ಕವನ

ಕವನಗಳು

ನಂಬಿಕೆ 'ನಂಬಿ ಕೆಟ್ಟವರಿಲ್ಲವೋ ರಂಗಯ್ಯನ'ದಾಸವಾಣಿಯಂತೆ ನಂಬಿಕೆ ಬಲು ನಾಜೂಕಾಗಿದೆ ನಾಶವಾಗದಿರಲಿ ನಂಬಿಕೆ ನಂಬುವಂತಿರಲಿ ನಾಟುವಂತಿರಲಿ ನಂಬಿದವರು ನೂರುಕಾಲ ನೆಲೆಗೊಳ್ಳುವಂತಿರಲಿ ನಂಬಿಕೆ ನಡೆ-ನುಡಿಯಿಂದ ಕೂಡಿರಲಿ ನಂಬಿಕೆ ನಯ-ವಿನಯದಿಂದ ಕೂಡಿರಲಿ ನಂಬಿಕೆ ನಂಬಿಕೆದ್ರೋಹವಾಗದಿರಲಿ ನಂಬಿಕೆ ನಾರದಂತಿರಲಿ ನಂಬಿಕೆ ನೀರುಪಾಲಾಗದೆ ಆಗಸದ ನಕ್ಷತ್ರದಂತಿರಲಿ ನಂಬಿಕೆ ನನಗಾಗಿ ಅಲ್ಲ,ನಮ್ಮವರಿಗಾಗಿರಲಿ ನಂಬಿಕೆ ಜಿಪುಣನಾಗದೆ ಜೇನುಗೂಡಿನಂತಿರಲಿ ನಂಬಿಕೆ ನಗ-ನಾಣ್ಯದಿಂದ ಬರುವಂತದಲ್ಲ ನಂಬಿಕೆಯ ನಟ್ಟು ಹರಿಯದಂತಿರಲಿ ನಂಬಿಕೆಯೇ ಸುಖಜೀವನದ ಸೂತ್ರವಾಗಿಹುದು ನಂಬಿಕೆಯ ಕಂಬಗಳು ಅಲುಗಾಡದಿರಲಿ ನಂಬಿಕೆಯಲಿ ನಾನು ಎಂಬುದು ನಶ್ವರವಾಗಿ ನಂಬಿಕೆ ಸದಾ ನಂದಾದೀಪವಾಗಿರಲಿ 🖋ಬಿ ಡಿ ರಾಜಗೋಳಿ ಚಿಕ್ಕೋಡಿ ----------------------------------------------------------------- *ಕೊರೋನಾ ಪಾಠ* (ಹವ್ಯಕ ಭಾಷೆಯ...

“ಟಂಕಾ”ಗಳು

ಇದು ಪರ್ಷಿಯನ್ ಸಾಹಿತ್ಯ ಪ್ರಕಾರ. ಇದನ್ನು ಕನ್ನಡಕ್ಕೆ ಉತ್ತರ ಕರ್ನಾಟಕದಲ್ಲಿ ಪ್ರಚಾರಕ್ಕೆ ತಂದು ಹಲವಾರು ಕವಿಗಳು ಇದರಲ್ಲಿ ಕೃಷಿ ಕೈಗೊಂಡ ಈ ಪ್ರಕಾರಕ್ಕೆ ಮಾನ್ಯತೆ ಕೊಟ್ಟು ಬರೆಯುತ್ತಿದ್ದಾರೆ. ಇದು ಹೈದರಾಬಾದ್ ಕರ್ನಾಟಕದಲ್ಲೂ ಈ ಪ್ರಕಾರ ಚಾಲ್ತಿಯಲ್ಲಿದೆ. ನಿಯಮಗಳು:- ಇದು ಐದು ಸಾಲುಗಳ ಒಂದು ಸಾಹಿತ್ಯದ ಪ್ರಕಾರ. 1 ಮತ್ತು 3 ನೇ ಸಾಲುಗಳು ಐದೈದು ಅಕ್ಷರಗಳನ್ನು...

ಕವನಗಳು

ಸಾಗು ಅಭ್ಯುದಯದ ಹಾದಿಯಲಿ... ಜಡತ್ವ ಬಿಡು,ಹಗಲುಕನಸು ಬಿಡು, ಬಾಳಲಿ ಮಹದುದ್ದೇಶ ಧ್ಯಾನಿಸಿ,ಹೊರಡು, ದಾರಿ ನಿನಗಾಗಿ ಕಾದಿದೆ,ಅಭ್ಯುದಯದ ಹಾದಿ, ಆರಂಭದ ಹೆಜ್ಜೆಗಳು ಕಠಿಣವಿರಬಹುದು, ಕಲ್ಲುಮುಳ್ಳುಗಳಿರಬಹುದು, ಹಳ್ಳದಿಣ್ಣೆಗಳಿರಬಹುದು, ಬೇಸರವೆನಿಸುವಷ್ಟು ತಿರುವುಗಳಿರಬಹುದು, ಹಾವು-ಚೇಳುಗಳ ಭಯವಿರಬಹುದು, ಹುಲಿ-ಸಿಂಹ-ಕರಡಿಗಳ ಕಾಟವಿರಬಹುದು, ಎಲ್ಲವನು ಎದುರಿಸಿ,ಏಕಾಗ್ರತೆಯಲಿ ಹೊರಡು... ನೂರು ಸ್ನೇಹಿತರಿರಬಹುದು, ಅಪ್ಪ-ಅಮ್ಮ,ಸಹೋದರ-ಸಹೋದರಿಯರಿರಬಹುದು, ಪ್ರಗತಿಯತ್ತ ಓಟ ನಿನ್ನದೇ... ಚಂಚಲತೆಯಿಲ್ಲದೇ ಏಕಾಗ್ರತೆಯೊಂದಿಗೆ ಚಲಿಸು, ವಿಜಯದೇವತೆ ನಿನಗೊಲಿವಳು... ಬಸವಣ್ಣನ ಕಾಯಕತತ್ವ , ಗಾಂಧೀಜಿಯವರ ಸತ್ಯ,ಅಹಿಂಸೆ, ಸ್ವಾಮಿವಿವೇಕಾನಂದರ ಸಹೋದರತ್ವ, ಸರ್.ಎಂ.ವಿಶ್ವೇಶ್ವರಯ್ಯ ನವರ ದೂರದೃಷ್ಟಿ,ಕಾಯಕಪ್ರೀತಿ, ಬುದ್ದ,ಮಹಾವೀರರ ಶಾಂತಿ, ತ್ಯಾಗ, ಡಾ.ಅಬ್ದುಲ್ ಕಲಾಂರ ಸರ್ವಧರ್ಮ ನಿಷ್ಠೆ,ಕಾಯಕನಿಷ್ಠೆ ಎಂದೆಂದೂ ನಿನ್ನದಾಗಿರಲಿ,ಗೆಲುವು ಎಂದೆಂದೂ ನಿನಗಿರಲಿ... ಕ್ರಮಿಸುವ ಹಾದಿ ದೂರದ...

ಮರಳಿ ಗೂಡಿಗೆ

ಮರಳಿ ಗೂಡಿಗೆ ದಿನಗೂಲಿಗಾಗಿ ದುಡಿಯುವ ಕಾರ್ಮಿಕರು ನಾವು.... ರಟ್ಟೆಯ ಬಲವ ನಂಬಿದವರು ಕೆಲಸವಿದೆಯೆಂದು ಕೈಚಾಚಿದರೆ ದೇಶದ ಉದ್ದಗಲಕ್ಕೂ ಹರಿದಾಡುವರು ನಾವು....!! ಕೂಲಿ ಕೆಲಸವನರಸಿ ವಿದೇಶಕ್ಕೆ ಹೋದ ಕಾರ್ಮಿಕರು ಅವರು.... ವಿದ್ಯೆ, ಹುದ್ದೆಯ ಬಲವ ನಂಬಿದವರು ಹಣದ ಆಸೆಗೆ ದೇಶವನೇ ಹೀಗಳೆದು ಲೋಹದ ಹಕ್ಕಿಯಲಿ ಕುಳಿತು ಹಾರಾಡುವವರು ಅವರು....!! ತುತ್ತಿನ ಚೀಲ ತುಂಬಿಸಲು ಹರಸಾಹಸ ಪಡುವವರು ನಾವು.... ಹರಕುಹಾಸು ಮುರುಕು ಜೋಪಡಿಯಲಿ ಕರುಳಕುಡಿಯ ನಗುವ ಕಂಡು ಬೆಂಕಿಯಲಿ ಸುಡುವ ರೊಟ್ಟಿ ಉಂಡು ಸುಖವ ಕಾಣುವ ಶ್ರೀಮಂತರು ನಾವು...!! ಆಸ್ತಿ ಅಂತಸ್ತು...
- Advertisement -

Latest News

ಹನಿಗವನಗಳು

ಹನಿಗವನಗಳು 1) ಸುಳ್ಳುಗಾರರು ಹತ್ತು ನಾಲಿಗೆಯ ರಾವಣ ಹೇಳಲಿಲ್ಲ ಒಂದು ಸುಳ್ಳು ಒಂದೇ ನಾಲಿಗೆಯ ರಾಜಕಾರಣಿ ಹೇಳುತ್ತಾನೆ ದಿನಕ್ಕತ್ತು ಸುಳ್ಳು! 2) ಶೀಲಾ ನೆರೆಮನೆ ಶೀಲಾ ಪರ ಪುರುಷರೊಡನೆ ಸೇರಿ ಹೆಸರು ಕೆಡಿಸಿಕೊಂಡಳು 3) ಟಿವಿ ಹಾವಳಿ ಮನೆಯಲ್ಲಿ ಟಿವಿ ಮುಂದೆ ಸದಾ ಇರುವ ವಿದ್ಯಾ ರ್ಥಿಗಳು ಶಾಲೆಯಲ್ಲಿ ಹಿಂದೆ ಬೀಳುವರು. 4) ವಾಸ್ತವ ಕಟ್ಟುವವು...
- Advertisement -
close
error: Content is protected !!
Join WhatsApp Group