ಕವನ

ರಾಹುಲ್ ಸರೋದೆ ಕವನಗಳು

ಕಾಲ ಬದಲಾಗಬೇಕಾಗಿದೆ ಹಿರಿಯರ ಕಂಡು ತಗ್ಗಿ ಬಗ್ಗಿ ನಡೆಯುವಂತಿತ್ತು ಅದು ಆ ಕಾಲ ಹಿರಿಯರೆಂದರೆ ತಲೆ ಎತ್ತಿ ತಿರುಗುವಂತಾಗಿದೆ ಇದು ಈ ಕಾಲ ಕಾಲ ಬದಲಾಗಬೇಕಾಗಿದೆ ಮನೆಗೊಂದು ಟೆಲಿಫೋನ್ ಮೊಬೈಲ್ ಇದ್ದರೆ ಸಾಕಾಗಿತ್ತು ಅದು ಆ ಕಾಲ 4G 5G Network ಇದ್ದು ಪ್ರತಿಯೊಬ್ಬರಿಗೂ ಮೊಬೈಲ್ ಬೇಕಾಗಿದೆ ಇದು ಈ ಕಾಲ ಕಾಲ ಬದಲಾಗಬೇಕಾಗಿದೆ ಸಂಬಂಧಿಕರು ಇದ್ದರೆ ಸಾಕಾಗಿತ್ತು ಅದು ಆ ಕಾಲ ಸಂಬಂಧಿಕರು ಇಲ್ಲದಿದ್ದರೂ ಸಾಕಾಗಿದೆ ಇದು ಈ ಕಾಲ ಕಾಲ ಬದಲಾಗಬೇಕಾಗಿದೆ ಊಟ ಬಟ್ಟೆ ಇದ್ದರೆ ಸಾಕಾಗಿತ್ತು ಅದು ಆ ಕಾಲ ಚಿನ್ನ ಬೆಳ್ಳಿ ವಜ್ರ ವೈಡೂರ್ಯ ಇದ್ದರು...

ಕವನ: ಮಕ್ಕಳು ಗಮನಿಸುವುದೇ ಇಲ್ಲ

ಮಕ್ಕಳು ಗಮನಿಸುವುದೇ ಇಲ್ಲ ಜೀವನವಿಡೀ ದುಡಿದು ಬಸವಳಿಯುತ್ತಾನೆ ಅಪ್ಪ ಆದರೂ ಮಕ್ಕಳೆದುರು ನಗೆ ಚಿಮ್ಮಿಸುತ್ತಾನೆ ಅವನ ದಣಿವು ಗೊತ್ತಾಗುವುದೇ ಇಲ್ಲ ಮಾನಸಿಕ ಉದ್ವೇಗಕೆ ಒಳಗಾಗಿ ಕಾಯಿಲೆ ತಂದು ಕೊಳ್ಳುತ್ತಾ ಚುಚ್ಚುಮದ್ದು ಚುಚ್ಚಿಕೊಳ್ಳುತಿಹ ಅಪ್ಪನ, ಮಕ್ಕಳು ಗಮನಿಸುವುದೇ ಇಲ್ಲ ದುಡಿದು ಹಣ್ಣಾಗುತಲೇ ಮಕ್ಕಳ ವಿದ್ಯಾಭ್ಯಾಸ ನೌಕರಿಗೆ ಅನುವಾಗುತ ಮದುವೆ ಮಾಡುತ್ತಾನೆ,ಅದಕ್ಕಾಗಿ ಮಾಡಿದ ಸಾಲ ಮಕ್ಕಳು ಗಮನಿಸುವುದೇ ಇಲ್ಲ ಇನ್ನೇನು ನಿವೃತ್ತಿ ಮಕ್ಕಳೊಂದಿಗೆ ಹಾಯಾಗಿ ಇರಬೇಕೆನ್ನುವಾಗ ಮಕ್ಕಳು ಹೊರಟೇ ಬಿಟ್ಟಿರುತ್ತಾರೆ ಅಪ್ಪನ ಭಾವನೆಗಳು ಮಕ್ಕಳಿಗೆ ಅಥ೯ವಾಗುವದೇ ಇಲ್ಲ ಒಂಟಿತನದಿ ದಿನಕಳೆಯುತ ಕೊರಕೊರಗಿ...

ಕವನ: ಕನಕ ಕೃಷ್ಣರ ಒಗೆತನ

ಕನಕ ಕೃಷ್ಣರ ಒಗೆತನ ಕೃಷ್ಣ ಗೊಲ್ಲ ಕನಕ ಕುರುಬ ಗೋವುಗಳಿಗೆ ಕೃಷ್ಣನ ಕೊಳಲೆಂದರೆ ಜೀವ ಕುರಿಗಳಿಗೆ ಕನಕನ ಹಾಡುಗಳೆಂದರೆ ಪ್ರಾಣ ಒಗೆತನಕೆ ಭೇದವಿಲ್ಲ ಭಕ್ತಿಗೆ ಕುಂದಿಲ್ಲ ಕನಕ ಕೋಣಮಂತ್ರ ಜಪಿಸಿ ಹೆಬ್ಬಂಡೆ ಸರಿಸಿ ವ್ಯಾಸರಾಯರ ಪ್ರೀತಿಪಾತ್ರನಾದ ಕೃಷ್ಣ ಗುರುಗಳ ಕಳೆದು ಹೋದ ಸಂತಾನವ ಮರಳಿಸಿ ಸಾಂದಿಪನಿ ಗುರುಗಳ ಪ್ರಿಯನಾದ ಭಕ್ತಿಗೆ ಕುಂದಿಲ್ಲ ಕನಕ ಭಕ್ತಿಯಿಂದ ಹಾಡಿದ ಕೃಷ್ಣ ಪಶ್ಚಿಮದಿ ತಿರುಗಿ ಅವಗೆ ದಶ೯ನ ಕೊಟ್ಟ ಭಕ್ತಿಗೆ ಕುಂದಿಲ್ಲ ಕನಕ ರಾಯರಿಗೆ ಸಾಸಿವೆ ಕೊಟ್ಟ ಕೃಷ್ಣನ ನೈವೇದ್ಯಕೆ...

ಕವನ: ಮೇರು ಕನಕ

ಮೇರು_ಕನಕ ವ್ಯಾಸರು ಮೆಚ್ಚಿದ ದಾಸರ ಪಂಕ್ತಿಯ ಮೋಸವನರಿಯದ ಮುಗ್ಧರಿಗೆ ತೋಷದಿ ಪರೀಕ್ಷೆ ದಾಸರುವಿಟ್ಟರು ಬೇಸರ ತೋರಿದ ಶಿಷ್ಯರಿಗೆ|| ಬಾಳೆಯ ಫಲವನು ಕಾಳಗೆ ಕಾಣದೆ ಕಾಳಜಿಯಿಂದಲಿ ಸವಿರೆಲ್ಲ ಕಾಳನುವಿಲ್ಲದ್ ಸ್ಥಳವದುವಿಲ್ಲವು ಹೇಳಿದ ಸುಂದರ ಜಗಮಲ್ಲ|| ಬಚ್ಚಮ ತನಯನು ಕೆಚ್ಚೆದೆ ಶೂರನು ಹೆಚ್ಚಿತು ಕೀರ್ತಿಯು ಮನೆತನದು ರೊಚ್ಚಿಗೆ ಬರುವನು ಚುಚ್ಚುತ ವೈರಿಯ ಕೊಚ್ಚುತ ಚಣದಲಿ ಮಧಿಸುವನು|| ತಿಮ್ಮಪ್ಪ ವರನಿವ ತಿಮ್ಮಪ್ಪ ನಾಯಕ ಬಿಮ್ಮಿನ ಬೀರಪ್ಪ ಸುಪುತ್ರನು ಸುಮ್ಮನೆ ಕೆಣಕುವ ಹಮ್ಮಿನ ಹಗೆಗಿವ ಗುಮ್ಮನ ತರದಲಿ ಕಾಡುವನು || ರಾಮನ ಧಾನ್ಯದ ನೇಮವ ಪೊಗಳಿದ ಧಮಯಂತಿ ನಳರ ಕೃತಿರಚಿಸಿ ರಾಮನ ಭಕ್ತನು ತಾಮಸ ಗುಣದವ ನಾಮದಿ ಕನಕವ ನೀ ಗಳಿಸಿ|| ಶ್ರೀ ಈರಪ್ಪ...

ಕವನ: ವೃದ್ಧೆಯ ಮನಸ್ಸು

ಒಂದು ದಿನ ಮುಂಜಾನೆ ಹಗಲಿನಲ್ಲಿ ನನ್ನಪ್ಪನಿಗೆ ಉಪಾಹಾರ ತೆರುತ್ತಿರುವಾಗ ನನಗೊಬ್ಬ ವೃದ್ಧೆ ಕಾಣೆಸಿದಳು ಎಪ್ಪಾ ಬಾರೋ ನನಪ್ಪಾ ನನ್ನನ್ನು ಇಲ್ಲಿಂದ ಅಲ್ಲಿಗೆ ಕರೆದೊಯ್ದು ಕೂರಿಸು ಎಂದು ಮೇಲು ಧ್ವನಿಯಲ್ಲಿ ಕೆಳುತ್ತಾ ಕೆಮ್ಮುತ್ತಾ ಕೊರಗುತ್ತಿದ್ದಳು ಅದನ್ನು ನೋಡಿದ ಆ ವೃದ್ಧೆಯ ಸೋಸೆ ನಡಿಯಪ್ಪಾ ಈ ಹಣ್ಣಾದ ಮುದುಕಿಯ ಗೋಳು ಇಷ್ಟೇ ಎಂದು ಸನ್ನೆ ಮಾಡಿ ಹೇಳಿದಳು ಮನೆಯೊರಗಿನ ಕಟ್ಟೆಯ ಮೇಲೆ ಕುಳಿತಿರುವ ವೃದ್ಧೆಯ ಜೀವ ಅಳುಮುಖದಿ ಕರೆದು ಕರೆದು ಕೆಳುತ್ತಿರುವುದು ನನಗಾದ ನೋವು ಅಗಾಧ ನನಗಾಗ ಅನಿಸಿದ್ದು ಇಷ್ಟೇ ಈ ಕಾಲದ...

ಸಂಧ್ಯಾ ಸಮಯ

ಸುಂದರ ಸಂಜೆಯ ಪಡುವಣ ದಿಕ್ಕಿಗೆಮೂಡಿದೆ ಬೆರಗಿನ ಹೊಂಬಿಸಿಲು ಸಂಧ್ಯಾ ಕಾಲದಿ ಭೂರಮೆ ಅನುಪಮ ರೂಪವ ಧರಿಸುತ ಮೆರೆದಿಹಳು||ಮೆಲ್ಲನೆ ನೇಸರ ನಿದಿರೆಗೆ ಜಾರಲು ಅಂಬರ ಹೊದ್ದಿದೆ ಹೊಂಬಿಸಿಲು ಪ್ರೇಯಸಿ ಬಯಸಿದ ಪ್ರೇಮಿಯ ಹೃದಯವು ತಳಮಳಗೊಳ್ಳಲು ಮನಮುಗಿಲು||ದಿನಕರ ಮುಳುಗಲು ಧರೆಯಲಿ ಕವಿಯಿತು ಕಂಡಿಹ ಕನಸಿನ ಸವಿಗತ್ತಲು ಪ್ರಿಯಕರ ಪ್ರೇಮಿಯ ಹೃದಯವ ತಣಿಸಲು ಸುತ್ತಲು ಮೌನವು ಆವರಿಸಿತು||*ಶ್ರೀ_ಈರಪ್ಪ_ಬಿಜಲಿ*

ಕವನ: ರಾಧಾ ಕೃಷ್ಣರ ದಿವ್ಯ ಪ್ರೇಮ

ಸ್ನೇಹ ಎಂದೇ ನೀ ಸ್ನೇಹ ದಾಟಿ ಪ್ರೇಮವೆಂದೇ ನಾ ಪ್ರೀತಿಯ ಹೆಜ್ಜೆಗೆ ಸ್ನೇಹವೇ ಮೂಲಾಧಾರ ನನ್ನ ಭಾವ ತರಂಗದ ಮಾತೆಂದು ಮೌನಿಯಾದೆ ನಾ...... ಯಾರದೋ ಶಾಪಕ್ಕೆ ಮರೆತು ಹೊರಟೆಯಾ ನನ್ನ ನಿನ್ ಎದುರಲೇ ನಿಂತು ನಿನ್ನವನೆಂದು ನೆನಪಿಸುತಿಹೇ ನಾ ! ಕ್ರೋಧದಿ ತೋರುವ ಪ್ರೀತಿಯನ್ನು ನಿನ್ನಲ್ಲಿ ಕಂಡೆ ನಾ ನೀ ಮರೆತು ಮರೆಯಾದರು ಈ ಹೃದಯ ನಿನ್ನದೆಂದು ಮೌನಿಯಾಗಿಹೆ ನಾ ದುಃಖದ ಕಡಲಲಿ ಕೊನೆಯಾಯಿತು ನನ್ನ ಪ್ರೀತಿಯ ಪಯಣ ಪ್ರೀತಿ ಹುಟ್ಟಿತೆಂದು ಹೇಳಲಾರದೆ ನಿಂದೆ ನೀ ಕೊಳಲ...

ಭಕ್ತಿಗೀತೆ: ತುಳಸಿ ಲಗ್ನ

ತುಳಸಿ ಲಗ್ನ ತುಳಸಿ ಮಾತೆಯೆ ಸೌಖ್ಯದಾತೆಯೆ ಪ್ರಾತಃ ಕಾಲದಿ ಪೂಜಿಪೆ ನುತಿಸಿ ನಿನ್ನಯ ನಾಮಪಠಿಸುತ ಭಕ್ತಯಿಂದಲಿ ಧ್ಯಾನಿಪೆ|| ದೇವ ದಾನವ ಕ್ಷೀರ ಸಾಗರ ಮಥಿಸೊ ವೇಳೆಲಿ ಉದಿಸಿದೆ ವಿಷ್ಣು ತೋಷದಿ ಬಿದ್ದ ಬಾಷ್ಪವು ಸಸ್ಯ ಶ್ಯಾಮಲೆಯೆನಿಸಿದೆ || ಮೂಲ ತುಳಸಿಯೆ ಜನಿಸಿ ಬಂದಳು ಕೃಷ್ಣನೊರಿಸಿದ ರುಕ್ಮಿಣಿ ಉತ್ಥಾನದ್ವಾದಶಿ ದಿನದಿ ರುಕ್ಮಿಣಿ ಕೃಷ್ಣಗೊಲಿದಳು ಭಾಮಿನಿ|| ತಾಳಿ ಭಾಗ್ಯವ ಬೇಡಿ ಕಟ್ಟೆಯ ಹೆಣ್ಣು ಮಕ್ಕಳು ಸುತ್ತಲು ತಾಳಿ ಭಾಗ್ಯವು ಗಟ್ಟಿಗೊಳ್ಳಲು ಗೃಹಿಣಿ ಪ್ರದರ್ಶನ ಹಾಕಲು || ತುಳಸಿ ಲಗ್ನದ ದಿನದಿ...

ಜಲ ಷಟ್ಪದಿ: ರಾಮನ ಡೋಲಿನ ನಾದ

ಡೋಲು ಬಾರಿಸಿ ಹಾಲು ಕುಡಿದನು ಸೋಲನರಿಯದ ರಾಮನು| ಕಾಲ ಮೇಲೆಯೆ ಡೋಲನಿಕ್ಕುತ ಬಾಲ ಪಂದ್ಯವ ಗೆದ್ದನು|| ಅಂಗಿ ತೊಟ್ಟನು ರಂಗು ರಂಗಲಿ ಚಂಗು ಚಂಗನೆ ಹಾರುತ| ಭೃಂಗದಂತೆಯೆ ಶೃಂಗದಲ್ಲಿಯೆ ಹಂಗು ತೊರೆದು ಬಡಿಯುತ|| ಎಣಿಕೆ ಮಾಡಲು ಗುಣಿಕೆ ಬಡಿತವ ತಣಿಸಿ ಮನವದು ನಾದವು| ಉಣಿಸಿ ಗೀತವು ಕುಣಿಸಿ ಹೃದಯವ ದಣಿಯದಂತಹ ಮೇಳವು|| ಚಿಕ್ಕ ಮಕ್ಕಳು ನಕ್ಕು ನಗುತಲಿ ಹೊಕ್ಕು ಬಡಿದರು ಡೋಲನು| ರೆಕ್ಕೆ ಬಡಿಯುವ ಹಕ್ಕಿಯಂತೆಯೆ ಚುಕ್ಕೆಯಾದನು ರಾಮನು|| ಪುಳಕಗೊಳ್ಳಲು ತಳುಕ ತೋರುತ ಚುಳುಕ ಗುಣಿಯ ಗತ್ತಲಿ| ಹುಳುಕುಯಿರದಾ ಸೆಳೆದು ಮನವನು ಕಳೆಯ ಹೆಚ್ಚಿಸಿ ಡೋಲಲಿ|| ಕೆಚ್ಚಿನೆದೆಯಲಿ ಮೆಚ್ಚಿ ವೀರನ ತುಚ್ಛ ಕಂಡರು ಕೆಲವರು| ಹುಚ್ಚನೆಬ್ಬಿಸಿ ಹುಚ್ಚನಾಗಿಸಿ ನಿಚ್ಚ ಮನವನ್ನರಿತರು|| ಮೇಳ ಸದ್ದನು ಕೇಳಿಯೆದ್ದನು ಢಾಳ ಬಣ್ಣದ ಬಸವನು| ತಾಳ...

ಭಕ್ತಿಗೀತೆ: ನರಸಿಂಹ

ನರಸಿಂಹ ನಮೋ ನಮೋ ನರಸಿಂಹ ನಮ್ಮ ಸಲವೊ ನರಸಿಂಹ ಬವಣೆ ನೀಗೊ ನರಸಿಂಹ ಶರಣು ಬಂದೆ ನರಸಿಂಹ|| ದೀನ ನಾನು ನರಸಿಂಹ ಮಾನ ಕಾಯೊ ನರಸಿಂಹ ನಾಮ ನುಡಿವೆ ನರಸಿಂಹ ಮೇಘ ಶಾಮ ನರಸಿಂಹ|| ಭಕ್ತ ಪ್ರೀಯ ನರಸಿಂಹ ಶಕ್ತಗೊಳಿಸೊ ನರಸಿಂಹ ಯುಕ್ತಿ ತಾರೊ ನರಸಿಂಹ ಮುಕ್ತಿ ನೀಡೊ ನರಸಿಂಹ|| ಕಮಲ ನಯನ ನರಸಿಂಹ ವಿಮಲ ವದನ ನರಸಿಂಹ ಲಕುಮಿ ರಮಣ ನರಸಿಂಹ ನಮಿಪೆ ನಿತ್ಯ ನರಸಿಂಹ || ಬಾಳು ಗೋಳು ನರಸಿಂಹ ಪಾರು ಮಾಡೊ ನರಸಿಂಹ ಕರುಣೆ ತೋರೊ ನರಸಿಂಹ ಚರಣ...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group