ಸಂಪಾದಕೀಯ

ಮರೆಯಾಗುತ್ತಿರುವ ಓದುವ ಸುಖ, ಹೆಚ್ಚಿದ ಕನ್ನಡದ ಕೊಲೆ!

ಸುಮಾರು ನಲುವತ್ತು ಸಾವಿರ ಜನಸಂಖ್ಯೆ ಇರುವ, ತಾಲೂಕಾ ಪಟ್ಟಣವಾದ ಮೂಡಲಗಿ ನಗರಕ್ಕೆ ಸುಧಾ ವಾರಪತ್ರಿಕೆಯ ಸಂಚಿಕೆಗಳು ಕೇವಲ ಎರಡು ಬರುತ್ತವೆ, ಮಯೂರ ಒಂದು, ಕೆಲವೇ ಕೆಲವು ತರಂಗ ಹಾಗೂ ತುಷಾರ ಪತ್ರಿಕೆಗಳು ಬರುತ್ತವೆ ಎಂಬುದನ್ನು ಕೇಳಿ ವಿಷಾದವೆನಿಸಿತು. ಇದು ಒಂದು ನಗರದ್ದೇ ಅಲ್ಲ ಎಲ್ಲ ನಗರಗಳಲ್ಲೂ ಪತ್ರಿಕೆಗಳ ಸಂಖ್ಯೆ ಕುಸಿದು ಹೋಗಿದೆ. ಜಾಗತಿಕ ಲೋಕದ ಅದ್ಭುತಗಳನ್ನು...

ಇವರು ಜನಸೇವಕರಲ್ಲ; ಜನಸೇವೆ ಮಾಡುವವರು ಹೀಗೆ ಮಾಡುವುದಿಲ್ಲ !

ಇವರು ಮಾತೆತ್ತಿದರೆ ತಾವು ಜನರ ಸೇವಕರು, ಅಭಿವೃದ್ಧಿಯ ಪರವಾಗಿ ಇರುವವರು ಎಂದು ಕೇವಲ ಬಡಾಯಿ ಕೊಚ್ಚಿಕೊಳ್ಳುತ್ತಾರೆ ಆದರೆ ಮಾಡುವುದು ಮಾತ್ರ ಸಂಪೂರ್ಣ ಸ್ವಾರ್ಥದ ರಾಜಕಾರಣ. ಕೇವಲ ಟಿಕೆಟ್ ಸಿಗಲಿಲ್ಲ ಎಂಬ ಮಾತ್ರಕ್ಕೇ ಹತ್ತು ಹಲವಾರು ವರ್ಷಗಳಿಂದ ಬೆಳೆದು ಬಂದ ಪಕ್ಷವನ್ನೇ ತೊರೆದು ಹೋಗಿಬಿಡುತ್ತಾರಲ್ಲ ಇದು ಶುದ್ಧ ಮುಠ್ಠಾಳತನ ಮಾತ್ರವಲ್ಲ ಅತ್ಯಂತ ಕೀಳು ಮಟ್ಟದ ರಾಜಕಾರಣ...

ಸಂಪಾದಕೀಯ

ಕಳೆದ ಮೂರ್ನಾಲ್ಕು ದಿನಗಳಿಂದ ನಮ್ಮ Times of ಕರ್ನಾಟಕ ಪ್ರಕಟವಾಗಿಲ್ಲ ಎಂಬುದನ್ನು ತಾವು ಗಮನಸಿರಬೆಕು. ಹಲವಾರು ಓದುಗರು ಫೋನ್ ಮಾಡಿ ವಿಚಾರಿಸಿದರು. ತಾಂತ್ರಿಕ ಕಾರಣಗಳಿಂದ ನಮ್ಮ ವೆಬ್ ಸೈಟ್ ತೆರೆದುಕೊಳ್ಳುತ್ತಿರಲಿಲ್ಲ. ಇದರಿಂದ ಸುದ್ದಿ, ಬರಹಗಳನ್ನು ಪ್ರಕಟಿಸಲು ಆಗಲಿಲ್ಲ. ಕೆಲವು ಜ್ವಲಂತ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಬೇಕು ಎಂದು ಹೊರಟ ನಮ್ಮ ಪ್ರಯತ್ನಗಳಿಗೆ ತಣ್ಣೀರು ಬಿತ್ತು. ಟೈಮ್ಸ್... ಬಂದ್...

ಸದಾಶಯ: ಜನತೆಯ ಬಾಳು ಬೆಳಗಲಿ ದೀಪದ ಹಬ್ಬ

ಒಂದು ಸಣ್ಣ ಹಣತೆ ಒಂದಿಡೀ ಪ್ರಮಾಣದ ಕತ್ತಲೆಯನ್ನೇ ಹೊಡೆದೋಡಿಸುತ್ತದೆ. ಇದನ್ನೇ ನಮ್ಮೆಲ್ಲರ ಬದುಕಿಗೆ ಜನನ ಹೋಲಿಸಿಕೊಂಡರೆ ನಮ್ಮಗಳ ಬದುಕಿಗೆ ಇಂಥ ಹಣತೆಗಳು ಇಂದಿನ ಜಗತ್ತಿನಲ್ಲಿ ಹಲವಾರು ಬೇಕಾಗಬಹುದು. ಅಷ್ಟೊಂದು ಪ್ರಮಾಣದಲ್ಲಿ ಕತ್ತಲೆಯೇ ತುಂಬಿಕೊಂಡಿದೆ ಬದುಕಿನಲ್ಲಿ. ಹುಟ್ಟಿದಾರಂಭದಿಂದ ಹಿಡಿದು ಬೆಳೆದು ಬದುಕಿನ ಜಟಕಾ ಬಂಡಿಯ ಬಾರುಕೋಲು ಹಿಡಿಯುವ ತನಕ ಹಲವಾರು ರೀತಿಯ ಏರುಪೇರುಗಳು ಮನುಷ್ಯನನ್ನು ನಜ್ಜುಗುಜ್ಜು ಮಾಡುತ್ತವೆ....

ಮರುಗಿದ ಜೀವಿಯ ದುಡ್ಡು ಸುಖ ನೀಡೀತೆ?

ಈ ಮಾತು ಈಗ ನಿಜವಾಗುತ್ತಿದೆ. ಯಾರನ್ನು ನಾವು ಇಷ್ಟು ಶತಮಾನಗಳ ಕಾಲ ರಕ್ಷಕ ದೇವರೆಂದುಕೊಂಡು ಬಂದಿದ್ದೆವೋ ಅವರೆಲ್ಲ ಈಗ ಈ ಕೊರೋನಾ ಕಾಲದಲ್ಲಿ ಕೇವಲ ಸೈನಿಕರಾಗಿದ್ದಾರಷ್ಟೆ ಆದರೆ ರಕ್ಷಣೆಯ ಕೆಲಸ ಅವರಿಂದ ಆಗುತ್ತಿಲ್ಲ. ಈ ಮಾತು ಯಾಕೆ ಬಂತೆಂದರೆ ಒಂದೆರಡು ಉದಾಹರಣೆಗಳನ್ನು ನೋಡೋಣ ಬನ್ನಿ. ಒಬ್ಬ ವ್ಯಕ್ತಿ ತನಗೆ ತೀವ್ರ ಎದೆ ನೋವೆಂದು ಖಾಸಗಿ ಆಸ್ಪತ್ರೆಗೆ...

ದೇಶಹಿತದ ವಿಷಯದಲ್ಲಿ ಒಗ್ಗಟ್ಟೇಕೆ ಸಾಧ್ಯವಾಗುತ್ತಿಲ್ಲ ?

ನಾವು ಕೇಳಿರುತ್ತೇವೆ ; ಜಪಾನೀಯರು ತಮ್ಮ ಪ್ರಧಾನಿಯ ಒಂದು ಕೆಲಸವನ್ನು ವಿರೋಧಿಸುತ್ತಾರೆ ಆದರೆ ದೇಶದ ಕುರಿತ ಅವರ ಒಂದು ಕರೆಗೆ ಒಂದೇ ದನಿಯೆಂಬಂತೆ ಬೆಂಬಲ ನೀಡುತ್ತಾರೆ. ಅಮೇರಿಕನ್ನರು ಟ್ರಂಪ್ ಅವರನ್ನು ಕೆಲವು ವಿಷಯಗಳಲ್ಲಿ ವಿರೋಧಿಸುತ್ತಾರೆ ಆದರೆ ದೇಶದ ಭದ್ರತೆ ವಿಷಯ ಬಂದಾಗ ಬೇಷರತ್ ಬೆಂಬಲ ಟ್ರಂಪ್ ಗೇ ನೀಡುತ್ತಾರೆ. ಆದರೆ ನಮ್ಮ ದೇಶದಲ್ಲಿ ? ದೇಶದ...

ಚಿಪ್ಪು ಕಳಚಿದ ಆಮೆಯಂತಾಗದಿರಲಿ ಬದುಕು

ನಮ್ಮ ಪುರಸಭೆಯ ಆರೋಗ್ಯಾಧಿಕಾರಿಗಳು ವಾಟ್ಸಪ್ ನಲ್ಲಿ ಚಿತ್ರವೊಂದನ್ನು ಹಂಚಿಕೊಂಡಿದ್ದರು. ಆಮೆಯು ತನ್ನ ಚಿಪ್ಪನ್ನು ಕಳಚಿಕೊಂಡು ಅದರ ಮೇಲೆ ಹತ್ತಿ ನಿಂತು ಬೀಗುತ್ತಿರುವ ಚಿತ್ರ. ಅದನ್ನು ಅವರಿಗೆ ಯಾರು ಕಳಿಸಿದ್ದರೋ ಗೊತ್ತಿಲ್ಲ ಅವರು ಮಾತ್ರ ತಮ್ಮ ಕರ್ತವ್ಯ ಮಾಡಿದ್ದಾರೆ ಎಲ್ಲರಿಗೂ ಅದನ್ನು ಹಂಚಿ ಎಚ್ಚರಿಸುವ ಮೂಲಕ. ಚಿಪ್ಪು ಕಳಚಿಕೊಂಡು ತಾನೇನೋ ಸ್ವಾತಂತ್ರ್ಯ ಗಳಿಸಿಕೊಂಡಂತೆ ಆಮೆ ಭಾವಿಸಿದರೆ ಹಾನಿ...

ಕುಡಿಯೂದ ಬಿಡಬೇಕು, ಆದ್ರೆ ಆಗ್ತಾ ಇಲ್ಲ…

ಹೀಗೆಂದು ಎಷ್ಟು ಸಲ ಅಂದುಕೊಂಡಿರುತ್ತಾರೆ ಕುಡಿಯುವವರು. ಎಷ್ಟು ಸಲ ಏನು ಪ್ರತಿ ದಿನವೂ ಅಂದುಕೊಂಡೇ ಇರುತ್ತಾರೆ. ಬೆಳಗಿನಿಂದ ಸಂಜೆಯವರೆಗೂ ಅವರ ತಲೆಯಲ್ಲಿ ಇವತ್ತಿನಿಂದ ಕುಡಿಯಬಾರದು ಎಂಬ ಯೋಚನೆಯೇ ಇರುತ್ತದೆ. ಸಂಜೆಯ ಹೊತ್ತಿಗೆ ಸ್ವಲ್ಪ ಎಡ ಮಿದುಳು ಒಂದು ಕ್ಷಣ ಕೆಲಸ ನಿಲ್ಲಿಸಿ ಮತ್ತೆ ಮುಂದುವರೆಸುತ್ತದೆ. ಮತ್ತದೇ ಲೋಕ ; ಬಾಟ್ಲು, ಗ್ಲಾಸು, ಸಾರಾಯಿ ಘಾಟು..... ಇದು...

ಇದು ಕನ್ನಡದ ಕಾಲ !

Times of ಕರ್ನಾಟಕ ಎಂಬ ವೆಬ್ ಪತ್ರಿಕೆ ಮಾಡಬೇಕೆಂಬ ಯೋಚನೆ ಬಂದಾಗ ಮೊದಲು ಅನ್ನಿಸಿದ್ದೇ ಇದು ಕನ್ನಡದ ಕಾಲ ಎಂಬ ಅನಿಸಿಕೆ. ಕನ್ನಡಕ್ಕೊಂದು ಕಾಲವೆಂಬುದಿಲ್ಲ. ಅದು ಪುರಾತನ ಭಾಷೆ. ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿದ್ದು. ಒಂದು ವೈಭವಯುತ ಸಾಂಪ್ರದಾಯಿಕ ಪರಂಪರೆಯನ್ನೇ ಹೊಂದಿದೆ. ಅನೇಕ ಜಗದ್ವಿಖ್ಯಾತ ಕವಿಗಳು ಕನ್ನಡದ ದೀಪವನ್ನು ಪ್ರಾಚೀನ ಕಾಲದಿಂದಲೂ ಬೆಳಗಿಸುತ್ತ ಬಂದಿದ್ದು...
- Advertisement -

Latest News

ಕಿವುಡ ಮಕ್ಕಳ ಸಂಸ್ಥೆಗೆ ರಾಜ್ಯ ಪ್ರಶಸ್ತಿ

ಕರ್ನಾಟಕ ಸರ್ಕಾರವು ವಿಕಲಚೇತನ ಸೇವಾ ಕ್ಷೇತ್ರದಲ್ಲಿ ಅನುಪಮ ಸೇವೆಯನ್ನು ಪರಿಗಣಿಸಿ ಪ್ರಸ್ತುತ 2023ನೇ ಸಾಲಿನ ಉತ್ತಮ ಸಂಸ್ಥೆಯ ವಿಭಾಗದಡಿ ಪೇರೆಂಟ್ಸ್ ಅಸೋಸಿಯೇಷನ್ ಆಫ್ ಡೆಫ್ ಚಿಲ್ಡ್ರನ್,...
- Advertisement -
close
error: Content is protected !!
Join WhatsApp Group