ಕವನ

ಒಂದು ಪರಿಸರ ಗೀತೆ : ಮರ ದೇವರು ಕೊಟ್ಟ ವರ

ಮರ ದೇವರು ಕೊಟ್ಟ ವರ ಬಹು ಉಪಯೋಗಿ ಮರ ದೇವರು ಕೊಟ್ಟ ವರ ರಕ್ಷಿಪುದು ಪರಿಸರ ನೀಗುವದು ಬರತರಲು ಮಳೆ ನೀರ ತಡೆಯಲು ಮಹಾಪೂರ ಹಿಡಿದಿಡಲು ಭೂಸಾರ ಬೇಕು ನಮಗೆ ಮರಮರಮುಟ್ಟು ಔಷಧ ಬೆಳೆಗಳಿಗೆ ಗೊಬ್ಬರ ಕಟ್ಟಲು ಮನೆ ಮಂದಿರ ಬೇಕು ನಮಗೆ ಮರಹಸಿರು ಹೊನ್ನಿದು ಮರ ಭೂ ತಾಯಿಗೆ ಅಲಂಕಾರ ಪಶು ಪಕ್ಷಿಗೆ ಆಹಾರ ರೈತ ಜನಕೆ ಆಸರಸುಜನರೆ ಕೇಳಿರಿ ಮರಗಳನು ಬೆಳೆಸಿರಿ ಕಾಡನು ಉಳಿಸಿರಿ ಪರಿಸರ ರಕ್ಷಿಸಿರಿ... ಆರ್. ಎಸ್. ಚಾಪಗಾವಿ ಬೆಳಗಾವಿ 8317404648

ಕವನ : ಹುಡುಕುತ್ತಿದ್ದೇನೆ

ಹುಡುಕುತ್ತಿದ್ದೇನೆ ಹುಡುಕುತ್ತಿದ್ದೇನೆ ನಾನು ಗುಡಿ ಚರ್ಚು ಮಸೀದಿ ಗುರುದ್ವಾರ ಬಸದಿ ಮಠ ಬೌದ್ಧ ವಿಹಾರಗಳಲ್ಲಿಕಾಣಲಾರೇನು ದೇವರ ಧರ್ಮ ತತ್ವ ಚಿಂತನೆ ಎಲ್ಲೆಡೆ ಪೂಜೆ ಪ್ರಾರ್ಥನೆ ಮರೆತು ಮನುಜ ಪಥಬೈಬಲ್ ಕುರಾನ್ ಗೀತೆ ವಚನ ಪಠಣ ನಿಂತಿಲ್ಲ ಗಟ್ಟಿ ಧ್ವನಿಯ ಕೂಗು ಶಬ್ದಗಳ ಲಜ್ಜೆ ಕರ್ಕಶಹಸಿವು ಬಡತನ ಧರ್ಮ ಸುಲಿಗೆ ಶೋಷಣೆ ಕರ್ಮ ಉಳ್ಳವರಿಗೆ ದೇವರು ಪೂಜೆ ಇಲ್ಲದವರಿಗೆ ಇದೆ ಭಿಕ್ಷೆಹುಡುಕುತ್ತಿದ್ದೇನೆ ನಿತ್ಯ ನಿರಂತರ ಶೋಧ ನೆರಳು ಬಿಸಿಲು ತಾಪ ಎಂದು ಕೊನೆ ಮನುಜ ಶಾಪಡಾ ಶಶಿಕಾಂತ ಪಟ್ಟಣ...

ಕವನ : ಕನ್ನಡವೆಂದರೆ ಪಂಚಪ್ರಾಣ

ಕನ್ನಡವೆಂದರೆ ಪಂಚಪ್ರಾಣಅನ್ನ ಅಕ್ಷರ ನೀಡಿ ಸಲುಹುತಿಹ ಕನ್ನಡಾಂಬೆಗೆ ಜೀವ ಹೋದರೂ ಸರಿ ತಾಯಿ ಮಾನ ಕಾಪಾಡುವ ಗಂಡೆದೆಯ ಮಕ್ಕಳೆಂದರೆ ಅವಳಿಗೆ ಪ್ರಾಣ ತಾಯಿ ಭುವನೇಶ್ವರಿಗೆ ನಾವೆಂದರೆ ಜೀವ ಅದ್ಕೆ ಕನ್ನಡವೆಂದರೆ ನನಗೆ ಪಂಚಪ್ರಾಣನಾಡಪ್ರೇಮವ ಮರೆತು ಪರಭಾಷಾ ಪ್ರೇಮ ಮೆರೆಸುವವರಿಗೆ ಅವಳದೊಂದು ಕಿವಿಮಾತು ತಾಯಿನುಡಿಯ ಮರೆತ ಜನ ಹೆತ್ತ ತಾಯಿಯನ್ನು ಮರೆಯದಿರುವರೇ? ಇಲ್ಲಿರುವ ಸೌಭಾಗ್ಯ ಬೇರೆಲ್ಲೂ ಕಾಣೆನು ಅದ್ಕೆ ಕನ್ನಡವೆಂದರೆ ಪಂಚಪ್ರಾಣನಮ್ಮ ಬದುಕಿಗೆ ಆಧಾರ ಕನ್ನಡ ಉಸಿರಿಗೆ ಉಸಿರಾಗಿಹುದು ಕನ್ನಡ ಈ ತಾಯ್ನೆಲ...

ಕವನ : ಚೆಲುವ ಕನ್ನಡ ನಾಡು

ಚೆಲುವ ಕನ್ನಡ ನಾಡು ಚೆಲುವ ಕನ್ನಡ ನಾಡು ಇದು ಸುಂದರ ಗಂಧದ ಬೀಡು ಗಾಳಿ ಬೀಸುವ ಹಸಿರು ವನಗಳು ಕಲೆಯ ನದಿಯ ದೇವಾಲಯಶಾಂತವಾಗಿ ಹರಿವ ಹೇಮಾವತಿ ಧುಮುಕಿ ನೆಗೆವ ಶರಾವತಿ ಜೋಗದಲ್ಲಿ ಜಲಪಾತ ಇರುವುದು ಕೊಡಗಿನಲ್ಲಿ ಕಾವೇರಿ ಹುಟ್ಟುವುದು ಕಪಿಲೆ ಗೋದಾವರಿ ತುಂಗಭದ್ರೆ ನಮ್ಮ ದಾಹ ಹಿಂಗಿಸೋ ನದಿಗಳೇ ನೀವೇ ನಮ್ಮ ಜೀವನ ಸೃಷ್ಟಿ ಸೊಬಗಿನ ಚೇತನಹಾಸನ ಜಿಲ್ಲೆಯ ಹಲ್ಮಿಡಿ ಶಾಸನ ಬೇಲೂರು ಶಿಲ್ಪವು ನಿತ್ಯ ನೂತನ ಮೈಸೂರಿನಲ್ಲಿ ರಾಜರ ಅರಮನೆ ತ್ಯಾಗ ಅಹಿಂಸೆಯ...

ಕವನ : ಕವಿತೆಗೊಂದು ಕರೆಯೋಲೆ

ಕವಿತೆಗೊಂದು ಕರೆಯೋಲೆ ಬರೆಯಲೆಂದು ಕುಳಿತ ನನಗೆ ಪದಗಳೇ ಸಿಗುತಿಲ್ಲ... ನುಡಿಗಳೆಲ್ಲ ಮುನಿಸಿಕೊಂಡು ದೂರ ಓಡುತಿವೆಯಲ್ಲ...!ಬೆರಳುಗಳಿಗೂ ಲೇಖನಿಗೂ ಒಳಗೊಳಗೆ ನಡೆಯಿತಾ? ಒಳಜಗಳ!! ಮನಃಪಟದಲೋ ಸಾವಿರಾರು ಅಕ್ಷರ ಬಳಗ... ಕವಿತೆ ಕಟ್ಟಲದೇಕೋ ಆಗದೆ ಸಾಗಿದೆ ಕಾಳಗ...ಪ್ರೀತಿಯಿಂದ ಕವಿತೆಗೊಂದು ಓಲೆ ಬರೆದು ಬಿಡಲೇ?... ಕರೆಯೋಲೆ ನೀಡಿ ನಾನು ಅವಳ ಇಲ್ಲಿ ಕರೆಯಲೇ?...ನನ್ನೆದೆಯಾಳದ ಪರಮಾಪ್ತ ಸಖಿಯೇ!                      ಸರಿಸು ಕೋಪ ತುಸು...

ಕವನ : ಅಕ್ಕ

ಅಕ್ಕಅಕ್ಕನೆಂದರೆ ಸಾಕು ನೆನಪಾಗುವದು ಉಡುತಡಿಯ ಕಿಚ್ಚು ರೂಪದಲಿ ಹೆಣ್ಣಾದರೂ ಪುರುಷ ನಾಚುವ ಕಿಚ್ಚು ರಾಜ ಕೌಶಿಕನ ಧಿಕ್ಕರಿಸಿ ಒಳಗೆ ಹೊರಗೆ ಬೆತ್ತಲಾದಳು ನಡೆದಳು ಕಲ್ಯಾಣದೆಡೆಗೆ ಬರದ ಬಿಸಲಿನ ನಾಡು ಹುಲಿ ಚಿರತೆ ದಟ್ಟ ಕಾಡು ಹಕ್ಕಿ ಕಲರವದ ಬೀಡು ಹೊರಟಳು ಒಬ್ಬಳೇ ಹುಡುಕುತ್ತಾ ಚೆನ್ನಮಲ್ಲಿಕಾರ್ಜುನನ ಗೂಡು ಮಳೆ ಮೋಡ ಬಿಸಿಲು ಗಾಳಿ ಹಸಿವಿಗೆ ಭಿಕ್ಷಾನ್ನ ಕುಡಿಯಲು ಕೆರೆ ಮಲಗಲು ಹಾಳು ದೇಗುಲಗಳು ಕಷ್ಟ ಕಾರ್ಪಣ್ಯ ಚಂಡಮಾರುತ ನೋವು ಕಲ್ಯಾಣಕೆ ಆರು ಹೋಗಬಾರದು ಕಾಯಕ ದಾಸೋಹವ ಬಿಟ್ಟು ಕೇಳಲು ಇರಲಿಲ್ಲ ಕಾನನದ...

ಮಕ್ಕಳ ಕವನ : ಭತ್ತದ ಪೈರು

  ಭತ್ತದ ಪೈರು **************** ಬೆಳೆದಿದೆ ನೋಡು ಭತ್ತದ ಪೈರು ಇಳೆಗೆ ಕಳೆಯ ತಂದಿಹುದುನೀರಲ್ಲಿದ್ದರೂ ನೆನೆಯದೆ ನಲುಗದೆ ಸಮೃಧ್ಧವಾಗಿ ನಿಂದಿಹುದುಗಾಳಿಯು ಬೀಸಲು ತೂಗುತ ತೊನೆಯುತ ವೈಯಾರಿಯಂತೆ ತೋರುವದುಹಸಿರು ಹಸಿರು ಮಿರಿಮಿರಿ ಮಿಂಚುತ ಕಣ್ಣಿಗೆ ಸಂತಸ ನೀಡುವದುಗರಿಗಳ ತೆರೆದು ಹೊಡೆಯನು ಹಿರಿದು ಹೀಚು ಕಾಳು ಕಟ್ಟುವದುಚಿಲಿಪಿಲಿಗುಟ್ಟುವ ಹಕ್ಕಿಯ ಬಳಗವ ಮುದದಲಿ ತನ್ನೆಡೆ ಸೆಳೆಯುವದುಮಾಗುತ ಬರಲು ಬಣ್ಣವ ಬದಲಿಸಿ ಹಳದಿ ವರ್ಣಕೆ ತಿರುಗುವದುಹಗಲಿರುಳೆನ್ನದೆ ದುಡಿಯುವ ರೈತನ ಮನದಲಿ ಖುಷಿಯು ನೆಲೆಸಿಹುದು.. ಆರ್. ಎಸ್. ಚಾಪಗಾವಿ ಬೆಳಗಾವಿ 8317404648

ಕವನ : ರೈತ ಮಹಿಳೆ

ರೈತ ಮಹಿಳೆಇವಳೆ ನೋಡು ರೈತ ಮಹಿಳೆ ನಮ್ಮ ಅನ್ನದಾತಳು ಹಗಲು ರಾತ್ರಿ ಬಿಡದೆ ಸತತ ದುಡಿಮೆಯಲ್ಲಿ ನಿರತಳು ಕೋಳಿ ಕೂಗುವ ಮುನ್ನ ಈಕೆಯು ಎಚ್ಚರಾಗಿ ಏಳುವಳು ಮನೆಯ ಕೆಲಸ ಮುಗಿಸಿ ಬೇಗ ಹೊಲದ ಕಡೆಗೆ ನಡೆವಳು ಗಂಡನೊಂದಿಗೆ ಹೆಗಲುಗೊಟ್ಟು ಹೊಲದಿ ತಾನು ದುಡಿವಳು ಭೂಮಿ ತಾಯಿ ದೇವರೆಂದು ನಿತ್ಯ ಸೇವೆಯ ಗೈವಳು ಮನೆಯಲೆರಡು ಹಸುಗಳನ್ನು ಸಾಕಿಕೊಂಡು ಇರುವಳು ಮೇವು ನೀರು ನೀಡಿ ಅವಕೆ ತುಂಬ ಹಾಲನು ಪಡೆವಳು ಮಕ್ಕಳೊಡನೆ ಆಟವಾಡುತ ಬೇಸರವ ಕಳೆವಳು ದುಡಿದು ದಣಿದು ತಾನು ನೊಂದು ನಮ್ಮನೆಲ್ಲ ಸಲುವಳು ಆರ್....

ಕವನ : ಬೆಳಕಿನ ದೀಪಾವಳಿ

ಬೆಳಕಿನ ದೀಪಾವಳಿ ಬೆಳಕು ಸರಿದು ನೇಸರನ ಅಸ್ತದೊಡನೆ ಜಗಕೆ ಜಗಮಗಿಸುವ ದೀಪಗಳ ದರ್ಶನ ಬಾನಂಚಿನಲಿ ಶಬ್ದಗಳ ನಡುವೆ ಬೆಳಕಿನ ಚಿತ್ತಾರ ಮೂಡಿಸುವ ಹಬ್ಬ ಬೆಳಕಿನ ದೀಪಾವಳಿತಮವ ಕಳೆದು ಜ್ಯೋತಿ ಬೆಳಗುವ ನಾಡಿನಪವಿತ್ರ ಹಬ್ಬ ತಳಿರು ತೋರಣ ಕಟ್ಟಿ ಮನೆಯನು ಸಿಂಗರಿಸಿ ಹಬ್ಬದಡುಗೆಯ ಸವಿಯುಣ್ಣುವ ಮನದ ಖುಷಿಯ ಹಬ್ಬವಿದು ಬೆಳಕಿನ ದೀಪಾವಳಿಹೊಸ ಬಟ್ಟೆಯ ಧರಿಸಿ ಶುಭವ ಕೋರಿ ಅರಿಷಡ್ವರ್ಗಗಳ ಮೆಟ್ಟಿ ನಿಂತು ಕುಟುಂಬದವರೊಡನೆ ನಕ್ಕು ನಲಿದು ಸಡಗರದಿ ಸಂಭ್ರಮಿಸುವ ಹಬ್ಬ ಬೆಳಕಿನ ದೀಪಾವಳಿನಮ್ಮೊಳಗಿನ ನರಕಾಸುರರ ಸದೆಬಡೆದು ಸಂಪತ್ತುಗಳ ಶ್ರೀ ರಕ್ಷೆಯನು ಲಕ್ಷ್ಮೀ ದೇವಿಯಲಿ ಬೇಡಿ ಬಲಿ ಚಕ್ರವರ್ತಿಯ ಪಾಡ್ಯಮಿದಿನದಲಿ ಜಗಕೆ ಸೌಖ್ಯ ಹಾರೈಸುವ ಬೆಳಕಿನ ಹಬ್ಬ...

ಕವನ : ದೀಪಾವಳಿ

ದೀಪಾವಳಿ ಸಾಲು ಸಾಲು ದೀಪಗಳು ಕಣ್ಣುಗಳು ಕೋರೈಸಲು ಒಳಗಣ್ಣು ತೆರೆದು ನೋಡಲು ಜೀವನದ ಮರ್ಮ ಕರ್ಮ ಧರ್ಮಗಳನು ಅರಿಯಲು ಸಾಲು ಸಾಲು ದೀಪಗಳು ಮೌಢ್ಯವ ಅಳಿಸಲು ಜ್ಞಾನವ ಉಳಿಸಿ ಬೆಳೆಸಲು ಸಾಲು ಸಾಲು ದೀಪಗಳು ಮನೆಯನು ಬೆಳಗಲು ಮನವನು ತೊಳೆಯಲು ಸಾಲು ಸಾಲು ದೀಪಗಳು ನಮ್ಮ ನಿಮ್ಮ ಎಲ್ಲರ ಮನೆ ಹಾಗೂ ಮನವನು ಬೆಳಗಲಿ ಮಾನವೀಯತೆಯ ಜ್ಯೋತಿ ಎಲ್ಲೆಡೆ ಪಸರಿಸಲಿ ಶುಭ ದೀಪಾವಳಿ 🌹ಡಾ. ಜಯಾನಂದ ಧನವಂತ
- Advertisement -spot_img

Latest News

ಮೂಡಲಗಿ : ಜಿಲ್ಲಾಮಟ್ಟದ ಬಾಲಕ ಹಾಗೂ ಬಾಲಕಿಯರ ಹ್ಯಾಂಡ್‌ಬಾಲ್ ಕ್ರೀಡಾಕೂಟ

ಮೂಡಲಗಿ - ಕ್ರೀಡೆ ಎಂಬುದನ್ನು ಗ್ರೀಕ್ ದೇಶದಲ್ಲಿ ಮನರಂಜನೆಗಾಗಿ ಬಳಸುತ್ತಿದ್ದರು ಆದರೆ ಈಗ ಮಕ್ಕಳು ಸದೃಢವಾದ ದೇಹವನ್ನು ಮತ್ತು ಜ್ಞಾನದ ಗ್ರಹಿಕೆಯು ಹೆಚ್ಚಾಗಬೇಕಾದರೆ ಮೊದಲು ಕ್ರೀಡೆಯಲ್ಲಿ...
- Advertisement -spot_img
error: Content is protected !!
Join WhatsApp Group