ಕವನ

ವಚನಗಳು

೧ ಕೆಂಡದನುಭವ ಮೈಯ ಬೇಯಿಸಿತ್ತು ಉಂಡನುಭವ ಉದರ ಹೊರೆಯಿತ್ತು ಗಂಡನುಭವ ರಣದಿ ಜಯವ ತಂದಿತ್ತು ಮಂಡನುಭವ ಜೀವನ್ಮುಕ್ತಿಯ ಕೆಡಿಸಿತ್ತು ಅತಿಗೊಳಿಸಿದನುಭವ ತೃಪ್ತಿಗೆ ಕಪ್ಪಿಟ್ಟಿತ್ತು ಹಿತಮಿತದನುಭವ ಭವವ ಗೆಲಿಸಿತ್ತಯ್ಯ ಸೊಗಲ ಸೋಮೇಶ್ವರ ೨ ಸತ್ಯವಂತರೇ ನುಡಿಯಲಿ ಎಡುವುತಿಹರಯ್ಯ ಆಚರಿಪರೇ ನಡೆಯಲಿ ದುರಾಚಾರಿಗಳಾಗಿಹರಯ್ಯ ವಿಚಾರಿಗಳೇ ವಾದದಿ ಕುಯುಕ್ತಿಗಿಳಿದಿಹರಯ್ಯ ದಾರಿತೋರ್ವ ಗುರುವೇ ಬಟ್ಟೆಗೆಟ್ಟಿಹರಯ್ಯ ಪಾಲಿಸಬೇಕಾದವರೇ ನೇಮ ಮುರಿಯುತಿಹರಯ್ಯ ಪೋಷಣೆ ಮಾಡಬೇಕಾದಾವರೇ ಆಪೋಷಿಸುತಿಹರಯ್ಯ ದಾನಿಸಬೇಕಿದ್ದ ದಾಸೋಹಿಗಳೇ ದರವೇಸಿಗಳಾಗಿಹರಯ್ಯ ಇಂತ ತನು ಮನ ಧನಗೆಟ್ಟಿಹ ಕಲಿಗಾಲದ ಕೆಸರಲಿ ಸಿಕ್ಕು ಹಲುಬಿ ಭವವ ನೀಗಲು ಒದ್ದಾಡುತಿಹ ಬಡಜೀವವನೆಂತು ಪೊರೆವೆಯಯ್ಯ ಸೊಗಲ ಸೋಮೇಶ್ವರ ೩ ಕಣ್ಸೆಳೆವ ಸೌಂದರ್ಯ ಸೃಜಿಸಿದೆ ಅನುಭವಿಸುವಲ್ಲಿ ಜಿಪುಣನಾಗಿಬಿಟ್ಟೆ ಸುಗಂಧ ಪರಿಮಳವ...

ಶ್ರೀ ಗುರುಭ್ಯೋ ನಮಃ…..ಕವನಗಳು

ಗುರುವಿಗೆ... ಜಗವ ಕಾಣುವ ಮೊದಲೇ ಅದರರಿವು ಇತ್ತವ ನೀನು... ಹಸಿದಡೆ ಉಣ್ಣುವುದು, ದಣಿದಡೆ ಮಲಗುವುದು, ಸೂರ್ಯ ಚಂದ್ರರ ನೋಡಿ ನಕ್ಕು ನಲಿದಾಡುವುದು ತೊಟ್ಟಿಲಲಿ ಮಲಗಿದವಗೆ ಎಲ್ಲಾ ಪ್ರೀತಿಯನಿತ್ತವ ನೀನು.... ಗುರುವೇ ನಿನಗೆ ಶರಣು.. ಅಮ್ಮನೇ ಮೊದಲಾದ ಬಂಧುಗಳ ತೋರಿದೆ ನೀನು ಗಿಡ ಮರ ಬಳ್ಳಿಗಳ ಕಾಣಲು ಕಲಿಸಿದೆ ನೀನು ಓದು ಬರಹದಲಿ ಬ್ರಹ್ಮಾಂಡವ ತೋರಿದೆ ನೀನು... ನೂರು ದಾರಿಗಳಲ್ಲಿ ಬದುಕನು ಕಲಿಸಿದೆ ನೀನು... ಗುರುವೇ ನಿನಗೆ ಶರಣು.... ನಾನಾರೆಂಬುವ ಮಾತು ಮರೆತು ಸಾಯುವ ಜಗಕೆ ಪರಿಪರಿಯಾಗಿ ಅರುಹುವ ಕರುಣಾಳು ನೀನೇ... ಎಲ್ಲವೂ ನಾನೇ.. ಜಗವೆಲ್ಲವೂ ನನ್ನಿಂದೆ ಎಂಬೀ ಬರೀ ಗುಡುಗಿನ ಸದ್ದಡಗಿಸಿದ...

ಟಂಕಾಗಳು

೧ ಭುಗಿಲೆದ್ದಿದೆ ಜಗವು ಭಯದಲಿ ಮಹಾಮಾರಿಯೇ ನೀ ತಂದ ಫಜೀತಿಗೆ ಸಾವೂ ಹೆದರುತಿದೆ ೨ ಒಕ್ಕಲೆದ್ದಿದೆ ನೆಲೆಯು ಸಿಗದಲೆ ಮಾರಿ ಕೊರೋನಾ ಹೆಚ್ಚುವ ಭೀತಿಯಲಿ ಹುಚ್ಚು ಹಿಡಿಯುತಿದೆ ೩ ಭಯಗೊಂಡಿದೆ ಜಗದ ಜನವಿಂದು ಮಾರಿಗೌಷಧಿ ಸಿಗದ ಕಾರಣಕೆ ಸಾವಿಗೆ ಹೆದರಿದೆ ೪ ದಿಕ್ಕುಗಾಣದೆ ಜನ ಕಂಗಾಲಾಗಿದೆ ಸಾವು ನೋವಿನ ಲೆಕ್ಕ ಸಿಗದುದರ ಭಯಕೆ ಬೆದರಿದೆ ೫ ರೋಗ ಮುಕ್ತಿಗೆ ಭವವು ಬಯಸಿದೆ ಕೈ ಮುಗಿಯತ ಮೊರೆಯನಿಡುತಿದೆ ಧರೆಯ ದೇವರಲಿ. ಡಾ.ಗಜಾನಂದ ಸೊಗಲನ್ನವರ ಚಿಕ್ಕಬಾಗೇವಾಡಿ

ಗುರು ಪೂರ್ಣಿಮಾ ಕವನಗಳು

ಗುರುವಿಗೆ... ಗುರುವೇ...ವರಗುರುವೇ... ಮಹಾಗುರುವೇ...ಪರಮಗುರುವೇ...ಸದ್ಗುರುವೇ... ನಿನಗೆ ಶರಣು,ಸಾವಿರದ ಶರಣು.... ಜಗವ ಕಾಣುವ ಮೊದಲೇ ಅದರರಿವು ಇತ್ತವ ನೀನು... ಹಸಿದಡೆ ಉಣ್ಣುವುದು, ದಣಿದಡೆ ಮಲಗುವುದು, ಸೂರ್ಯ ಚಂದ್ರರ ನೋಡಿ ನಕ್ಕು ನಲಿದಾಡುವುದು ತೊಟ್ಟಿಲಲಿ ಮಲಗಿದವಗೆ ಎಲ್ಲಾ ಪ್ರೀತಿಯನಿತ್ತವ ನೀನು.... ಗುರುವೇ ನಿನಗೆ ಶರಣು.. ಅಮ್ಮನೇ ಮೊದಲಾದ ಬಂಧುಗಳ ತೋರಿದೆ ನೀನು ಗಿಡ ಮರ ಬಳ್ಳಿಗಳ ಕಾಣಲು ಕಲಿಸಿದೆ ನೀನು ಓದು ಬರಹದಲಿ ಬ್ರಹ್ಮಾಂಡವ ತೋರಿದೆ ನೀನು... ನೂರು ದಾರಿಗಳಲ್ಲಿ ಬದುಕನು ಕಲಿಸಿದೆ ನೀನು... ಗುರುವೇ ನಿನಗೆ ಶರಣು.... ನಾನಾರೆಂಬುವ ಮಾತು ಮರೆತು ಸಾಯುವ ಜಗಕೆ ಪರಿಪರಿಯಾಗಿ ಅರುಹುವ ಕರುಣಾಳು ನೀನೇ... ಎಲ್ಲವೂ ನಾನೇ.. ಜಗವೆಲ್ಲವೂ ನನ್ನಿಂದೆ ಎಂಬೀ...

ಭೇರ್ಯ ರಾಮಕುಮಾರ್ ಅವರ ಕವನಗಳು

ಒಂದು ಪ್ರೇಮಕಥೆ.. ಹಾರುವ ಹಕ್ಕಿಗೆ ಈಜು ಕಲಿಸಿದವರು ಯಾರು? ಚಿಟ್ಟೆಯ ರೆಕ್ಕೆಗೆ ಸುಂದರ ಚಿತ್ರ ಬರೆದವರು ಯಾರು? ಕೋಗಿಲೆಗೆ 'ಕುಹೂ,ಕುಹೂ' ಹಾಡು ಕಲಿಸಿದವರು ಯಾರು ? ಹರಯದ ಸುಂದರ ಹೃದಯಗಳಿಗೆ, ಪ್ರೀತಿಯ' ಕಾಮನ ಬಿಲ್ಲು' ನೀಡಿದವರ್ಯಾರು??? ಬದುಕಲಿ ಬಂದುದು ಸುಂದರ ಹರಯ ಬಿರುಗಾಳಿಯೂ ಸುಳಿಗಾಳಿ ಮೋಡ-ಕೋಲ್ಮಿಂಚುಗಳೂ ತಂಪೆರೆವ 'ಓಯಸಿಸ್' ಪ್ರಿಯತಮೆಯ ನೋಡಿದಾಗ ನವಿಲು ನಾಟ್ಯವಾಡಿದಂತೆ,ಪನ್ನೀರ ಮಳೆ ಸುರಿದಂತೆ!!! ಕಣ್ಣುಗಳಲ್ಲಿ ಸನ್ನೆ,ತುಟಿಯಂಚಲಿ ಸಿಹಿನಗು, ನುಡಿವ ಮಾತೆಲ್ಲವೂ ಕಾವ್ಯಮಯ, ಎತ್ತ ತಿರುಗಿದರತ್ತ ಕಾಮನಬಿಲ್ಲು, ಪ್ರಿಯನಿಗೆ ಪ್ರಿಯತಮೆಯೇ ಸರ್ವಸ್ವ, ಪ್ರಿಯೆಗೆ ಪ್ರಿಯನ ಸಂಗವೇ ಸುಂದರ...

ಕವನ-ಹನಿ-ಹಾಯ್ಕು

ಹನಿ ಹನಿ ಇಬ್ಬನಿ ಸಂಸಾರ ಸೂತ್ರಕ್ಕೆ ತಕ್ಕಂತೆ ಇದ್ದರೆ ಎಲ್ಲಾ ಸಸಾರ ಬಿಡಬೇಕು ಒಮ್ಮೊಮ್ಮೆ ಇಬ್ಬರೂ ಹಟ ಇಲ್ಲವಾದರೆ ಬಾಳು ಸೂತ್ರ ಹರಿದ ಗಾಳಿಪಟ!! ಸುಮಂಗಲೆ ಮಂಗಳನ ಅಂಗಳವ ತಲುಪಿದರೆ ಏನು? ಮಂಗಳಸೂತ್ರದ ಬೆಲೆಯ ಅರಿತಿಹಳು ಹೆಣ್ಣು ಏಳು ಬೀಳುಗಳಲಿ ಗಂಡನಿಗೆ ಸಮನಾಗಿ ಮುದ್ದಾದ ಮಕ್ಕಳಿಗೆ ಮೊದಲನೇ ಗುರುವಾಗಿ ಸತಿಯಾಗಿ ಮತಿಯಾಗಿ ಬಾಳಿದರೆ ಸಾಕಲ್ಲವೇ? ನಮಗೇಕೆ ಬೇರೆ ಗೊಡವೆ? ಸ(ವಿ)ರಸ ಊಟದೊಳಗಿರಬೇಕು ಉಪ್ಪಿನಕಾಯಿಯಂತೆ ಉಪ್ಪಿನಕಾಯಿ ಊಟವಾದರೆ ಪಿತ್ತ ಕೆರಳುವುದಂತೆ ಎಲ್ಲಕ್ಕೂ ಮಿತಿಯುಂಟು ಮೀರಿದರೆ ಕಗ್ಗಂಟು ಸಮರಸದ ನಂಟು ಸ್ವರ್ಗಕ್ಕದು ಮೆಟ್ಟಿಲು.... ಎಂಟೇ.... ಎಂಟು...!! ಸತಿ ಪತಿ ಸಂಸಾರದ ಪಥದಲ್ಲಿ ಸತಿ ಸರಸತಿ ಆದರೆ ಪತಿ ಪರಬ್ರಹ್ಮ ಇಬ್ಬರಿಗೂ ಇರುವುದು ಅವರವರದೆ ಧರ್ಮ ನಡು ನಡುವೆ ಬರದಂತೆ ತಡೆದರಾಯ್ತು...

ಕವನ (ಜೂನ್ 21 ವಿಶ್ವ ಅಪ್ಪಂದಿರ ದಿನಾಚರಣೆ ಪ್ರಯುಕ್ತ ಈ ಕವನ)

*ಬಹುಮುಖ ವ್ಯಕ್ತಿತ್ವದ ಸ್ವಾಭಿಮಾನಿ* ಸರಳ ವ್ಯಕ್ತಿತ್ವದ,ಸೇವಾ ತತ್ಪರ ವ್ಯಕ್ತಿತ್ವದ ಮೇರು ಪುರುಷ ನಮ್ಮಪ್ಪ, ಜಗತ್ತಿನಾದ್ಯಂತ ಪ್ಲೇಗ್ ರೋಗದ ರುದ್ರನರ್ತನ, ಊರು ತೊರೆದು ತೋಟ ಸೇರಿದ ಕುಟುಂಬ, ಸುಂದರ ಹಸಿರು ಪರಿಸರದಲ್ಲಿ ಅಪ್ಪನ ಜನನ.... ಗದ್ದೆ ,ತೋಟ ಕಂಡರೆ ವಿಪರೀತ ಪ್ರೀತಿ, ವೃತ್ತಿಯಲಿ ಶಿಕ್ಷಕ,ಪ್ರವೃತಿಯಲಿ ಕೃಷಿಕ, ಹಸು ಕಟ್ಟಿ,ಸೆಗಣಿ ಬಾಚಿ,ತೋಟ ಬಳಸಿ, ಸೈಕಲ್ಲೇರಿ ಶಾಲೆಗೆ ಹೊರಡುತ್ತಿದ್ದ ಸಮಯಪಾಲಕ,ಅಪರೂಪದ ಶಿಕ್ಷಕ ನಮ್ಮಪ್ಪ... ಹುಟ್ಟಿದೂರಿಗೆ ಪಾಠ ಹೇಳುವ ಐನೋರಾಗಿ, ಕರ್ತವ್ಯ ನಿರ್ವಹಿಸಿದ ಊರವರಿಗೆ ತಿಳಿಹೇಳುವ ಮಾರ್ಗದರ್ಶಕರಾಗಿ, ವ್ಯಾಜ್ಯಗಳ ಪರಿಹರಿಸುವ...

ಅಪ್ಪಾss ಐ ಲವ್ ಯೂ ಪಾ….!!

*ಅಪ್ಪ* ಎಷ್ಟೇ ಪ್ರಯತ್ನಿಸಿದರು ಬರೆಯಲಾಗುತ್ತಿಲ್ಲ ಅಪ್ಪಾ... ನೀನ್ಯಾಕೊ ಪದಗಳಿಗೆ ಸಿಗುತ್ತಿಲ್ಲ...!! ಹೆಗಲ ಮೇಲೆ ಹೊತ್ತು ಜಗವತೋರಿದವನು ಎದೆಗೆ ಅವುಚಿಕೊಂಡು ಮುದ್ದಿಸಿದವನು ನೀನು ಅಪ್ಪಾ..... ನೀನ್ಯಾಕೋ ರಾಗಕೆ ಸಿಗುತ್ತಿಲ್ಲ...!! ಸಮಾನ ಹಕ್ಕು ಕೊಟ್ಟು ಹೆಮ್ಮೆ ಪಟ್ಟವನು ನೀನು ನಿಷ್ಠೆಯನು ನಿತ್ಯ ರೂಢಿಯಲಿ ತಂದವನು ಅಪ್ಪಾ.... ನಿನ್ಯಾಕೊ ಅರಿವಿಗೆ ಸಿಗುತ್ತಿಲ್ಲ....!! ಮೌಲ್ಯಗಳನು ಪುಟಕ್ಕಿಟ್ಟ ಕುಶಲಕರ್ಮಿ ನೀನು ಪ್ರೀತಿಯ ಸಿರಿವಂತಿಕೆ ಉಣಸಿದ ಸಾಹುಕಾರ ಅಪ್ಪಾ.... ನೀನ್ಯಾಕೊ ಲೆಕ್ಕಕ್ಕೆ ಸಿಗುತ್ತಿಲ್ಲ.....!! ಸತತ ದುಡಿದ ಕಾಯಕಯೋಗಿ ನೀನು ಜಗದ ಸುಖವನೆಲ್ಲಾ ನನ್ನ ಬೊಗಸೆಗೆ ತಂದವ ನೀನು..... ಅಪ್ಪಾ ನೀನ್ಯಾಕೊ ವ್ಯಾಖ್ಯಾನಕ್ಕೆ ಸಿಗುತ್ತಿಲ್ಲ...!! *ಡಾ. ನಿರ್ಮಲಾ ಬಟ್ಟಲ* *ಅಪ್ಪ* ಅಪ್ಪ ಎಂಬ ಪದವು ಅಮೃತವು ತಂದೆಯೆಂದರೆ ತನ್ಮಯವು//ಪ// ಮನೆ...

ಕವನ: ವಿಹು ಗಿಳಿ

*ವಿಹು ಗಿಳಿ* ತುಂಟ ನಗೆಯ ಮುದ್ದುಕಂದ ನಿನ್ನ ಬೆಡಗು ಅಂದಚೆಂದ ಹಾಲುಗೆನ್ನೆ ಹೊನ್ನ ತುಟಿಯ ಸಣ್ಣ ಸಣ್ಣ ಹೆಜ್ಜೆ ನಡೆಯ , ಹವಳ ತುಟಿಯ ತುಂಬು ಮನೆಯಾ ಅರಳುಮರುಳ ನೋಟದಿ ಎಲ್ಲರ ಸೆಳೆಯುವಾ ಕಾಲನೆತ್ತಿ ಬೆರಳ ಬಾಯಲ್ಲಿಟ್ಟು ಹೊಟ್ಟೆ ಮೇಲೆ ಅಂಗಿ ತೊಟ್ಟು ಬಂಗಾರ ಬಳೆಯ ಕೈಯಲಿಟ್ಟು ಮುತ್ತಿನಂದದಿ ಹಾಸಿಗೆಯಲ್ಲಿ ಹೊಳೆಯುತಾ ಹೊರಳಿ ಮರಳಿ ಅತ್ತು-ಕರೆದು ಅಮ್ಮನೆದೆಯ ಹಾಲು ಕುಡಿದು ಮನೆಯಲಿ ಎಲ್ಲರ ಪ್ರೀತಿ ಅಮೃತದಿ ಮಿಂದು ಮಿನುಗುತಾರೆ ಯಂತೆ ಹೊಳೆಯುವಾ ನಡೆಯಲೆದರುತಾ ಹೆಜ್ಜೆಯಿಟ್ಟು ಅಳುತ ನಗುತ್ತಾ ತಿಂಡಿ...

ಕವನಗಳು

ದ್ವಂದ್ವ ಜೀವನವೆಂದರೆ ಬರಿ ಸಂತಸವೇ ತುಂಬಿದ ಜೋಳಿಗೆಯಲ್ಲ.... ಕಾಣದ ಜೋಳಿಗೆಗೆ ಕೈಹಾಕಿದಾಗ ಸಿಗುವುದನು ನೋಡಿ ನೀ ದಕ್ಕಿಸಿಕೊಳ್ಳಬೇಕು.... ನೋವು ನಿರಾಶೆಹತಾಶೆಗೆ ಕುಗ್ಗಿದರೆ ಹಿಗ್ಗನು ಕಾಣಲು ತಾಳ್ಮೆ ಬೇಕು, ಕಾಣುವ ಛಲವು ಬೇಕು.... ಮನದಮಾತಿಗೆ ಮನಸ್ಸು ಕೊಡುವ ಒಂದು ಹೃದಯವನ್ನಾದರು ಸಂಪಾದಿಸಬೇಕು.... ಒತ್ತಿ ಇಡುವ ಒತ್ತಡಗಳ ಮುಟೆಯನೂ ಒಮ್ಮೆ ಯಾದರು ಹರವಿ ಹಗುರಾಗಬೇಕು.... ಅಹಂನ ಕೋಟೆಯೊಡೆದ ಅಂಗಳದಲಿ ಅಳುವ ಮಗುವಂತೆ ಅತ್ತು ಅತ್ತು ಹಸನಾಗಬೇಕು..... ಬದುಕು ಸರಿಸಿ ಸಾವು ಕರೆಯುವಮುನ್ನ ಕ್ಷಣವಾದರು ನಿನ್ನ ನೀ ಪ್ರೀತಿಸಬೇಕು.... ದಿನವೂ ಕಾಣುವ ಹಗಲು ರಾತ್ರಿಯಂತೆ ಜೀವನದ...
- Advertisement -

Latest News

ಕವನ : ಏನೆಂದು ಹೇಳಲಿ…

ಏನೆಂದು ಹೇಳಲಿ.... ಬಹಳಷ್ಟು ಸಲ ಎದುರಾದವರೆಲ್ಲ ಕೇಳುತ್ತಾರೆ ಯಾಕೆ ಬರೆಯುತ್ತಿಲ್ಲ ಈಗೀಗ ಅವರ ಪ್ರಶ್ನೆಗಳಿಗೆಲ್ಲ ಉತರಿಸಲು ಉತ್ತರಗಳಿಲ್ಲ ನನ್ನಲ್ಲಿ ಬರೆಯಲು ಭಾವನೆಗಳು ತುಂಬಿ ಬರಬೇಕು ಖಾಲಿ ಹಾಳೆಯ ಜೊತೆಗೆ ಪೆನ್ನು...
- Advertisement -
close
error: Content is protected !!
Join WhatsApp Group