

ಕವನ : ಡಯಾಲಿಸಿಸ್ ಕೊಠಡಿಯಲ್ಲಿ….

ಡಯಾಲಿಸಿಸ್ ಕೊಠಡಿಯಲ್ಲಿ ಒಂದು ಚಿಂತನೆ.. ಮನದೊಳಗೆ ಹುತ್ತ ಗಟ್ಟಿ, ಆಲೋಚನೆಗಳ ಹೆಪ್ಪಾಗಿಸುವ ಸ್ವಾರ್ಥ,ಭ್ರಷ್ಟತೆ,ಹೀನ ಚಿಂತನೆಗಳ ಬೇರು ಸಹಿತ ತೆಗೆದು ಬಿಡಲು ಒಮ್ಮೆ ಇಡೀ ಮನಸ್ಸನ್ನು ಡಯಾಲಿಸಿಸ್ ಮಾಡಿಸಿಬಿಡು, ಸಮಾಜವನ್ನು ನೋಡುವ ನಿನ್ನ ಹೀನ ದೃಷ್ಟಿಯನ್ನೊಮ್ಮೆ ಬದಲಿಸಿಬಿಡಲು ನಿನ್ನ ದೃಷ್ಟಿಕೋನಕ್ಕೆ ಮುಚ್ಚಿರುವ ಸ್ವಾರ್ಥ,ಅಹಂಕಾರಗಳ ಪೊರೆಯ ಒಮ್ಮೆ ತೆಗೆದುಬಿಡು, ನಿನ್ನ ಮನದ ಸ್ವಾರ್ಥದ ಕಳೆಯ ಈ ಕ್ಷಣದಲ್ಲೇ ಕಳೆದುಬಿಡು, ಕಾಡುತ್ತಿರುವ ಹಳೆಯ ಮಲಿನ ನೆನಪುಗಳ ಬೇರು ಸಹಿತ ತೆಗೆಯಲು ನೆನಪಿಗೆ ಒಂದು ಶಸ್ತ್ರ ಚಿಕಿತ್ಸೆ ಮಾಡಿಸಿಬಿಡು, ನಿನ್ನ ಬದುಕ ಸಾರ್ಥಕಗೊಳಿಸಿಬಿಡು ಡಾ..ಭೇರ್ಯ ರಾಮಕುಮಾರ್
- Advertisement -

Latest News

ಕವನ : ಲಿಂಗಾಯತ ಸಾಫ್ಟವೇರ್ ಕರಪ್ಟಾಗಿದೆ

ಲಿಂಗಾಯತ ಸಾಫ್ಟ್‌ವೇರ್ ಕರಪ್ಟಾಗಿದೆ... ಕ್ಷಮಿಸಿ ವಚನ ಶಾಸ್ತ್ರ ಲಿಂಗಾಯತ ಸಾಫ್ಟ್‌ವೇರುಗಳೆಲ್ಲಾ ಕರಪ್ಟಾಗಿವೆ ಮೊನ್ನೆಮೊನ್ನೆ ಹಾಕಿಸಿದ ಶರಣರ ಮದರಬೋಡಿಗೆ ಮೆಮೊರಿ ಆಪ್ಷನ್ನೇ ತೆಗೆದುಹಾಕಲಾಗಿದೆಯಂತೆ ಈಗ ಅನುಭವ ಸಾಫ್ಟ್‌ವೇರೂ ಬರುವುದೇ ಹೀಗಂತೆ! ಬಸವ ಧರ್ಮ ಹೊಸ ಲ್ಯಾಪ್‌ಟಾಪಿಗೆ ಬ್ಯಾಟರಿ ಡ್ರೈವೇ ಇಲ್ಲ ಬಸವ ಭಕ್ತರ ಮೇನ್‌ಸ್ವಿಚ್ಚಿನೊಂದಿಗೆ ಕನೆಕ್ಷನ್ನೂ ಇಲ್ಲ ಅಲ್ಲದೆ ಯಾವ ನೆನಪೂ ಇಲ್ಲ ಮೆಮೋರಿ...
- Advertisement -
close
error: Content is protected !!
Join WhatsApp Group